ಬಿರುಗಾಳಿ ಹಾನಿಗೆ ಪರಿಹಾರದ ಭರವಸೆ
ಇಳಕಲ್: ಬಿರುಗಾಳಿಯಿಂದ ತೊಂದರೆಗೊಳಗಾದ ಕಂದಗಲ್ಲ ರಸ್ತೆಯ ನೇಕಾರ ಬಡಾವಣೆಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ, ಅಲ್ಲಿನ ನಿವಾಸಿಗಳಿಗೆ ಸರಕಾರದಿಂದ ಸೂಕ್ತ ನೆರವು ಒದಗಿಸುವ ಭರವಸೆ ನೀಡಿದರು. ಕೆಲವು ದಿನಗಳ ಹಿಂದೆ...
View Articleಪಕ್ಷದ ಗೆಲುವಿಗೆ ಶ್ರಮಿಸಿ : ನಿರಾಣಿ
ಶಿರೂರ: ಬಿಜೆಪಿ ಯುವ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ಮಾಡಿ ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವುದರೊಂದಿಗೆ ಪಕ್ಷ ದ ಗೆಲುವಿಗೆ ಶ್ರಮಿಸಬೇಕೆಂದು ವಿಧಾನ ಪರಿಷತತ್ ಚುನಾವಣೆಯ ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...
View Articleಬೀದಿಗೆ ಬಿದ್ದ ಕಟ್ಟಡ ಕಾರ್ಮಿಕರು
ಬಾಗಲಕೋಟ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಸಹ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು ಉದ್ಯೋಗವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಜಿಲ್ಲಾ ಕಟ್ಟಡ...
View Articleಪ್ರಭಾವಿಗಳ ಪ್ರತಾಪಕ್ಕೆ ಸಿಲುಕಿ ಹದಗೆಟ್ಟ ಹೈ ವೇ !
ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಇಲ್ಲಿನ ಮುಧೋಳ-ನಿಪ್ಪಾಣಿ ಹೆದ್ದಾರಿ ಕಾಮಗಾರಿ ಯಾವ ಮುಹೂರ್ತದಲ್ಲಿ ಆರಂಭವಾಯಿತೋ ಗೊತ್ತಿಲ್ಲ. ಕಳೆದ ಒಂದು ವರ್ಷದಿಂದ ಒಂದಲ್ಲ ಒಂದು ಎಡವಟ್ಟಿನಿಂದ ಸಾರ್ವಜನಿಕರಿಗೆ ತೊಂದರೆ ಕೊಡುತ್ತಲೇ ಇದೆ. ತುಂಬಾ ವರ್ಷಗಳಿಂದ...
View Articleವಾದ್ರಾ ‘ಬಂಗಲೆ’ಯಲ್ಲಿ ಕಾಂಗ್ರೆಸ್-ಬಿಜೆಪಿ ಫೈಟ್
ಹೊಸದಿಲ್ಲಿ: ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿ ರಾಬರ್ಟ್ ವಾದ್ರಾಗೆ ಲಂಡನ್ನಲ್ಲಿ ತೆಗೆಸಿಕೊಟ್ಟಿದ್ದಾರೆ ಎಂದು ಹೇಳಲಾದ 19 ಕೋಟಿ ರೂ. ಮೌಲ್ಯದ 'ಬೇನಾಮಿ ಬಂಗಲೆ' ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಜಟಾಪಟಿಯ ಕಣವಾಗಿದೆ....
View Articleಶಹೆನ್ಷಾ ವರ್ಸಸ್ ಮಹಾರಾಣಿ
ಮೋದಿ ಈ ದೇಶದ ಪ್ರಧಾನಿ, ಸಾಮ್ರಾಟ್ ಅಲ್ಲ ಎಂದ ಸೋನಿಯಾಗೆ ಬಿಜೆಪಿ ತಿರುಗೇಟು ಹೊಸದಿಲ್ಲಿ: ಎರಡನೇ ವರ್ಷಾಚರಣೆ ನಡೆಸುತ್ತಿರುವ ಎನ್ಡಿಎ ಸರಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನರೇಂದ್ರ ಮೋದಿ...
View Articleವೈದ್ಯರ ನಿವೃತ್ತಿ ವಯಸ್ಸು 65ಕ್ಕೆ ಏರಿಕೆ; ಕೇಂದ್ರ ಒಪ್ಪಿಗೆ
ಹೊಸದಿಲ್ಲಿ: ವೈದ್ಯರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಮಂಗಳವಾರದಿಂದಲೇ ಇದು ಜಾರಿಗೆ ಬಂದಿದೆ. ಸರಕಾರದಿಂದ ಈ ಅನುಮೋದನೆಯಿಂದ ಕೇಂದ್ರ ಸರಕಾರಿ ಸೇವೆಯಲ್ಲಿರುವ ವೈದ್ಯರ...
View Articleಸರಕಾರಿ ಕಚೇರಿಗಳಿಗಿನ್ನು ಸ್ಮಾರ್ಟ್ಫೋನ್ ನೀತಿ
ಹೊಸದಿಲ್ಲಿ: ಪಾಕಿಸ್ತಾನ ಮತ್ತು ಚೀನಾದ ಹ್ಯಾಕರ್ಗಳಿಂದ ಭಾರತದ ಗೌಪ್ಯ ಮಾಹಿತಿ ಕಳವು ಪ್ರಕರಣದ ಬೆನ್ನಲ್ಲೇ, ಸರಕಾರ ಕೆಲ ಇಲಾಖೆಗಳ ಸಿಬ್ಬಂದಿಗೆ ಸ್ಮಾರ್ಟ್ಫೋನ್ ನೀತಿ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ಸರಕಾರಿ ಕಚೇರಿಯಲ್ಲಿ...
View Articleಕನ್ಯತ್ವ ಪರೀಕ್ಷೇಲಿ ಪತ್ನಿ ಫೇಲ್: ವಿಚ್ಛೇದನ ನೀಡಿದ ಪತಿ
ಮುಂಬಯಿ/ನಾಸಿಕ್: ಕನ್ಯತ್ವ ಪರೀಕ್ಷೆಯಲ್ಲಿ ನವವಿವಾಹಿತ ಪತ್ನಿ ಫೇಲ್ ಆಗಿದ್ದಾಳೆ ಎಂದು ದೂರಿದ ಪತಿ ಮದುವೆಯಾದ 48 ತಾಸಿನಲ್ಲೇ ಆಕೆಗೆ ವಿಚ್ಚೇದನ ನೀಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನವವಿವಾಹಿತೆ ಕನ್ಯೆ ಅಲ್ಲ ಎಂದು...
View Articleದಿಲ್ಲಿಯಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಹೊಸದಿಲ್ಲಿ: ದಿಲ್ಲಿ ಹೊರವಲಯದ ಕಿರಾರಿ ಪ್ರದೇಶದ ಮನೆಯ ಬಳಿಯಿಂದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿರುವ ದುಷ್ಕರ್ಮಿ ಭೀಕರ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಕಳೆದ ಶುಕ್ರವಾರ...
View Articleಥಾಯ್ಲೆಂಡ್ ಮ್ಯಾರಥಾನ್ಗೆ ಹೊರಟಿರುವ ಬಾಲಕನಿಗೆ HIV ಅಕ್ಷರಗಳಷ್ಟೇ
ಬೆಂಗಳೂರು: 40 ನಿಮಿಷಗಳಲ್ಲಿ 10 ಕಿ.ಮೀ. ಓಡಬಲ್ಲೆ ಎಂದು 15 ವರ್ಷದ ಬಾಲಕ ಬಾಬು ಸೀನಪ್ಪ ಹೇಳಿದಾಗ, ಆತನ ಅಜ್ಜಿ ತಾತನಿಗೆ ಅಚ್ಚರಿ. 'ಹಾಗದರೆ ಬಸ್ಸಿಗಿಂತ ವೇಗವಾಗಿ ಓಡಲು ಸಾಧ್ಯವೇ ?' ಎಂಬುದು ಮೊಮ್ಮಗನ ಮಾತು ನಂಬಲಾರದ ಅಜ್ಜಿ, ತಾತನ ಪ್ರಶ್ನೆ....
View Articleಸಯೀದ್ಗೆ ಹಜರತ್ ಅಲಿ, ಬಜರಂಗಿ ಬೇರೆಯಲ್ಲ
ಲಖನೌ: ಹುಟ್ಟಿನಿಂದ ಮುಸ್ಲಿಮ್ ಆಗಿರುವ ಲಖನೌ ನಿವಾಸಿ ಮೀ ತ್ ಸಯೀದ್ ಕೈಸರ್ ರಜ್ಹಾಗೆ ಹಜರತ್ ಅಲಿ ಮತ್ತು ಬಜರಂಗಿ ಬಲಿ ಬೇರೆಯಲ್ಲ. ಅವರ ಪ್ರಕಾರ ಅಲಿ ಮತ್ತು ಬಜರಂಗಿ ಅವರವರ ದಾರಿಯಲ್ಲಿ ಬಹಳ ಪ್ರಭಾವಿಗಳು. ಸಯೀದ್ ಅವರು ಈದ್, ರಮ್ಜಾನ್ ಆಚರಣೆ...
View Articleಕೋಲ್ಕೊತಾ: ಪ್ರಣಾಳ ಶಿಶುವಲ್ಲಿ ಗಂಡು ಭ್ರೂಣಕ್ಕೆ ಬೇಡಿಕೆ
ಕೋಲ್ಕೊತಾ: ಸಹಜ ರೀತಿಯಲ್ಲಿ ಮಗುವನ್ನು ಪಡೆಯಲು ಸಾಧ್ಯವಿಲ್ಲದ ನಗರ ಪ್ರದೇಶಗಳ ದಂಪತಿ ಪ್ರಣಾಳ ಶಿಶು ಮೊರೆ ಹೋಗುತ್ತಾರೆ. ಇದು ಮಗು ಪಡೆಯಲು ಜನಪ್ರಿಯ ವಿಧಾನವಾಗಿದ್ದರೂ ಕೋಲ್ಕೊತಾದಲ್ಲಿ ಈ ವಿಧಾನದಲ್ಲಿ ಗಂಡು ಮಗುವನ್ನೇ ಪಡೆಯುವ ಪ್ರವೃತ್ತಿ...
View Articleಸಂವಿಧಾನ ಸಾಕ್ಷಿಯಾಗಿ ಮದುವೆಯಾದ ಎವರೆಸ್ಟ್ ಆರೋಹಿ
ಪುಣೆ: ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತದ ಸಂವಿಧಾನದ ಮುನ್ನುಡಿ ಓದುವ ಮೂಲಕ ಸಂವಿಧಾನವನ್ನು ಸಾಕ್ಷಿಯಾಗಿರಿಸಿಕೊಂಡು ಮದುವೆಯಾಗಿ ಮಹಾರಾಷ್ಟ್ರದ ಆನಂದ್ ಬಾನ್ಸೊದೆ ಹೊಸ ದಾಖಲೆ ಮಾಡಿದ್ದಾರೆ. ಎವರೆಸ್ಟ್ ಆರೋಹಿಯೂ ಆಗಿರುವ ಇವರು ಸಂವಿಧಾನದ...
View Articleಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ
ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದಾಸರಹಳ್ಳಿ ನಿವಾಸಿ ಜಯಸೂರ್ಯ(38) ಎಂಬಾತನನ್ನು ಪೊಲೀಸರು...
View Articleಅರಸು ಜೀವನ ಆಧರಿಸಿ ಸಿನಿಮಾ ತಯಾರಿಕೆ : ಆಂಜನೇಯ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಜೀವನ ಚರಿತ್ರೆ ಆಧರಿತ ಸಿನಿಮಾ ತಯಾರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಸಭೆ ನಡೆಸಿದ ಬಳಿಕ...
View Articleಪ್ರತಿಭಟನೆ ಮೇಲೆ ಎಸ್ಮಾ ನೆರಳು; ಅಧಿಕಾರಿಗಳಿಂದ ಮನವೊಲಿಕೆ
ಪೊಲೀಸರ ಪ್ರತಿಭಟನೆ ಹತ್ತಿಕ್ಕಲು ಸರಕಾರ ಎಸ್ಮಾ ಕಾಯಿದೆಯನ್ನು ಪ್ರಯೋಗಿಸುವ ಎಚ್ಚರಿಕೆ ನೀಡುತ್ತಿದ್ದಂತೆ ರಾಜ್ಯಾದ್ಯಂತ ಪೊಲೀಸರು ತಾವು ನೀಡಿದ್ದ ರಜೆ ಚೀಟಿಗಳನ್ನು ವಾಪಸು ಪಡೆಯಲು ಆರಂಭಿಸಿದ್ದಾರೆ. ಕೆಲವು ಕಡೆ ಹಿರಿಯ ಅಧಿಕಾರಿಗಳು, ಪ್ರತಿಭಟನೆ...
View Articleಇಂದು ರಾಜ್ಯ ಸರಕಾರಿ ನೌಕರರ ಮುಷ್ಕರ
-ಸರಕಾರಿ ಆಡಳಿತಯಂತ್ರ ಸಂಪೂರ್ಣ ಸ್ಥಗಿತ ಸಂಭವ- ಸರಕಾರಿ ನೌಕರರ ಬೇಡಿಕೆ ಏನು? ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆ ನೀಡಬೇಕು ಎಂಬ ಏಕೈಕ ಬೇಡಿಕೆ. ಎಷ್ಟು ಮಂದಿ ಭಾಗಿ? - 84 ಇಲಾಖೆಗಳ 6.40 ಲಕ್ಷ ನೌಕರರು ಮುಷ್ಕರದಲ್ಲಿ...
View Articleರಾಜ್ಯಸಭೆ: ಕುದುರೆ ವ್ಯಾಪಾರದ ನೆರಳು
-ಕಾಂಗ್ರೆಸ್ ಶಾಸಕರ ಮೇಲೆ ಗುಪ್ತಚರ ಇಲಾಖೆ ಕಣ್ಣು - ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಭೀತಿ ಮೂರು ಪಕ್ಷಗಳಿಗೂ ಕಾಡತೊಡಗಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ-ಪ್ರತಿ...
View Articleಒಂಟಿ ಮಹಿಳೆ ಹತ್ಯೆ: ಚಿನ್ನಾಭರಣ ಲೂಟಿ
-ಪರಿಚಯಸ್ಥರಿಂದಲೇ ಕೃತ್ಯ ಶಂಕೆ ಬೆಂಗಳೂರು: ಒಂಟಿ ಮಹಿಳೆಯನ್ನು ಹತ್ಯೆ ಮಾಡಿ ಮೈಮೇಲಿದ್ದ ಒಡವೆಗಳನ್ನು ದೋಚಿರುವ ಘಟನೆ ರಾಜರಾಜೇಶ್ವರಿನಗರ 3ನೇ ಹಂತದ ಬಿಇಎಲ್ ಲೇಔಟ್ನಲ್ಲಿ ನಡೆದಿದೆ. ಬಿಇಎಲ್ ಲೇಔಟ್ ನಿವಾಸಿ ಲಕ್ಷ್ಮಿ(65) ಕೊಲೆಯಾದ ಮಹಿಳೆ....
View Article