Quantcast
Channel: VijayKarnataka
Viewing all articles
Browse latest Browse all 6795

ಒಂಟಿ ಮಹಿಳೆ ಹತ್ಯೆ: ಚಿನ್ನಾಭರಣ ಲೂಟಿ

$
0
0

-ಪರಿಚಯಸ್ಥರಿಂದಲೇ ಕೃತ್ಯ ಶಂಕೆ
ಬೆಂಗಳೂರು: ಒಂಟಿ ಮಹಿಳೆಯನ್ನು ಹತ್ಯೆ ಮಾಡಿ ಮೈಮೇಲಿದ್ದ ಒಡವೆಗಳನ್ನು ದೋಚಿರುವ ಘಟನೆ ರಾಜರಾಜೇಶ್ವರಿನಗರ 3ನೇ ಹಂತದ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ.

ಬಿಇಎಲ್ ಲೇಔಟ್ ನಿವಾಸಿ ಲಕ್ಷ್ಮಿ(65) ಕೊಲೆಯಾದ ಮಹಿಳೆ. ಮೂರು ವರ್ಷಗಳ ಹಿಂದೆ ಈಕೆಯ ಪತಿ ನಿವೃತ್ತ ಬಿಇಎಲ್ ಉದ್ಯೋಗಿ ಸತ್ಯನಾರಾಯಣ ಅವರು ಮೃತಪಟ್ಟ ನಂತರ ಅದೇ ನಿವಾಸದಲ್ಲಿ ಒಂಟಿಯಾಗಿ ನೆಲೆಸಿದ್ದರು. ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ಹಂತಕರು ಲಕ್ಷ್ಮಿ ಅವರ ಬಾಯಿಗೆ ಟೇಪ್ ಸುತ್ತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಲಕ್ಷ್ಮಿ , ನಿತ್ಯ ಬೆಳಗ್ಗೆ 8.30ರ ಸುಮಾರಿಗೆ ಪಕ್ಕದ ಮನೆಯವರನ್ನು ಮಾತಾಡಿಸಲು ಬರುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ 10.30 ಆದರೂ ಬಾರದಿದ್ದಾಗ ಪಕ್ಕದ ಮನೆಯವರೇ ಲಕ್ಷ್ಮಿ ಅವರ ಮನೆಗೆ ನೋಡಿದಾಗ, ಅಡುಗೆ ಮನೆಯಲ್ಲಿ ಭೀಕರವಾಗಿ ಹತ್ಯೆಯಾದ ಲಕ್ಷ್ಮಿ ಅವರ ಮೃತದೇಹವನ್ನು ಕಂಡು ಜೋರಾಗಿ ಕಿರುಚಿಕೊಂಡರು. ನಂತರ ಅಕ್ಕಪಕ್ಕದವರು ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಗ ಕೋರಮಂಗಲದಲ್ಲಿ ನೆಲೆಸಿದ್ದರೆ ಮಗಳು ಆಂಧ್ರದ ವಿಶಾಖಪಟ್ಟಣಂನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪರಿಚಯಸ್ಥರದ್ದೇ ಕೃತ್ಯ: ಶಂಕೆ

ಲಕ್ಷ್ಮಿ ಅವರನ್ನು ಮಂಗಳವಾರ ರಾತ್ರಿ ಹತ್ಯೆಗೈಯಲಾಗಿದೆ. ಮನೆಯ ಬಾಗಿಲನ್ನು ಬಲವಂತವಾಗಿ ತೆರೆದ ಕುರುಹುಗಳಿಲ್ಲ. ಅಲ್ಲದೆ ಹತ್ಯೆ ನಡೆದಿರುವುದು ಅಡುಗೆ ಮನೆಯಲ್ಲಿ. ಪರಿಚಯಸ್ಥರೇ ಮನೆಯೊಳಗೆ ಪ್ರವೇಶಿಸಿದ್ದು, ಅವರಿಗೆ ಕಾಫಿ ಅಥವಾ ಟೀ ಮಾಡಲು ಲಕ್ಷ್ಮಿ ಅಡುಗೆ ಮನೆಗೆ ಹೋದ ಸಂದರ್ಭದಲ್ಲೇ ಹಿಂದಿನಿಂದ ಅವರ ತಲೆಗೆ ಹೊಡೆದು, ಬಾಯಿಗೆ ಟೇಪ್ ಸುತ್ತಿ ಹತ್ಯೆ ನಡೆಸಿರುವ ಸಾಧ್ಯತೆಗಳಿವೆ. ಲಕ್ಷ್ಮಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಬಳೆಗಳು ಕಾಣೆಯಾಗಿರುವುದು ಬಿಟ್ಟರೆ ಬೇರೆ ವಸ್ತುಗಳ ಕಳ್ಳತನವಾಗಿಲ್ಲ. ಕೌಟುಂಬಿಕ ಕಲಹವೇನಾದರೂ ಇತ್ತೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಲಕ್ಷ್ಮಿ ಅವರನ್ನು ಮಾತಾಡಿಸಲು ಮನೆಗೆ ಪದೇಪದೆ ಬರುತ್ತಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬದವರಿಂದಲೂ ವಿವರಗಳನ್ನು ಪಡೆಯುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.

-----

ಲಕ್ಷ್ಮೀ ಅವರನ್ನು ಕೊಲೆ ಮಾಡಿ ಅವರ ಮೈ ಮೇಲಿದ್ದ ಚಿನ್ನದ ಸರ ಹಾಗೂ ಓಲೆಗಳು ನಾಪತ್ತೆಯಾಗಿವೆ. ಮನೆಯಲ್ಲಿದ್ದ ಬೇರ‌್ಯಾವುದೇ ವಸ್ತುಗಳು ಕಳುವಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ.

-ಅಜಯ್ ಹಿಲೋರಿ-ಡಿಸಿಪಿ, ಪಶ್ಚಿಮ ವಿಭಾಗ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>