Quantcast
Channel: VijayKarnataka
Viewing all articles
Browse latest Browse all 6795

ಸರಕಾರಿ ಕಚೇರಿಗಳಿಗಿನ್ನು ಸ್ಮಾರ್ಟ್‌ಫೋನ್‌ ನೀತಿ

$
0
0

ಹೊಸದಿಲ್ಲಿ: ಪಾಕಿಸ್ತಾನ ಮತ್ತು ಚೀನಾದ ಹ್ಯಾಕರ್‌ಗಳಿಂದ ಭಾರತದ ಗೌಪ್ಯ ಮಾಹಿತಿ ಕಳವು ಪ್ರಕರಣದ ಬೆನ್ನಲ್ಲೇ, ಸರಕಾರ ಕೆಲ ಇಲಾಖೆಗಳ ಸಿಬ್ಬಂದಿಗೆ ಸ್ಮಾರ್ಟ್‌ಫೋನ್‌ ನೀತಿ ಜಾರಿಗೊಳಿಸಿದೆ.

ಈ ನಿಯಮದ ಪ್ರಕಾರ ಸರಕಾರಿ ಕಚೇರಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡುವುದು, ಕಚೇರಿಯಲ್ಲಿ ಮೊಬೈಲ್‌ ಬ್ಯಾಟರಿ ಚಾರ್ಜ್‌ ಮಾಡುವುದು ಇನ್ನು ಮುಂದೆ ನಿಷಿದ್ಧವಾಗಲಿದೆ. ಜತೆಗೆ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಹಿರಿಯ ಅಧಿಕಾರಿಗಳಿಂದ ಒಪ್ಪಿಗೆ ಪಡೆಯುವುದೂ ಅನಿವಾರ್ಯವಾಗಲಿದೆ.

ಅಷ್ಟೇ ಅಲ್ಲ, ಪ್ರಮುಖ ಸಭೆಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬಳಕೆ ಮಾಡುವುದು, ಫೊಟೊ ಮತ್ತು ವಿಡಿಯೊ ಸೆರೆ ಹಿಡಿಯುವುದು, ಸೂಕ್ಷ್ಮ ಮಾಹಿತಿ ಅಥವಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.

ಮುಖ್ಯವಾಗಿ ಗುಪ್ತಚರ, ರಕ್ಷಣಾ ಮತ್ತು ಕೇಂದ್ರೀಯ ಶಸಸ್ತ್ರ ಪೊಲೀಸ್‌ ಪಡೆ ಸೇರಿದಂತೆ ಹಲವು ಇಲಾಖೆಗಳಿಗೆ ಈ 'ಸ್ಮಾರ್ಟ್‌ಫೋನ್‌' ನಿಯಮ ಅನ್ವಯವಾಗಲಿದೆ.

''ಇದಕ್ಕಾಗಿ ಸೈಬರ್‌ ತಜ್ಞರ ನೆರವನ್ನೂ ಸರಕಾರ ಪಡೆದಿದ್ದು, ಈಗಾಗಲೇ ಸರಕಾರಿ ಕಚೇರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಮುಖ್ಯವಾಗಿ ಗುಪ್ತಚರ ಮಾಹಿತಿ ಕಲೆಹಾಕುವ ಇಲಾಖೆಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಕಳವು:

''ಟಾಪ್‌ ಗನ್‌, ಟಾಕಿಂಗ್‌ ಫ್ರಾಗ್‌, ಮುಂತಾದ ಹೆಸರಿನ ಮೊಬೈಲ್‌ ಆ್ಯಪ್‌ಗಳ ರೂಪದಲ್ಲಿ 'ಮಾಲ್‌ವೇರ್‌' ಕಳುಹಿಸುವ ಮೂಲಕ ಪಾಕಿಸ್ತಾನದ ಗುಪ್ತಚರ ಇಲಾಖೆ ಭಾರತದ ಭದ್ರತಾ ಪಡೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದೆ'' ಎಂದು ಮೇ 3ರಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹರಿಭಾಯ್‌ ಪಾರ್ತಿಭಾಯ್‌ ಚೌಧರಿ ಅವರು ಲೋಕಸಭೆಗೆ ಮಾಹಿತಿ ನೀಡಿದ್ದರು.

ಹೊಸ ನಿಯಮ ಏನು ಹೇಳುತ್ತದೆ?

* ಕಚೇರಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು, ಕಂಪ್ಯೂಟರ್‌ಗೆ ಕನೆಕ್ಟ್ ಮಾಡುವುದು, ಫೊಟೊ-ವಿಡಿಯೋ ಚಿತ್ರೀಕರಣ, ಮೀಟಿಂಗ್‌ನಲ್ಲಿ ಸೆಲ್‌ಫೊನ್‌ ಬಳಕೆ ನಿಷಿದ್ಧ

* ಮೊಬೈಲ್‌ ಖರೀದಿಗೂ ಮುನ್ನ ಹಿರಿಯ ಅಧಿಕಾರಿಯಿಂದ ಅನುಮತಿ ಪಡೆಯಬೇಕು

* ಮೊಬೈಲ್‌ ಹೆಸರು ಮತ್ತು ಮಾಡೆಲ್‌, ಸಿಬ್ಬಂದಿ ಹೆಸರು ಇತ್ಯಾದಿ ಸಮಗ್ರ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಿ ಅನುಮೋದನೆ ಪಡೆಯಬೇಕು

ಪಾಕ್‌ ಬಳಸುವ ಮಾಲ್‌ವೇರ್‌ಗಳು

* ಟಾಪ್‌ ಗನ್‌ (ಗೇಮ್‌ ಆ್ಯಪ್‌)

* ಮ್ಯೂಸಿಕ್‌ ಆ್ಯಪ್‌

* ವಿಡಿಯೊ ಆ್ಯಪ್‌

* ಟಾಕಿಂಗ್‌ ಫ್ರಾಗ್‌ (ಮನರಂಜನೆ ಆ್ಯಪ್‌)


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>