Quantcast
Channel: VijayKarnataka
Viewing all articles
Browse latest Browse all 6795

ವಾದ್ರಾ ‘ಬಂಗಲೆ’ಯಲ್ಲಿ ಕಾಂಗ್ರೆಸ್‌-ಬಿಜೆಪಿ ಫೈಟ್‌

$
0
0

ಹೊಸದಿಲ್ಲಿ: ಶಸ್ತ್ರಾಸ್ತ್ರ ಡೀಲರ್‌ ಸಂಜಯ್‌ ಭಂಡಾರಿ ರಾಬರ್ಟ್‌ ವಾದ್ರಾಗೆ ಲಂಡನ್‌ನಲ್ಲಿ ತೆಗೆಸಿಕೊಟ್ಟಿದ್ದಾರೆ ಎಂದು ಹೇಳಲಾದ 19 ಕೋಟಿ ರೂ. ಮೌಲ್ಯದ 'ಬೇನಾಮಿ ಬಂಗಲೆ' ಇದೀಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಜಟಾಪಟಿಯ ಕಣವಾಗಿದೆ. ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ತನ್ನ ಅಳಿಯನ ಪರ ಬಲವಾಗಿ ನಿಂತಿದ್ದು, ಈ ಆರೋಪ ಕಾಂಗ್ರೆಸ್‌ ವಿರೋಧಿ ಸಂಚಿನ ಒಂದು ಭಾಗ ಎಂದು ಹೇಳಿದ್ದರೆ, ಬಿಜೆಪಿ ಅತ್ತೆಯ ಕೃಪಾಶೀರ್ವಾದವಿಲ್ಲದೆ ವಾದ್ರಾ ಇಷ್ಟೊಂದು ಸಂಪತ್ತು ಕ್ರೋಢೀಕರಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದೆ.

.....

ಕಾಂಗ್ರೆಸ್‌ ಮುಕ್ತ ಭಾರತಕ್ಕಾಗಿ ಈ ಸಂಚು: ಸೋನಿಯಾ

ರಾಬರ್ಟ್‌ ವಾದ್ರಾ ಮೇಲೆ ಮಾಡಿರುವ ಆರೋಪ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಿಸುವ ಪ್ರಯತ್ನದಲ್ಲಿ ಸುಳ್ಳು ಆರೋಪಗಳನ್ನು ಹೊರಿಸುವ ಸಂಚಿನ ಒಂದು ಭಾಗ ಎಂದು ಸೋನಿಯಾ ಗಾಂಧಿ ವ್ಯಾಖ್ಯಾನಿಸಿದ್ದು, ಸರಕಾರ ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಲಿ ಎಂದು ಸವಾಲು ಹಾಕಿದ್ದಾರೆ.

ತನ್ನ ಸಂಸದೀಯ ಕ್ಷೇತ್ರ ಬರೇಲಿಗೆ ಭೇಟಿ ನೀಡಿದ ವೇಳೆ ಪತ್ರಕರ್ತರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಕ್ತ ಭಾರತಕ್ಕಾಗಿ ಇದೊಂದು ಸಂಚು. ಪ್ರತಿ ದಿನವೂ ಅವರು ಒಂದೊಂದು ಹೊಸ ಆರೋಪ ಮಾಡುತ್ತಾರೆ. ನಿಜಕ್ಕೂ ಏನಾದರೂ ಇದ್ದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಸೋನಿಯಾ ಹೇಳಿದರು.

ರಾಬರ್ಟ್‌ ವಾದ್ರಾ ಎಲ್ಲ ಅಕ್ರಮಗಳಿಗೆ

ಅತ್ತೆ - ಬಾವನ ಆಶೀರ್ವಾದ: ಬಿಜೆಪಿ

ಹೊಸದಿಲ್ಲಿ: ರಾಬರ್ಟ್‌ ವಾದ್ರಾ ಅವರು ಲಂಡನ್‌ನಲ್ಲಿ ಬೇನಾಮಿ ಬಂಗಲೆ ಹೊಂದಿದ್ದಾರೆ ಎಂಬ ಆರೋಪ ಬಂದಾಗಲೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮರ್ಥನೆ ಮಾಡುವುದು ನೋಡಿದರೆ, ವಾದ್ರಾ ಏನೇ ಮಾಡಿದರೂ ಕಾಂಗ್ರೆಸ್‌ ಅದನ್ನು ಬೆಂಬಲಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ಹೇಳಿದೆ.

''ವಾದ್ರಾಗೆ ಜನಪಥ ರಸ್ತೆಯ ಹತ್ತನೇ ಮನೆಯ ಆಶೀರ್ವಾದವಿದೆ. ಹಾಗಾಗಿಯೇ ಅವರು ಇಷ್ಟೊಂದು ಸಂಪಾದನೆ ಮಾಡಿದ್ದು. ಅವರನ್ನು ಒಬ್ಬ ಖಾಸಗಿ ನಾಗರಿಕ ಎಂದು ಹೇಳಲಾಗದು. ಅವರು ಏನೆಲ್ಲ ಮಾಡಿದ್ದಾರೋ ಅದಕ್ಕೆಲ್ಲ ಸೋನಿಯಾ ಗಾಂಧಿ (ಅತ್ತೆ) ಮತ್ತು ರಾಹುಲ್‌ ಗಾಂಧಿ (ಬಾವ)ನ ಕೃಪಾಕಟಾಕ್ಷವಿದೆ'' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ ಹೇಳಿದರು.

''ವಾದ್ರಾ ಅವರನ್ನು ಗಾಂಧಿ ಕುಟುಂಬದಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವೇ ಇಲ್ಲ. ಸೋನಿಯಾ ಅವರು ಬಹಿರಂಗ ಬೆಂಬಲ ನೀಡುತ್ತಿರುವುದು ನಮ್ಮ ಆರೋಪಗಳನ್ನು ಪುಷ್ಟೀಕರಿಸಿದೆ'', ಎಂದಿದ್ದಾರೆ ಶರ್ಮಾ.

....

ತನಿಖೆಗೆ ವೇಗ: ಸ್ವಾಮಿ ಆಗ್ರಹ

ಬೀಜಿಂಗ್‌: ವಾದ್ರಾ ಅವರ ಬೇನಾಮಿ ಬಂಗಲೆ ಬಗ್ಗೆ ಆಗಲೇ ಅನುಷ್ಠಾನ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಗೆ ವೇಗ ನೀಡಬೇಕು ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿದ್ದಾರೆ. ವಾದ್ರಾ ಲಂಡನ್‌ನಲ್ಲಿ ಬೇನಾಮಿ ಆಸ್ತಿ ಹೊಂದಿರುವುದರಲ್ಲಿ ಸಂಶಯವೇ ಇಲ್ಲ. ನಿರ್ದೇಶನಾಲಯ ತನಿಖೆ ನಡೆಸಿ ಯಾವಾಗ ಸಮನ್ಸ್‌ ಹೊರಡಿಸುತ್ತದೆ ಎನ್ನುವುದಷ್ಟೇ ಕಾದು ನೋಡಬೇಕಾದ್ದು ಎಂದು ಮಾನಸ ಸರೋವರ ಯಾತ್ರೆ ದಾರಿಯಲ್ಲಿ ಹೇಳಿದರು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್