Quantcast
Channel: VijayKarnataka
Viewing all articles
Browse latest Browse all 6795

ವಾರ್ನಿಂಗ್ ಬೆಲ್ಸ್? 251 ರೂ.ನ ಸ್ಮಾರ್ಟ್‌ಫೋನಿನ್ನೂ ತಯಾರಾಗಿಯೇ ಇಲ್ಲ

$
0
0

ನೋಯ್ಡಾ: 'ರಿಂಗಿಂಗ್ ಬೆಲ್ಸ್‌'ನ 'ಫ್ರೀಡಂ 251' ಸ್ಮಾರ್ಟ್ ಫೋನ್‌ಗಾಗಿ 25 ಲಕ್ಷ ಗ್ರಾಹಕರು ಬುಕ್ ಮಾಡಿದ್ದು, ಕೇವಲ 251 ರೂ.ಗೆ ಸ್ಮಾರ್ಟ್‌ಫೋನ್ ನೀಡುವ ಸಿಗುವ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.

ಇದೊಂದು ದೊಡ್ಡ ಹಗರಣವಾಗಲಿದ್ದು, ಇದು ಎಚ್ಚರಿಕೆಯ ಗಂಟೆ ಎಂದೂ ಹೇಳಲಾಗುತ್ತಿದೆ. ಆದರೆ, ಇದೇ ಏಪ್ರಿಲ್‌ನಿಂದ ಫೋನ್ ನೀಡಲು ಆರಂಭಿಸಲಾಗುತ್ತದೆ ಎಂದು ಕಂಪನಿಯ ಎಂಡಿ ಮೋಹಿತ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಅದೂ ಅಲ್ಲದೇ ಈಗಾಗಲೇ ಕೆಲವರಿಗೆ ಫೋನನ್ನು ತಲುಪಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ತಮ್ಮ ಬ್ಯುಸಿನೆಸ್ ಪ್ಲ್ಯಾನ್ ಬಗ್ಗೆ ಬಹಿರಂಗಗೊಳಿಸುವುದಾಗಿ ಹೇಳುತ್ತಿರುವ ಮೋಹಿತ್ ಅವರ ನೋಯ್ಡಾದಲ್ಲಿರುವ ಕಂಪನಿಗೆ ಪೊಲೀಸರು ಹಾಗೂ ತೆರಿಗೆ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.

ಇನ್ನು ಆರಂಭವಾಗಬೇಕಿದೆ ಕಂಪನಿ:

ಫೋನ್ ಉತ್ಪಾದಕ ಕಂಪನಿಯಿನ್ನೂ ಆರಂಭವಾಗಬೇಕಿದ್ದು, ಫೋನ್ ಬುಕ್ ಮಾಡಿರುವ ಹಣವಿನ್ನೂ ತಮ್ಮ ಅಕೌಂಟ್‌ಗೆ ವರ್ಗಾವಣೆಯಾಗಿಲ್ಲವೆಂದು ಮೋಹಿತ್ ಹೇಳಿಕೊಂಡಿದ್ದಾರೆ. ಅಲ್ಲದೇ, ಉತ್ಪಾದಕ ಘಟಕವೊಂದನ್ನು ನೋಯ್ಡಾದಲ್ಲಿರುವುದಾಗಿಯೂ ಹೇಳುತ್ತಿದ್ದಾರೆ.

ಈ ಫೋನ್‌ ಬಗ್ಗೆ ಫೆ.17ರಂದು ಘೋಷಣೆಯಾದ ನಂತರ ಕಂಪನಿಯ ವೆಬ್‌ಸೈಟ್‌ಗೆ ಸೆಕೆಂಡ್‌ಗೆ 6 ಲಕ್ಷ ಕ್ಲಿಕ್ ಸಿಕ್ಕಿದ್ದರಿಂದ, ಸರ್ವರ್ ಡೌನ್ ಆಗಿತ್ತು. ಆಗಲೇ ಕಂಪನಿಯ ಹೊರಗಡೆ ನೂರಾರು ಮಂದಿ, ಆನ್‌ಲೈನ್‌ನಲ್ಲಿ ಹಣ ಕಟ್ಟಿದ ರಸೀದಿ ಹಿಡಿದು ನಿಂತಿದ್ದರು.

ಬೇರೆ ರೀತಿಯಲ್ಲಿಯೂ ಫೋನ್ ಖರೀದಿಸುವ ಮಾರ್ಗವಿದೆಯೇ ಎಂದು ತಿಳಿದುಕೊಳ್ಳಲೂ ಜನರು ಕೌತುಕವಾಗಿದ್ದು, ಆನ್‌ಲೈನ್ ಬುಕ್ಕಿಂಗ್ ಮಾತ್ರ ಲಭ್ಯವೆಂದು ಕಂಪನಿ ಸ್ಪಷ್ಟಪಡಿಸಿದೆ. ಕಂಪನಿಯ ಹೊರಗೆ ಹಿಂದಿಯಲ್ಲಿರುವ ನೋಟಿಸ್ ಹಾಕಿದ್ದು, 'ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರುವ ಈ ಫೋನ್ ಬೆಲೆ 251 ರೂ. ಆಗಿದ್ದು, ಡೆಲಿವರಿ ಚಾರ್ಚ್ ಸೇರಿ 291 ರೂ.ಆಗಲಿದೆ,' ಎಂದಿದೆ.

'ಕೇವಲ 251 ರೂ.ಗೆ ಸ್ಮಾರ್ಟ್‌ಫೋನ್ ಸಿಗುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಸಾಮಾನ್ಯವಾಗಿ ಎಲ್ಲರೂ ಕಡಿಮೆ ಮೊತ್ತವೆಂದೇ ಬುಕ್ ಮಾಡಿದ್ದಾರೆ,' ಎಂದು ಗ್ರಾಹಕರಾದ ನಿಶಾಂತ್ ಜೈನ್ ಹೇಳುತ್ತಾರೆ,

'ಮೋಹಿತ್ ಜೈನ್‌ ಅವರ ಹಿನ್ನೆಲೆಯನ್ನು ಪರೀಕ್ಷಿಸಲಾಗಿದೆ. ಅತ್ಯಂತ ದೊಡ್ಡ ಪ್ರಮಾಣದ ಮೊತ್ತ ಇದಾಗಿರುವುದರಿಂದ ಯಾವುದೇ ವಂಚನೆ ಇಲ್ಲವೆಂದು ಖಚಿತಪಡಿಸಿಕೊಳ್ಳಲಾಗಿದೆ. ಈ ಮೊಬೈಲ್ ಮಾರಾಟ ಹಾಗೂ ಉತ್ಪಾದನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವವರೆಗೂ ಕಂಪನಿಗೆ ಸೇರಿರುವ ಎಲ್ಲ ದಾಖಲೆಗಳೂ ಹಾಗೂ ಅವರ ಪಾಸ್‌ಪೋರ್ಟನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಈ ಕಾರ್ಯಕ್ಕೆ ಸಮಯ ನಿಗದಿಗೊಳಿಸಲಾಗಿದೆ,' ಎಂದು ಗೌತಮ್ ಬುದ್ಧ್ ನಗರ ಡಿಎಸ್ಪಿ ಅನೂಪ್ ಸಿಂಗ್ ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ