Quantcast
Channel: VijayKarnataka
Viewing all articles
Browse latest Browse all 6795

251 ರೂ. ಮೊಬೈಲ್ ಮೇಲೆ ಸರಕಾರ ನಿಗಾ

$
0
0

ವೆಬ್‌ಸೈಟ್ ಕ್ರ್ಯಾಶ್ ಆದರೂ 30,000 ಆರ್ಡರ್ ಸ್ವೀಕಾರ / ಜೂನ್‌ನೊಳಗೆ ಫೋನ್ ಡೆಲಿವರಿ ಭರವಸೆ

ಹೊಸದಿಲ್ಲಿ: ವಿಶ್ವದ ಅಗ್ಗದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ 'ಫ್ರೀಡಂ 251' ತಯಾರಿಸುವ ರಿಂಗಿಂಗ್ ಬೆಲ್ಸ್ ಕಂಪನಿ ಮೇಲೆ ಕೇಂದ್ರ ದೂರ ಸಂಪರ್ಕ ಸಚಿವಾಲಯ ನಿಗಾ ಇಟ್ಟಿದೆ.

''ಇಷ್ಟೊಂದು ಕಡಿಮೆ ದರಕ್ಕೆ ಮೊಬೈಲ್ ಪೂರೈಸಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಎದ್ದಿದ್ದು, ಸಾರ್ವಜನಿಕರ ಹಿತಕಾಯುವ ನಿಟ್ಟಿನಲ್ಲಿ ಕಂಪನಿ ಮೇಲೆ ಸಚಿವಾಲಯ ನಿಗಾ ಇಟ್ಟಿದೆ,'' ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ 2,300 ರೂ.ಗಳಿಗಿಂತಲೂ ಕಡಿಮೆ ದರಕ್ಕೆ ಇಂಥ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗದು. ರಿಂಗಿಂಗ್ ಬೆಲ್ಸ್‌ನ ತಂತ್ರಗಾರಿಕೆ ಏನು ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ.

30,000 ಆರ್ಡರ್‌ಗಳು

251 ರೂಪಾಯಿಗೆ(ಶಿಪ್ಪಿಂಗ್ ಶುಲ್ಕ 40 ರೂಪಾಯಿ ಸೇರಿದರೆ 291 ರೂ.) ಸ್ಮಾರ್ಟ್‌ಫೋನ್ ನೀಡುವುದಾಗಿ ಮಾರುಕಟ್ಟೆಯಲ್ಲಿ ರಿಂಗಿಂಗ್ ಬೆಲ್ಸ್ ಸಂಚಲನ ಹುಟ್ಟಿಸಿದೆ. ಖರೀದಿಗಾಗಿ ಗ್ರಾಹಕರು ಮುಗಿಬಿದ್ದ ಕಾರಣ ಮೊದಲ ದಿನ ಸೆಕೆಂಡಿಗೆ 6 ಲಕ್ಷ ಹಿಟ್ಸ್‌ಗಳು ಬಂದಿದ್ದು, ಇದರ ಒತ್ತಡಕ್ಕೆ ವೆಬ್‌ಸೈಟ್ ಕ್ರ್ಯಾಶ್ ಆಯಿತು. ಆದಾಗ್ಯೂ, ಮೊದಲ ದಿನವೇ 30,000 ಆರ್ಡರ್‌ಗಳನ್ನು(87 ಲಕ್ಷ ರೂ. ಮೌಲ್ಯದ ಆರ್ಡರ್) ಪಡೆದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ವೆಬ್‌ಸೈಟ್ ಕ್ರ್ಯಾಶ್‌ಗೆ ಕ್ಷಮೆ ಕೋರಿದ್ದ ಕಂಪನಿ, ಅದನ್ನು ಸರಿಪಡಿಸುವ ಭರವಸೆ ನೀಡಿತ್ತು. ಎರಡನೇ ದಿನವಾದ ಶುಕ್ರವಾರ ವೆಬ್‌ಸೈಟ್ ಚಾಲನೆಯಲ್ಲಿತ್ತಾದರೂ, ನಿಧಾನಗತಿಯಲ್ಲಿತ್ತು.

ತಮ್ಮ ಫೋನ್‌ಗೆ ವ್ಯಕ್ತವಾದ ಅಪರಿಮಿತ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಿಂಗಿಂಗ್ ಬೆಲ್ಸ್ ನಿರ್ದೇಶಕ ಮೋಹಿತ್ ಗೋಯೆಲ್, ''ನಾವು ಯಾವುದನ್ನೂ ಮುಚ್ಚಿಸುವುದಿಲ್ಲ. ಗರಿಷ್ಠ ಎಂದರೆ ಆನ್‌ಲೈನ್‌ನಲ್ಲಿ 25 ಲಕ್ಷ, ಆಫ್‌ಲೈನ್‌ನಲ್ಲಿ 25 ಲಕ್ಷ ಫೋನ್‌ಗಳಿಗಷ್ಟೆ ಆರ್ಡರ್ ಸ್ವೀಕರಿಸುತ್ತೇವೆ. ಈ ಎಲ್ಲ 50 ಲಕ್ಷ ಫೋನ್‌ಗಳನ್ನೂ ಏಪ್ರಿಲ್‌ನಿಂದ ಆರಂಭಿಸಿ ಜೂ.30ರೊಳಗೆ ತಲುಪಿಸುತ್ತೇವೆ. ಈ ಬಗ್ಗೆ ಶೇ.100ರಷ್ಟು ಭರವಸೆ ನೀಡುತ್ತೇನೆ,'' ಎಂದಿದ್ದಾರೆ.

ಕಳೆದ ತಿಂಗಳಷ್ಟೆ 4ಜಿ ಸ್ಮಾರ್ಟ್‌ಫೋನ್‌ವೊಂದನ್ನು ಇದೇ ಕಂಪನಿ 2,999 ರೂ.ಗಳಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆ ಫೋನ್‌ಗಳ ಡೆಲಿವರಿ ಫೆ.25ರಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>