Quantcast
Channel: VijayKarnataka
Viewing all articles
Browse latest Browse all 6795

ಕಾರ್ಗಿಲ್‌ ಸಮರ, ವಾಜಪೇಯಿ ಬೆನ್ನಿಗೆ ಚೂರಿ: ಪಾಕ್‌ ಪ್ರಧಾನಿ

$
0
0

ಹೊಸದಿಲ್ಲಿ: ಕಾರ್ಗಿಲ್‌ ಸಮರದ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ತನ್ನ ತಪ್ಪೊಪ್ಪಿಕೊಂಡಿದೆ.

'1999ರಲ್ಲಿ ಪಾಕ್‌ ಪಡೆಗಳು ಕಾರ್ಗಿಲ್‌ನಲ್ಲಿ ಕಾಲಿರಿಸಿದ್ದು, ದುಸ್ಸಾಹಸ. ಸ್ನೇಹ ಹಸ್ತ ಚಾಚಿದ್ದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಬೆನ್ನಿಗೆ ಪಾಕ್‌ ಪಡೆ ಚೂರಿ ಹಾಕುವ ಕೆಲಸ ಮಾಡಿತ್ತು,' ಎಂದು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಹೇಳಿದ್ದಾರೆ.

' ಈ ಸಂಬಂಧ ಷರೀಫ್‌ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಅವರು ಈ ಹೇಳಿಕೆ ನೀಡಿರುವುದು ನಿಜವೇ ಆದರೆ, ಖಂಡಿತಾ ಇದು ಸಕಾರಾತ್ಮಕ ಬೆಳವಣಿಗೆ,' ಎಂದು ಹೊಸದಿಲ್ಲಿಯ ಅಧಿಕೃತ ಮೂಲಗಳು ಅಭಿಪ್ರಾಯಪಟ್ಟಿವೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಕಗ್ಗಂಟಾಗಿರುವ ಸಂದರ್ಭದಲ್ಲಿ ಷರೀಫ್‌ ಹೇಳಿಕೆ ಮಹತ್ವ ಪಡೆದಿದೆ. ವಾಜಪೇಯಿ ಹಾಗೂ ಷರೀಫ್‌ 1998ರಲ್ಲಿ ಆರಂಭಿಸಿದ್ದ ಮಾತುಕತೆ 26/11 ಮುಂಬಯಿ ದಾಳಿ ನಂತರ ಪುನಾರಂಭಗೊಂಡಿಲ್ಲ.

'ಅಟಲ್ ಬಿಹಾರಿ ವಾಜಪೇಯಿ ಉಭಯ ದೇಶಗಳ ನಡುವಿನ ಬಾ೦ಧವ್ಯ ವೃದ್ಧಿಗೆ ಶ್ರಮಿಸುತ್ತಿದ್ದ ಸಂದರ್ಭದಲ್ಲೇ ಪಾಕ್‌ ಸೇನೆಯ ಅ೦ದಿನ ಮುಖ್ಯಸ್ಥ ಪರ್ವೇಜ್‌ ಮುಷರಫ್ ಕಾರ್ಗಿಲ್‌ ಮೇಲೆ ಆಕ್ರಮಣ ಮಾಡಿಸಿದ್ದರು. ಶಾ೦ತಿ ಮಾತುಕತೆಯ ಹಾದಿಯಲ್ಲಿದ್ದ ಉಭಯ ದೇಶಗಳ ನಡುವೆ ಬಾ೦ಧವ್ಯ ಬೆಸೆಯಲು ಯತ್ನಿಸಿದ್ದ ವಾಜಪೇಯಿಗೆ ಈ ದಾಳಿ ಆಘಾತ ಉ೦ಟುಮಾಡಿತ್ತು,' ಎ೦ದು ನವಾಜ್‌ ಷರೀಫ್‌ ಹೇಳಿದ್ದಾರೆ.

ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ವಶ ಪಡಿಸಿಕೊಂಡಿದ್ದ ಕಾರ್ಗಿಲ್‌ಅನ್ನು ಮರಳಿ ವಾಪಸ್ ಪಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು. ಆ ಸಂದರ್ಭದಲ್ಲಿ ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿದ್ದರು.

ಷರೀಫ್‌ಗೆ ಮಾಹಿತಿ ಇತ್ತೇ ?
ಕಾರ್ಗಿಲ್‌ ದಾಳಿ ಸಂಚು ಅಂದಿನ ಪಾಕ್‌ ಪ್ರಧಾನಿ ಷರೀಫ್‌ಗೂ ತಿಳಿದಿತ್ತು ಎಂಬ ಮಾತು ಕೇಳಿಬಂದಿದ್ದರೂ, 2007ರಲ್ಲಿ ನನಗೆ ದಾಳಿಯ ಮಾಹಿತಿ ಇರಲಿಲ್ಲ ಎಂದು ಷರೀಫ್‌ ಹೇಳಿದ್ದರು. ಪಠಾಣ್‌ಕೋಟ್‌ ದಾಳಿ, ಹೆಡ್ಲಿ ತಪ್ಪೊಪ್ಪಿಗೆ ನಂತರ ಅಂತಾರಾಷ್ಟ್ರೀಯ ಸಮುದಾಯದ ಎದುರು ತಲೆ ತಗ್ಗಿಸಿರುವ ಪಾಕಿಸ್ತಾನದ ಇಮೇಜ್‌ ಸುಧಾರಿಸುವ ನಿಟ್ಟಿನಲ್ಲಿ ಷರೀಫ್‌ ಈ ಹೇಳಿಕೆ ನೀಡಿದ್ದಾರೆ. ಜತೆಗೆ, ಮಾತುಕತೆ ಪ್ರಕ್ರಿಯೆಗೆ ಪಾಕಿಸ್ತಾನದ ಕಡೆಯಿಂದ ಪ್ರಯತ್ನಗಳು ಮುಂದುವರಿದಿವೆ ಎಂಬ ಅಂಶವನ್ನು ಬಿಂಬಿಸುವ ಪ್ರಯತ್ನ ಇದು ಎನ್ನಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>