Quantcast
Channel: VijayKarnataka
Viewing all articles
Browse latest Browse all 6795

ದೇಶದ ಮೊದಲ ತೃತೀಯ ಲಿಂಗಿ ಸಬ್ ಇನ್ಸ್‌ಪೆಕ್ಟರ್!

$
0
0

*ಕಾನೂನು ಹೋರಾಟದಲ್ಲಿ ಗೆದ್ದ ಪ್ರೀತಿಕಾ

ಚೆನ್ನೈ: ಕಡೆಗೂ ತಮಿಳುನಾಡಿನ ಪ್ರೀತಿಕಾ ಯಾಶಿನಿ ಕನಸು ನನಸಾಗಿದೆ. ಭಾರತದ ಮೊದಲ ತೃತೀಯ ಲಿಂಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುವ ಮೂಲಕ ಯಶಿನಿ, ಹಲವು ಲೈಂಗಿಕ ಅಲ್ಪಸಂಖ್ಯಾತರಿಗೆ ರೋಲ್ ಮಾಡೆಲ್ ಆಗಿದ್ದಾರೆ.

ಹಿಜಡಾ ಎಂಬ ಕಾರಣಕ್ಕೆ ಒಂದೊಮ್ಮೆ ಅರ್ಜಿಯನ್ನು ತಿರಸ್ಕೃತಗೊಳಿಸಿದ್ದ ತಮಿಳುನಾಡು ಸಮಾನ ಸೇವೆಗಳ ನೇಮಕಾತಿ ಮಂಡಳಿ(ಟಿಎನ್‌ಯುಎಸ್‌ಆರ್‌ಬಿ)ಯು, ಸೋಮವಾರ 25 ವರ್ಷದ ಯಾಶಿನಿಗೆ ನೇಮಕಾತಿ ಆದೇಶ ಕಳುಹಿಸಿದೆ.

ನಗರ ಪೊಲೀಸ್ ಆಯುಕ್ತ ಸುಮಿತ್ ಶರಣ್ ಅವರಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಾತಿ ಆದೇಶ ಪಡೆದ 22 ಮಂದಿಯಲ್ಲಿ ಯಾಶಿನಿ ಕೂಡಾ ಒಬ್ಬರು.

ನೇಮಕಾತಿ ಆದೇಶ ಕೈಸೇರಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಾಶಿನಿ, ಇಷ್ಟನ್ನು ಪಡೆಯಲು ತಾವು ನಡೆಸಿದ ಹೋರಾಟದ ಹಾದಿ ತೀರಾ ಕಠಿಣವಾಗಿತ್ತು. ಆದರೂ ಫಲಿತಾಂಶದಿಂದ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ''ಐಪಿಎಸ್ ಅಧಿಕಾರಿ ಆಗುವುದು ನನ್ನ ಗುರಿ'' ಎಂದಿರುವ ಅವರು, ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ತೃತೀಯ ಲಿಂಗಿಗಳಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಹೋರಾಟ ತಮ್ಮ ಆದ್ಯತೆ ಎಂದಿದ್ದಾರೆ.

ಜೊತೆ ನಿಂತ ನ್ಯಾಯಪೀಠ: ತೃತೀಯ ಲಿಂಗಿ ಎಂಬ ಕಾರಣಕ್ಕೆ 2015ರಲ್ಲಿ ಯಾಶಿನಿ ಪೊಲೀಸ್ ಹುದ್ದೆಗೆ ಸಲ್ಲಿಸಿದ್ದ ಅರ್ಜಿಯನ್ನು ಟಿಎನ್‌ಯುಎಸ್‌ಆರ್‌ಬಿ ತಿರಸ್ಕರಿಸಿತ್ತು. ಆದರೆ, ಮಂಡಳಿಯ ಈ ನಡೆಯನ್ನು ಪ್ರಶ್ನಿಸಿ ಅವರು ಮದ್ರಾಸ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯವು ಯಶಿನಿ ಅವರಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.

100 ಮೀ. ಓಟ ಸ್ಪರ್ಧೆಯಲ್ಲಿ ಆಕೆ ಗುರಿ ಮುಟ್ಟಲು 1 ಸೆಕೆಂಡ್ ತಡ ಮಾಡಿದರೂ, ದ್ವಿಸದಸ್ಯ ನ್ಯಾಯಪೀಠವು ಅವರು ಪೊಲೀಸ್ ಉದ್ಯೋಗ ನಿರ್ವಹಿಸಲು ಅರ್ಹರಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಜೊತೆಗೆ, ಮುಂದಿನ ನೇಮಕಾತಿ ಪ್ರಕ್ರಿಯೆ ಸಮಯದಲ್ಲಿ ಅರ್ಜಿಯಲ್ಲಿ, ಲಿಂಗ ಆಯ್ಕೆಯಲ್ಲಿ 'ಮೂರನೇ ವರ್ಗ' ಎಂಬ ಆಯ್ಕೆಯನ್ನೂ ಸೇರಿಸುವಂತೆ ಟಿಎನ್‌ಯುಎಸ್‌ಆರ್‌ಬಿಗೆ ನಿರ್ದೇಶನ ನೀಡಿತ್ತು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!