Quantcast
Channel: VijayKarnataka
Viewing all articles
Browse latest Browse all 6795

ಡಾ. ಸಿಂಗ್ ವಿರುದ್ಧ ಜೇಟ್ಲಿ ವಾಗ್ದಾಳಿ

$
0
0

ಮೋದಿ ನುಡಿದರೆ ಆ ಕೆಲಸ ಆದಂತೆ; ಅವರದೇ ಕೊನೆಯ ಮಾತು

ಹೊಸದಿಲ್ಲಿ: ಯುಪಿಎ ಆಡಳಿತಾವಧಿಯಲ್ಲಿ ನಿಷ್ಕ್ರಿಯ ನೀತಿಗಳಿಂದ ಬಳಲುತ್ತಿದ್ದ ಭಾರತ ಇದೀಗ ಎನ್‌ಡಿಎ ಆಡಳಿತದಲ್ಲಿ ಜಾಗತಿಕ ಉಜ್ವಲ ತಾಣವಾಗಿ ಬೆಳಗುತ್ತಿದೆ ಎಂದು ಬಣ್ಣಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದರು.

ಡಾ. ಸಿಂಗ್ ಅವರು ಎನ್‌ಡಿಎ ಸರಕಾರದ ಆಡಳಿತ ವೈಖರಿಯನ್ನು ನಿರುದ್ವಿಗ್ನವಾಗಿ ವಿಶ್ಲೇಷಿಸುವುದಾದರೆ, ಭ್ರಷ್ಟಾಚಾರಮುಕ್ತ ಪಾರದರ್ಶಕತೆಯ ಸರಕಾರ ಭಾರತದಲ್ಲಿ ಇದೆ ಎಂಬುದನ್ನು ಅವರು ನಿಜವಾಗಿಯೂ ಅರಿಯುತ್ತಾರೆ ಎಂದು ಛಾಡಿಸಿದರು.

ಯಾವುದೇ ಭ್ರಷ್ಟಾಚಾರವಿಲ್ಲದೆ ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಮೋದಿ ನುಡಿದರೆ ಆ ಕೆಲಸ ಆದಂತೆ; ಎನ್‌ಡಿಎ ಸರಕಾರದಲ್ಲಿ ಅವರದೇ ಕೊನೆಯ ಮಾತು. ಉದ್ಯಮ ಸ್ಥಾಪನೆಗೆ ಅಗತ್ಯವಾದ ಪರಿಸರ ಅನುಮತಿಗಳನ್ನು ದೈನಂದಿನ ಆಧಾರದಲ್ಲಿ ನೀಡಲಾಗುತ್ತಿದೆ. ಉದ್ಯಮಿಗಳು ದಾಖಲೆ ಹೊತ್ತುಕೊಂಡು ಸಂಸತ್ತಿಗೆ ಭೇಟಿ ನೀಡುವ ಪ್ರಮೇಯ ಈಗಿಲ್ಲ. ಭ್ರಷ್ಟತೆಗಾಗಿ ಕಡತಗಳನ್ನು ಸ್ಥಗಿತಗೊಳಿಸುವ ಪದ್ಧತಿ ಮುಗಿದ ಅಧ್ಯಾಯ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಮೋದಿ ಸರಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರತಿಪಕ್ಷಗಳನ್ನು ಮುಟ್ಟುವಂತಹ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಜತೆಗೆ, ದೇಶದ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಾದಿಗೆ ಕೊಂಡೊಯ್ಯುವಲ್ಲಿ ವಿಫಲವಾಗುತ್ತಿದೆ ಎಂದು ಡಾ. ಸಿಂಗ್ ಮಾಡಿರುವ ಟೀಕೆಗೆ ಜೇಟ್ಲಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅವರ ಪಕ್ಷಕ್ಕೆ ಏನು ಸಲಹೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ರಾಷ್ಟ್ರಪತಿಗಳು ಮತ್ತು ಮಾಜಿ ಪ್ರಧಾನಿಗಳು ಅಪರೂಪಕ್ಕೆ ಒಮ್ಮೆ ಮಾತನಾಡುತ್ತಾರೆ. ಅವರು ಹೀಗೆ ಮಾತನಾಡಿದಾಗ, ಇಡೀ ದೇಶವೇ ಕಿವಿಗೊಟ್ಟು ಕೇಳುತ್ತಿರುತ್ತದೆ. ನಿಷ್ಪಕ್ಷಪಾತವಾದ ಮಾತುಗಳು, ಹೇಳಿಕೆಗಳು ಮತ್ತು ರಚನಾತ್ಮಕ ಸಲಹೆಗಳನ್ನು ಜನರು ಅವರಿಂದ ನಿರೀಕ್ಷಿಸುತ್ತಿರುತ್ತಾರೆ. ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಅವರು ನೀಡುವ ಹೇಳಿಕೆಗಳು ಮತ್ತು ಸಲಹೆಗಳು ಅವರ ಪಕ್ಷಕ್ಕೂ ಅನ್ವಯವಾಗುವಂತಿರಬೇಕು ಎಂದು ಜೇಟ್ಲಿ, ಬ್ಲಾಗ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪ್ರತಿರೋಧದಿಂದಾಗಿ ಮಹತ್ವಾಕಾಂಕ್ಷಿಯ ಸರಕು ಮತ್ತು ಸೇವಾ ತೆರಿಗೆ ವಿಧೇಯಕ ರಾಜ್ಯಸಭೆಯಲ್ಲಿ ನನೆಗುದಿಗೆ ಬಿದ್ದಿದೆ ಎಂದು ಆರೋಪಿಸಿರುವ ಜೇಟ್ಲಿ, ಪಕ್ಷದ ನಿಲುವಿನಲ್ಲಿ ರಾಜಕೀಯ ಸೇರಿರಬಾರದು. ಜಿಎಸ್‌ಟಿ ವಿಧೇಯಕಕ್ಕೆ ತೊಂದರೆ ಕೊಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಡಾ. ಸಿಂಗ್ ಸಲಹೆ ನೀಡಲಿ. ಒಬ್ಬ ಹಿರಿಯ ನಾಯಕರಿಂದ ಇದನ್ನು ಇಡೀ ರಾಷ್ಟ್ರ ನಿರೀಕ್ಷಿಸುತ್ತಿದೆ ಎಂದು ಅವರು ಮೂದಲಿಸಿದರು.

ಹೂಡಿಕೆ ಹೆಚ್ಚಳದಲ್ಲಿ ಮೋದಿ ಸರಕಾರ ವಿಫಲ: ಡಾ. ಸಿಂಗ್

ಹೊಸದಿಲ್ಲಿ: ಜಾಗತಿಕ ಪದಾರ್ಥಗಳ ಬೆಲೆ ಇಳಿಕೆಯ ಪ್ರಯೋಜನಗಳನ್ನು ಪಡೆದು, ದೇಶದ ಅರ್ಥ ವ್ಯವಸ್ಥೆಯನ್ನು ರಾಜಪಥಕ್ಕೆ ಕೊಂಡೊಯ್ಯುವಲ್ಲಿ ನರೇಂದ್ರ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಜತೆಗೆ, ನೆರೆಯ ಪಾಕಿಸ್ತಾನದ ಜತೆ ಅಸ್ಥಿರ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ಸುಧಾರಣೆ ಕಾಣುತ್ತಿರುವ ದೇಶದ ವಿತ್ತೀಯ ಸಮತೋಲನ(ಕೊರತೆ)ವನ್ನು ಬಳಸಿಕೊಂಡು, ಅರ್ಥ ವ್ಯವಸ್ಥೆಯಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಲು ಮೋದಿ ಸರಕಾರ ಮುಂದಾಗಬೇಕು. ಉದ್ಯಮ ರಂಗಕ್ಕೆ ಸಾಲ ಲಭ್ಯತೆಯನ್ನು ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು.

ಹೂಡಿಕೆ ಒಳಹರಿವು ಹೆಚ್ಚಿಸಲು ಸಿಕ್ಕಿರುವ ಅಪರೂಪದ ಅವಕಾಶವನ್ನು ಬಳಸಿಕೊಳ್ಳಲು ಸರಕಾರ ಗಮನ ನೀಡಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಗಣನೀಯವಾಗಿ ಳಿಕೆ ಕಂಡಿರುವ ಕಚ್ಚಾತೈಲ ಬೆಲೆಯ ಪ್ರಯೋಜನಗಳ ಲಾಭ ಪಡೆಯುವಲ್ಲಿ ಸರಕಾರ ವಿಫಲವಾಗಿದೆ ಎಂದು ಡಾ. ಸಿಂಗ್ ಟೀಕಿಸಿದರು.

ಆಮದು ದರಗಳ ಹಠಾತ್ ಇಳಿಕೆಯು ದೇಶದ ವ್ಯಾಪಾರ ಕೊರತೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿದೆ. ಇದು ಅರ್ಥ ವ್ಯವಸ್ಥೆಯ ಚೇತರಿಕೆಗೆ ಕಾರಣವಾಗಲಿದೆ ಎಂಬ ವ್ಯಾಪಕ ಆಶಾವಾದ ಇತ್ತು. ಆದರೆ, ವಾಸ್ತವದಲ್ಲಿ ಇದಾವುದೂ ಆಗಲೇ ಇಲ್ಲ ಎಂದು ಸಿಂಗ್ ಬೇಸರ ವ್ಯಕ್ತಪಡಿಸಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>