Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಚಿಂತನಾಶೀಲ ವ್ಯಕ್ತಿಗಳು ಸೃಜನಶೀಲರು

$
0
0

*ಮದುವೆ ಮುರಿದು ಮಗಳು ತವರಿನಲ್ಲಿ, ಆಕೆಗೆ ಒಳ್ಳೆಯ ಉದ್ಯೋಗ-ಭವಿಷ್ಯದ ಚಿಂತೆ ಸ್ವಾಮಿ.

ಸೀತಾ, ಕಡೂರು

ಸ್ವಯಂಕೃತ ದೋಷದಿಂದಲೂ, ಗಂಡನ ಉದಾಸೀನತೆಯಿಂದಲೂ ಮದುವೆ ಮುರಿದಿದೆ. ಈ ಅತಿ ಕರ್ಮವು ಮಗಳ ಹಠ ಸಾವಧಾನ ಇಲ್ಲದ ಸ್ವಭಾವದ ಫಲವು ಸರಕಾರಿ ಕೆಲಸ ಆಗದು. ಇತರೆ ಕೆಲಸದಲ್ಲೇ ತೃಪ್ತಿ ಪಡಬೇಕಾಗುವುದು. ಬೇರೆ ಯೋಗಗಳು ಒಳ್ಳೆಯದಿದೆ. ಚಿಂತೆ ಬಿಡಿ.

*ಎಂಜಿನಿಯರಿಂಗ್ ಕೆಲಸ ಕಾರಣಾಂತರದಿಂದ ಬಿಟ್ಟು ಸ್ವಂತ ಮಾಡಬೇಕಾಗುವುದು. ತಮ್ಮ ಸಲಹೆ ಬೇಕು.

ರಾಜಶೇಖರ್, ಕಾಡುಗೋಡಿ

ತೆರೆದ ಮನಸ್ಸಿದ್ದರೆ ಪ್ರಯತ್ನಶೀಲತೆ ಇದ್ದರೆ ಏನು ಮಾಡಲು ಜೀವನ ಅವಕಾಶ ನೀಡುವುದು. ಮೊದಲು ಬರಿದೇ ಕೇಟರಿಂಗ್-ಸಪ್ಲೈಸ್ ಮಾಡಿ. ಕೆಲ ವರ್ಷಗಳ ಅನುಭವ ಧೈರ್ಯ ತರುವುದು. ನಂತರ ಹೋಟೆಲ್ ಮಾಡಿ. ಜಾತಕ ಇತರೆ ವಿಷಯಗಳ ಪರಿಶೀಲನೆ ಅವಶ್ಯವಿದೆ.

*ದಾರಿ ದೀಪ ನಮಗೆ ಬಹು ಮೆಚ್ಚಿಗೆ. ನಿಮಗೆ ಅಭಿನಂದನೆಗಳು. ಮಗನ ಜಾತಕ ವಿಷಯ ನೋಡಿ ಹೇಳಿ.

ಎಸ್.ಡಿ.ರಾಜಶ್ರೀ, ವಿದ್ಯಾರಣ್ಯಪುರ

ನಿಮ್ಮ ಅಭಿಮಾನಕ್ಕೆ ನಮ್ಮ ಅಭಿನಂದನೆಗಳು. ವೈದ್ಯಕೀಯ ಓದಿನ ಮಗನು ಕೇಂದ್ರಿತ ಮನಸ್ಕನಾಗಬೇಕು. ಶಾಂತಿ, ಸಮಾಧಾನಗಳಿಂದ ವ್ಯವಹರಿಸಬೇಕು. ಏಕೆನ್ನುವಿರೋ? ಕುಜ ಗ್ರಸ್ತ ರಾಹು ದೆಸೆಯ ಕಾಲ-ಗುರು ಬಲವೂ ಕಡಿಮೆ, ಹೀಗಾಗಿ ಈ ಸೂಚನೆ. ಜಾತಕ ಪರಿಶೀಲನೆ-ಸಮಾಲೋಚನೆಯ ಅಗತ್ಯ ಇದೆ.

*ಮಗಳ ವಿದ್ಯಾಭ್ಯಾಸ ಮುಗಿದು, ನಾಟ್ಯಾಭ್ಯಾಸ ಮಾಡುತ್ತಿರುವಳು. ಮದುವೆ, ಕೆಲಸಕ್ಕೆ ಯತ್ನ ಕೈಗೂಡುವುದೇ?

ಕೃಷ್ಣಮೂರ್ತಿ, ಶಿವಮೊಗ್ಗ

ಶನಿ ದಶಾಂತ್ಯ ಕಾಲದಲ್ಲಿ ಶುಭ ಕಾರ್ಯಕ್ಕೆ ವಿಳಂಬವಾಗುವುದು. ಲಲಿತ ಕಲೆಗಳಲ್ಲಿ ಮುಂದುವರಿಯಲಿ, ಯಶಸ್ವಿಯಾಗುವಳು. ವರ್ಷಾಂತ್ಯಕ್ಕೆ ಮದುವೆ ಸಂಬಂಧ ಕೂಡಿ ಬರುವುದು. ಸರಕಾರಿ ಯಾ ವೈದ್ಯ ಮಹಾಶಯ ಕೂಡಿ ಬರುವನು. ಯತ್ನ ಜಾರಿಯಲ್ಲಿರಲಿ. ಶ್ರೀ ಸುಬ್ರಹ್ಮಣ್ಯ ದರ್ಶನ-ದುರ್ಗಾ ಹೋಮಗಳು ನಡೆಯಲಿ.

*ಮದುವೆ ಯತ್ನ ಫಲ ನೀಡುತ್ತಿಲ್ಲ. ತೊಂದರೆ ಏನು, ಪರಿಹಾರ ತಿಳಿಸಿ ಗುರೂಜಿ.

ಉಷಾ, ಶಿಕಾರಿಪುರ

ಇಷ್ಟಪಟ್ಟು ಮದುವೆ ಆಗಬೇಕೆಂದು, ಅದು ಕಾರಣಾಂತರ ಹಾಗೆ ಆಗದೆ, ಈಗ ಮದುವೆಗೆ ಮಾನಸಿಕವಾಗಿ ತಯಾರಿಲ್ಲ! ಹಾಗಿದೆ ಇವರ ಸ್ಥಿತಿ. ಆಪ್ತ ಸಲಹೆ, ಸಾಂತ್ವನ ಕುಟುಂಬದವರಿಂದ ಬೇಕು. ಇತರೆ ಯೋಗಗಳು ಒಳ್ಳೆದಿದೆ.

*ಸ್ವಂತ ಉದ್ಯೋಗ ಚಿಂತನೆ-ಸರಕಾರಿ ಕೆಲಸಕ್ಕೂ ಯತ್ನ. ಭವಿಷ್ಯ ದ್ವಂದ ಆಗಿದೆ ಗುರೂಜಿ.

ರಮೇಶ್ ಆರ್, ಕಾರವಾರ

ಸ್ವಂತ ಉದ್ಯೋಗ ಒಳ್ಳೆಯದು. ಅದಕ್ಕಿಂತಲೂ ಚಿಂತನೆ ಒಳ್ಳೆಯದು! ಚಿಂತನಾಶೀಲ ವ್ಯಕ್ತಿಗಳು ಮಾತ್ರ ಹೊಸದನ್ನು ಸೃಜಿಸಬಲ್ಲರು. ಬೇಕರಿ, ಶೀತ ಪದಾರ್ಥ ವ್ಯಾಪಾರಕ್ಕೆ ಶುಕ್ರ-ಚಂದ್ರರು ಕಾರಕರಿದ್ದು ಜಾತಕ ಬಲವೂ ಇದೆ. ಈಗಲೇ ಮುಂದುವರಿಯಿರಿ. ದುರ್ಗಾ ದೇವರ ಮಹಾಪೂಜೆ-ರಂಗ ಪೂಜೆ ಹಾಗೂ ಕುಲದ ನಾಗ ಪೂಜೆಗಳಿಂದ ಪ್ರಗತಿ.

*ಅನಾರೋಗ್ಯ ಸಮಸ್ಯೆ-ಮಕ್ಕಳ ಭವಿಷ್ಯ ಚಿಂತೆ.

ವಸುಂಧರಾ ಎಂ.ವಿ, ಬೆಂಗಳೂರು

ಪತ್ರ ಬರೆಯಲು ತೊಂದರೆ ಇದ್ದರೆ ಇತರರ ಕೈಯಲ್ಲಿ ಚಿಕ್ಕ-ಚೊಕ್ಕ ಪತ್ರ ಬರೆಯಿಸಿ. ನಿಮಗೆ ಚಿಂತೆ ಇದೆ ಎಂದು ಸಂಪೂರ್ಣ ಕಥಾನಕ ಬರೆದರೆ ನಗೆ ಪಾಟೀಲಾದೀತು. ಪುಟಗಟ್ಟಲೆ ಬರೆವುದು ಪ್ರಶ್ನೆ ಅಲ್ಲ. ನೆನಪಿರಲಿ. ಅನಾರೋಗ್ಯ ಸಮಸ್ಯೆ ವಿವರ ಮತ್ತು ಜಾತಕ ಪರಿಶೀಲನೆ-ಸಲಹೆ ಅಗತ್ಯ.

*ಇರುವ ಕೆಲಸ ಸರಿ ಬರುತ್ತಿಲ್ಲ. ಸಕರಾರಿ ಕೆಲಸ ಯತ್ನ ಆಗುತ್ತಿಲ್ಲ.ಏನು ಮಾಡಲಿ?

ಶ್ವೇತಾ, ಮಂಗಳೂರು

ಇರುವ ಕೆಲಸ ಎಂದೂ ಸರಿಯಾಗದು. ಜನಕೆ ಬೇಕಾದ್ದು ಎಂದೂ ಸಿಗದು! ಸಿಕ್ಕರೂ ಅದು 'ಇರುವ ಕೆಲಸ'ದಂತೆ ಸರಿ ಕಾಣದು! ಹೀಗಿದೆ ಇಂದಿನ ಓದು-ಕೆಲಸ-ಮದುವೆಗಳ ತ್ರಿಪಟಿ ಬಾಳುಗಳು. ಏನು ಅರ್ಥವಾಯಿತೋ ಅರಿಯೆ, ಆದರೂ ತಿಳಿಯಲೆತ್ನಿಸಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>