Quantcast
Channel: VijayKarnataka
Viewing all articles
Browse latest Browse all 6795

ಭ್ರಷ್ಟಾಚಾರ ಸಾಬೀತು: ಪಾಕ್‌ ಅಂಪೈರ್‌ ಅಸದ್‌ ರೌಫ್‌ಗೆ 5 ವರ್ಷಗಳ ನಿಷೇಧ

$
0
0

ಮುಂಬಯಿ: ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿರುವುದರಿಂದ ಶಿಸ್ತು ಸಮಿತಿ ಶಿಫಾರಸಿನಂತೆ ಪಾಕಿಸ್ತಾನದ ಅಂಪೈರ್ ಅಸದ್ ರೌಫ್ ಅವರಿಗೆ ಬಿಸಿಸಿಐ ಐದು ವರ್ಷಗಳ ಕಾಲ ನಿಷೇಧ ಹೇರಿದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಕ್ರಿಕೆಟ್‌ ಆಟದ ಘನತೆ ಕುಗ್ಗಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಅಸದ್‌ ರೌಫ್‌ ವಿರುದ್ಧ ಶುಕ್ರವಾರ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

59 ವರ್ಷ ವಯಸ್ಸಿನ ರೌಫ್‌ ಅವರು ಐಸಿಸಿಯ ಎಲೈಟ್‌ ಪ್ಯಾನೆಲ್‌ನ ಭಾಗವಾಗಿದ್ದು, ಟೆಸ್ಟ್‌ ಪಂದ್ಯಗಳ ಅಧಿಕೃತ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆಧರೆ ಅವರು 2013ರಲ್ಲಿ ನಡೆದ ಐಪಿಲ್‌ ಪಂದ್ಯಗಳ ವೇಳೆ ಬುಕಿಗಳಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದರು ಹಾಗೂ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದರು ಎನ್ನುವುದು ತನಿಖೆ ವೇಳೆ ಸಾಬೀತಾಗಿದೆ.

ಕಳೆದ ಕೆಲ ವಾರಗಳಿಂದ ರೌಫ್‌ ಅವರ ಹಣೆಬರಹ ನಿರ್ಧಾರವನ್ನು ಬಿಸಿಸಿಐ ಶಿಸ್ತು ಸಮಿತಿ ಚರ್ಚಿಸಿದರೂ, ಶುಕ್ರವಾರ ನಡೆದ ಸಭೆಯಲ್ಲಿ ಕೊನೆಗೂ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್‌, ಜ್ಯೋತಿರಾಧಿತ್ಯ ಸಿಂಧಿಯಾ, ನಿರಂಜನ್‌ ಶಾ ಮುಂತಾದವರು ಭಾಗವಹಿಸಿದ್ದರು.

2013ರ ಐಪಿಎಲ್ ಸರಣಿ ವೇಳೆ ಸ್ಪಾಟ್ ಫಿಕ್ಸಿಂಗ್ ಚಟುವಟಿಕೆಗಳಲ್ಲಿ ಅಂಪೈರ್ ಅಸದ್ ರೌಫ್ ಭಾಗವಹಿಸಿರುವ ಬಗ್ಗೆ ಮುಂಬಯಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐನ ಶಿಸ್ತು ಸಮಿತಿ ಅಸದ್ ರೌಫ್ ಅವರನ್ನು ಸತತವಾಗಿ ವಿಚಾರಣೆಗೊಳಪಡಿಸಿತ್ತು. ಆದರೆ ರೌಫ್ ಅವರಿಂದ ತನಿಖೆಗೆ ಸೂಕ್ತ ಸಹಕಾರ ಸಿಕ್ಕಿರಲಿಲ್ಲ. ಈ ನಡುವೆ ರೌಫ್‌ ವಿರುದ್ದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಐಸಿಸಿ ಎಲೈಟ್‌ ಪ್ಯಾನೆಲ್‌ನಿಂದ ಅವರನ್ನು ಪಾಕಿಸ್ತಾನ ವಾಪಸ್‌ ಕರೆಸಿಕೊಂಡಿತ್ತು.

ಬಿಸಿಸಿಐ ಪಾತ್ರ ವಹಿಸುವ ಇಲ್ಲವೇ ಆಯೋಜಿಸುವ ಯಾವುದೇ ಕ್ರಿಕೆಟ್‌ ಸರಣಿಯಲ್ಲಿ ಆಟವಾಡುವ, ಅಂಪೈರ್ ಆಗಿ ಕಾರ್ಯನಿರ್ವಹಿಸುವ, ಯಾವುದೇ ಮಾದರಿಯ ಕ್ರಿಕೆಟ್‌ ಅನ್ನು ಪ್ರತಿನಿಧಿಸುವ ಕೆಲಸವನ್ನು ಅಸದ್ ರೌಫ್ ಮಾಡುವಂತಿಲ್ಲ ಎಂದು ಸಭೆ ಬಳಿಕ ಬಿಸಿಸಿಐ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತನಿಖೆಯ ವೇಳೆ ಆಹ್ವಾನ ನೀಡಿದಾಗಲೆಲ್ಲ ನಾನಾ ನೆಪಗಳನ್ನು ಹೇಳಿ ತಪ್ಪಿಸಿಕೊಂಡಿರುವ ಅಸದ್‌ ರೌಫ್‌, 2016ರ ಜನವರಿ 15, ಫೆಬ್ರವರಿ 8ರಂದು ನಡೆದ ಸಭೆಗಳಿಗೂ ಹಾಜರಾಗಿಲ್ಲ. ಅವರಿಗೆ ನೀಡಿದ್ದ ಅವಕಾಶಗಳು ಮೀರಿದ್ದು, ಇನ್ನು ನಿರ್ಧಾರ ಕೈಗೊಳ್ಳುವ ಕಾಲ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>