Quantcast
Channel: VijayKarnataka
Viewing all articles
Browse latest Browse all 6795

ಸರಣಿ ಉಳಿವಿಗಾಗಿ ಭಾರತ ಹೋರಾಟ

$
0
0

ರಾಂಚಿಯಲ್ಲಿ ಎರಡನೇ ಟಿ20 ಪಂದ್ಯ ಇಂದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಧೋನಿ ಪಡೆ

ರಾಂಚಿ: ಹಸಿರು ಹಾಸಿನ ಪುಣೆ ಪಿಚ್‌ನಲ್ಲಿ ಪ್ರವಾಸಿ ಶ್ರೀಲಂಕಾ ಎದುರು 3 ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಅಚ್ಚರಿಯ ಸೋಲುಂಡ ಆತಿಥೇಯ ಭಾರತ ತಂಡ, ಶುಕ್ರವಾರ ರಾಂಚಿ ಅಂಗಳದಲ್ಲಿ 2ನೇ ಪಂದ್ಯವನ್ನಾಡಲಿದ್ದು ಸರಣಿ ಉಳಿಸಿಕೊಳ್ಳುವ ತವಕದಲ್ಲಿದೆ.

ಧೋನಿ ತವರೂರಾದ ರಾಂಚಿಯಲ್ಲಿ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿದ್ದು, ಮನೆಯಂಗಳದ ಪ್ರೇಕ್ಷಕರೆದು ಸರಣಿ ಸಮಬಲ ತಂದುಕೊಳ್ಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ನಾಯಕ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಮೈದಾನ ಸ್ಪಿನ್ ಬೌಲರ್‌ಗಳಿಗೆ ಕೊಂಚ ನೆರವಾಗಲಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗುವುದರಿಂದ ರನ್ ಹೊಳೆ ಹರಿಯುವುದು ಖಂಡಿತ.

ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲು ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಶ್ರೀಲಂಕಾ ಈ ಪಂದ್ಯ ಜಯಿಸಿದಲ್ಲಿ ನಂ.1 ಸ್ಥಾನ ತನ್ನದಾಗಿಸಿಕೊಳ್ಳಲಿದೆ. ಅನನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಶ್ರೀಲಂಕಾ ತಂಡಕ್ಕೆ ಈ ಪಂದ್ಯದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲವಾದ್ದರಿಂದ ಸರಣಿ ಗೆಲುವಿಗಾಗಿ ಒತ್ತಡ ಮುಕ್ತವಾಗಿ ಹೋರಾಡಲಿದೆ.

ಆದರೆ, ಭಾರತ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಟೀಮ್ ಇಂಡಿಯಾಗೆ ಸೋಲುಣಿಸುವುದು ಅಷ್ಟು ಸುಲಭದ ಮಾತಲ್ಲ. ಬೃಹತ್ ಮೊತ್ತವನ್ನೂ ಮೆಟ್ಟಿ ನಿಲ್ಲಬಲ್ಲ ಬಲಿಷ್ಠ ಬ್ಯಾಟಿಂಗ್ ವಿಭಾಗ ಧೋನಿ ಪಡೆಗಿದೆ.

ಗುಣಮಟ್ಟದ ಔಟ್‌ಫೀಲ್ಡ್ ಕೊರತೆ

ಇದೇ ವೇಳೆ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯ ಸಿದ್ಧತೆಗೆ ಬೇಕಾದ ಕಾಲಾವಕಾಶ ನೀಡಲಾಗಿಲ್ಲ ಎಂದು ದೂರಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ, ಗುಣಮಟ್ಟದ ಔಟ್ ಫೀಲ್ಡ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಔಟ್‌ಫೀಲ್ಡ್ ಫೀಲ್ಡರ್‌ಗಳಿಗೆ ಬಹುದೊಡ್ಡ ಸವಾಲಾಗಲಿದೆ. ಅಲ್ಲದೆ ಹಸಿರು ಹಾಸಿನ ಮಧ್ಯೆ ಕೆಲವೆಡೆ ಮಣಿನ ನೆಲ ಕಾಣುವ ಸಾಧ್ಯತೆ ಇದೆ.

ಯುವ ವೇಗಿಗಳ ಸವಾಲು

ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸದಲ್ಲಿನ ಏಕದಿನ ಸರಣಿಯಲ್ಲಿ ಭಾರತ ತಂಡ, ಆತಿಥೇಯರ ಯುವ ವೇಗದ ಬೌಲರ್ ಮುಸ್ತಾಫಿಜುರ್ ರಹ್ಮಾನ್ ಎದುರು ವೈಫಲ್ಯ ಅನುಭವಿಸಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿಯೂ ಇಂಥದ್ದೇ ಪರಿಸ್ಥಿತಿ ಎದುರಾಗಿದ್ದು, ಲಂಕೆಯ ಯುವ ವೇಗಿಗಳಾದ ಕಸುನ್ ರಜಿತ, ದುಷ್ಮಾಂತ ಚಾಮೀರ ಹಾಗೂ ದಸುನ್ ಶನಕ ಭಾರತೀಯ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಿದ್ದಾರೆ. ಆದರೆ, ವೇಗದ ಬೌಲರ್‌ಗಳಿಗೆ ನೆರವಾದ ಪುಣೆಯ ಹಸಿರು ಹಾಸಿನ ಪಿಚ್‌ಗೂ ಇದೀಗ ರಾಂಚಿಯ ಪಿಚ್‌ಗೂ ಸಾಕಷ್ಟು ವ್ಯತ್ಯಾಸವಿದ್ದು ಲಂಕಾ ಬೌಲರ್‌ಗಳು ಮತ್ತೊಮ್ಮೆ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡುತ್ತಾರೆಯೇ ಅಥವಾ ವಿಫಲರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವಕಪ್‌ಗೆ ಎಚ್ಚರಿಕೆಯ ಕರೆಗಂಟೆ

ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯರ ವಿರುದ್ಧ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡಕ್ಕೆ ತವರಿನಲ್ಲಿ ಲಂಕೆ ಎದುರು ಮೊದಲ ಪಂದ್ಯದಲ್ಲಿಯೇ ಮುಖಭಂಗವಾಗಿದೆ. ಇದು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಎದುರಾಳಿ ಯಾವುದೇ ತಂಡವಾಗಲಿ, ಸಂದರ್ಭ ಹಾಗೂ ಪಿಚ್‌ಗಳಿಗೆ ಸರಿಯಾಗಿ ಹೊದಿಕೊಳ್ಳುವ ಮೂಲಕ ದಿಟ್ಟ ಆಟ ಪ್ರದರ್ಶಿಸುವತ್ತ ಭಾರತ ತಂಡ ಗಮನ ನೀಡಬೇಕಿದೆ.

ದಿಲ್ಷಾನ್ ಸೇವೆ ಅಲಭ್ಯ

ಗಾಯದ ಸಮಸ್ಯೆಗೆ ತುತ್ತಾಗಿರುವ ಶ್ರೀಲಂಕಾ ತಂಡದ ಅನುಭವಿ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಷಾನ್, ಪುಣೆಯಲ್ಲಿ ನಡೆದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಅವರ ಚೇತರಿಕೆಯ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲವಾದ್ದರಿಂದ ರಾಂಚಿಯಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಕ್ಕೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ.

ರೈನಾ, ಯುವಿ ಮೇಲೆ ಒತ್ತಡ

ವಿಶ್ವ ಟಿ20 ಹೊತ್ತಿಗೆ ಲಯ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿರುವ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್, ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ತಂಡದಲ್ಲಿ ಮರಳಿ ಸ್ಥಾನ ಪಡೆದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ ಈ ಅನುಭವಿ ಆಟಗಾರು, ಇದೀಗ ಲಂಕೆ ವಿರುದ್ಧ ಸರಣಿ ಸೋಲಿನ ಆಘಾತ ತಪ್ಪಿಸುವಂತಹ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ.

ತಂಡಗಳ ವಿವರ

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಹರ್ಭಜನ್ ಸಿಂಗ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಪವನ್ ನೇಗಿ, ಭುನೇಶ್ವರ್ ಕುಮಾರ್, ಆಶೀಶ್ ನೆಹ್ರಾ ಹಾಗೂ ಜಸ್‌ಪ್ರೀತ್ ಬುಮ್ರಾ.

ಶ್ರೀಲಂಕಾ: ದಿನೇಶ್ ಚಾಂದಿಮಾಲ್ (ನಾಯಕ), ದುಶ್ಮಾಂತ ಚಾಮೀರ, ನಿರೋಶನ್ ದಿಕ್ವೆಲ್ಲ, ಬಿನುರ ಫರ್ನಾಂಡೊ, ದಿಲ್ಹಾರ ಫರ್ನಾಂಡೊ, ಅಸೆಲ ಗುಣರತ್ನೆ, ಧನುಷ್ಕ ಗುಣತಿಲಕ, ಚಾಮರ ಕಪುಗೆಡೆರ, ತಿಸಾರ ಪೆರೆರಾ, ಸೀಕ್ಕುಗೆ ಪ್ರಸನ್ನ, ಕಸುನ್ ರಜಿತ, ಸಚಿತ್ರ ಸೇನನಾಯಕೆ, ದಸುನ್ ಶನಕ, ಮಿಲಿಂದ ಸಿರಿವರ್ಧನ, ಜೆಫ್ರಿ ವ್ಯಾಂಡರ್ಸೆ ಹಾಗೂ ತಿಲಕರತ್ನೆ ದಿಲ್ಷಾನ್.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ಸ್ಥಳ: ರಾಂಚಿ (ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>