Quantcast
Channel: VijayKarnataka
Viewing all articles
Browse latest Browse all 6795

ಭಗವದ್ಗೀತೆಯಲ್ಲಿ ಸಂಖ್ಯಾಶಾಸ್ತ್ರ

$
0
0

* ಪ್ರಕಾಶ್ ಜೋಯ್ಸ
ಮನುಷ್ಯನ ಭವಿಷ್ಯವನ್ನು ತಿಳಿಸುವ ಮೂರು ಶಾಸ್ತ್ರಗಳೆಂದರೆ ಜ್ಯೋತಿಷ್ಯ, ಹಸ್ತ ರೇಖೆಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ. ಜ್ಯೋತಿಷ್ಯಶಾಸ್ತ್ರ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರವು ಭವಿಷ್ಯವನ್ನು ಸ್ವಾಗತಿಸಲು ಸಲಹೆ ನೀಡುತ್ತದೆ.

ಸಂಖ್ಯೆಗಳು ಇಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಎಲ್ಲ ಕಾಲಗಳಲ್ಲಿಯೂ ಲೋಕದ ಸೃಷ್ಟಿ ಸ್ಥಿತಿ ಲಯಗಳನ್ನು ತಿಳಿಸುವುದು ಸಂಖ್ಯೆಗಳ ಮೂಲಕವೇ. ಕೃತಯುಗ, ತೇತ್ರಾಯುಗ, ದ್ವಾಪರ ಯುಗ ಮತ್ತು ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿ ಒಂದೊಂದು ಯುಗಗಳಿಗೂ ವರ್ಷಗಳನ್ನು ನಿಗದಿಪಡಿಸಿ ಕೊನೆಗೆ ಪ್ರಳಯ ಎಂದು ಲೆಕ್ಕ ಮಾಡಿ ನಿಷ್ಕರ್ಷಿಸಿರುವುದು ಸಂಖ್ಯೆಗಳ ಆಧಾರದಿಂದಲೇ. ಬೆಳಗ್ಗೆಯಿಂದ ರಾತ್ರಿ ಮಲಗುವರೆಗೂ ಪ್ರಪಂಚದ ಎಲ್ಲ ಕಾರ್ಯಗಳೂ ಸಂಖ್ಯೆಗಳ ಅನುಸರಿಸಿಯೇ ಮುಂದುವರಿಯುತ್ತದೆ. ಸೊನ್ನೆಗೆ ಸ್ವತಃ ಸ್ಥಾನಮಾನ ಇಲ್ಲ. ಬೇರೊಂದು ಸಂಖ್ಯೆಯೊಂದಿಗೆ ಸೇರಿದರೆ ಅದರ ಬೆಲೆ ಬರುವುದು. ಸಂಖ್ಯಾಶಾಸ್ತ್ರಕ್ಕೂ ಜ್ಯೋತಿಷ್ಯಶಾಸ್ತ್ರಕ್ಕೂ ಸಂಬಂಧ ಇದೆ. ಏಕೆಂದರೆ 12 ರಾಶಿ, 9 ಗ್ರಹ, 27 ನಕ್ಷತ್ರಗಳು. 12 ರಾಶಿಯಲ್ಲಿ 27 ನಕ್ಷತ್ರಗಳು ಇವೆ. ಅಂದರೆ ಒಂದೊಂದು ರಾಶಿಗೂ ಸರಾಸರಿ ಎರಡೂವರೆ ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ 4 ಪಾದಗಳು ಎರಡೂ ಕಾಲು ನಕ್ಷತ್ರಗಳಿಗೆ 9 ಪಾದಗಳು. ಅಂದರೆ ಒಂದೊಂದು ರಾಶಿಯಲ್ಲಿಯೂ 9 ಪಾದಗಳಿವೆ. 12 ರಾಶಿಗಳಿಗೆ ಒಟ್ಟು 108 ಪಾದಗಳು. ಇದರಿಂದ ತಿಳಿಯುವುದು ಜ್ಯೋತಿಷ್ಯಶಾಸ್ತ್ರದಲ್ಲಿಯೂ ಸಂಖ್ಯೆಗಳಲ್ಲಿ ಪ್ರಧಾನವಾಗಿರುವುದೂ ಕಂಡು ಬರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ 4 ಬಗೆ. ಅವು ಯಾವುವು ಎಂದರೆ ಜನ್ಮ ಸಂಖ್ಯೆ, ಭಾಗ್ಯ ಸಂಖ್ಯೆ, ನಾಮ ಸಂಖ್ಯೆ ಮತ್ತು ವರ್ಷ ಸಂಖ್ಯೆ.

*ಜನ್ಮ ಸಂಖ್ಯೆ:

ಇದನ್ನು ವ್ಯಕ್ತಿತ್ವದ ಸಂಖ್ಯೆ ಎನ್ನುತ್ತಾರೆ. ಯಾವುದೇ ವ್ಯಕ್ತಿಯ ಹುಟ್ಟಿದ ತಾರೀಖು, ತಿಂಗಳು ಮತ್ತು ವರ್ಷದ ಸಂಖ್ಯೆಗಳನ್ನು ಕೂಡಿಸಿ ಬರುವ ಮೊತ್ತದ ಏಕ ಸಂಖ್ಯೆ. ಉದಾ:10-12-1985. 1+0+1+2+1+9+8+5 =27. 2+7=9.

*ನಾಮ ಸಂಖ್ಯೆ:

ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆಯ ಮೊತ್ತವೇ ನಾಮ ಸಂಖ್ಯೆ. ಇದರಿಂದ ನಮ್ಮ ವೈಯಕ್ತಿಕ ಆಸೆಗಳು ಹಾಗೂ ಅದೃಷ್ಟವನ್ನು ತಿಳಿಯಬಹುದು.

*ವರ್ಷ ಸಂಖ್ಯೆ: ವ್ಯಕ್ತಿಯ ಜನನ ವರ್ಷದ ಎಲ್ಲ ಅಂಕಗಳನ್ನು ಕೂಡಿದರೆ ಬರುವ ಮೊತ್ತದ ಏಕ ಸಂಖ್ಯೆ. ಉದಾ:ಜನನ ವರ್ಷ 1964 ಆಗಿದ್ದರೆ ವರ್ಷ ಸಂಖ್ಯೆ 1+9+6+4=20. ಅಂದರೆ 2+0=2 ವರ್ಷ ಸಂಖ್ಯೆ.

ಕುರು ಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನು ರಣರಂಗದಲ್ಲಿ ದಾಯಾದಿಗಳು, ಬಂಧುಗಳನ್ನು ನೋಡಿ ಯುದ್ಧ ಮಾಡಲು ಹಿಂಜರಿದನು. ಆ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಕರ್ತವ್ಯ ಬೋಧನೆ ಮಾಡುತ್ತಾ ಭಗವದ್ಗೀತೆಯನ್ನು ಬೋಧಿಸಿದನು. ಆ ದಿನ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವಾಗಿತ್ತು. ಶ್ರೀ ಕೃಷ್ಣನು ಭಗವದ್ಗೀತೆಯ 18 ಅಧ್ಯಾಯನವನ್ನು ಬೋಧಿಸಿದನು. ಯುದ್ಧದಲ್ಲಿ ಕಾಲಾಳುಗಳು 19,68,300 ಇದ್ದವು (1+9+6+8+3+0+0. ಏಕ ಸಂಖ್ಯೆ 9). ಕುದುರೆಗಳು 11,80,980 (1+1+8+0+9+8+0. ಏಕ ಸಂಖ್ಯೆ 9). ಆನೆಗಳು 3,93,660 (3+9+3+6+6+0. ಏಕ ಸಂಖ್ಯೆ 9). ಸಂಖ್ಯಾಶಾಸ್ತ್ರದ ಪ್ರಕಾರ 9 ಪರಿಪೂರ್ಣ ಸಂಖ್ಯೆ. 9 ರ ಅಧಿಪತಿ ಕುಜ. ಈ ಗ್ರಹದ ಮೂಲಕ ಮನುಷ್ಯನ ಸಾಹಸ ಧೈರ್ಯ ಮತ್ತು ಶಕ್ತಿ ತಿಳಿಯುವುದು. ಭಗವದ್ಗೀತೆಗೆ ಇನ್ನೊಂದು ಹೆಸರು ಜಯ ಎಂದು. ಜಯ ಎಂದರೆ 18 ಎಂದು (1+8=9). ಅಕ್ಷರ ಸಂಖ್ಯಾ ಪ್ರಕಾರ ಸಮಷ್ಟಿ ಮಾಡಿದರೆ 9 ಬರುವುದು. ಈ ರೀತಿ ನಾವು ಭಗವದ್ಗೀತೆಯಲ್ಲೂ ಸಂಖ್ಯಾಶಾಸ್ತ್ರದ ಮಹತ್ವ ತಿಳಿಯಬಹುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>