Quantcast
Channel: VijayKarnataka
Viewing all articles
Browse latest Browse all 6795

ಆರಂಭದಲ್ಲೇ ಮುಗ್ಗರಿಸಿದ ಭಾರತ

$
0
0

ಮೊದಲ ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಸೋಲು ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಧೋನಿ ಪಡೆ

ಪುಣೆ: ತವರು ನೆಲದಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಭಾರತ ತಂಡ, ಪ್ರವಾಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ 5 ವಿಕೆಟ್‌ಗಳ ಸೋಲನುಭವಿಸಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಧೋನಿ ಪಡೆ, 18.5 ಓವರ್‌ಗಳಲ್ಲಿ 101ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಯಿತು. ಲಂಕಾ ಪರ ಕಸುನ್ ರಜಿತ (29ಕ್ಕೆ 3), ದಸುನ್ ಶನಕ (16ಕ್ಕೆ 3) ಹಾಗೂ ದುಷ್ಮಾಂತ ಚಾಮೀರ (14ಕ್ಕೆ 2) ಮಾರಕ ದಾಳಿ ಸಂಘಟಿಸಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾದರು.

ಬಳಿಕ ಸುಲಭದ ಗುರಿ ಬೆನ್ನತ್ತಿದ ದಿನೇಶ್ ಚಾಂದಿಮಾಲ್ ನೇತೃತ್ವದ ಶ್ರೀಲಂಕಾ ತಂಡ, 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡು ಸರಣಿಯಲ್ಲಿ 1-0 ಅಂತರದ ಮೇಲುಗೈ ಪಡೆದಿದೆ. ಭಾರತದ ಪರ ಅನುಭವಿ ವೇಗಿ ಆಶಿಶ್ ನೆಹ್ರಾ ಹಾಗೂ ಆಫ್ ಸ್ಪಿನ್ನರ್ ಆರ್. ಅಶ್ವಿನ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.

ಖಾತೆ ತೆರೆಯದ ರೋಹಿತ್

ವೇಗದ ಬೌಲರ್‌ಗಳಿಗೆ ನೆರವಾಗುವ ಹಸಿರು ಹಾಸಿನ ಪಿಚ್‌ನಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ನಾಯಕ ಚಾಂದಿಮಾಲ್ ನಿರ್ಧಾರವನ್ನು ಎತ್ತಿ ಹಿಡಿದ ಲಂಕೆಯ ಯುವ ವೇಗದ ಬೌಲರ್‌ಗಳು ಟೀಮ್ ಇಂಡಿಯಾದ ದೈತ್ಯ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡುವಲ್ಲಿ ಯಶಸ್ವಿಯಾದರು.

ಇನಿಂಗ್ಸ್‌ನ 2ನೇ ಎಸೆತದಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಕಸುನ್ ರಜಿತ ಅವರ ಬೌಲಿಂಗ್‌ನಲ್ಲಿ ಆತುರದ ಹೊಡೆತಕ್ಕೆ ಕೈಹಾಕಿ ಮಿಡ್‌ಆಫ್‌ನಲ್ಲಿದ್ದ ಚಾಮೀರಾಗೆ ಕ್ಯಾಚಿತ್ತು ಶೂನ್ಯ ಸಂಪಾದನೆಯೊಂದಿಗೆ ನಿರ್ಗಮಿಸಿದರು. ಇದರೊಂದಿಗೆ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಎದುರಾಯಿತು.

ಲಯ ಕಳೆದುಕೊಂಡಿರುವ ರಹಾನೆ

ಆಸ್ಟ್ರೇಲಿಯಾ ಸರಣಿ ವೇಳೆ ಗಾಯಗೊಂಡು ವಿಶ್ರಾಂತಿಯಲ್ಲಿದ್ದ ಪ್ರಮುಖ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ, ಶ್ರೀಲಂಕಾ ಬೌಲರ್‌ಗಳ ಎದುರು ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಒಂದು ಬೌಂಡರಿಯೊಂದಿಗೆ ಖಾತೆ ತೆರೆದ ರಹಾನೆ, ರಜಿತ ಅವರ ಬೌಲಿಂಗ್‌ನಲ್ಲಿ ರಕ್ಷಣಾತ್ಮಕವಾಗಿ ಆಡುವ ಪ್ರಯತ್ನದಲ್ಲಿ ಔಟಾದರು. ರಹಾನೆ ಬ್ಯಾಟಿನಂಚಿಗೆ ತಗುಲಿದ ಚೆಂಡು ಕವರ್ಸ್‌ನಲ್ಲಿದ್ದ ದಿನೇಶ್ ಚಾಂದಿಮಾಲ್ ಅವರ ಕೈ ಸೇರಿತ್ತು.

ಮಂಕಾದ ಮಧ್ಯಮ ಕ್ರಮಾಂಕ

ರೋಹಿತ್, ರಹಾನೆ ನಿರ್ಗಮಿಸಿದಾಗ ತಂಡದ ಪರ ರನ್ ಗಳಿಸುವ ನೊಗ ಹೊತ್ತಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, 1 ಸಿಕ್ಸರ್ ಸಹಿತ 13 ಎಸೆತಗಳಲ್ಲಿ 9 ರನ್ ಗಳಿಸಿದ್ದರು. ಆದರೆ, ರಜಿತ ಅವರ ಬೌಲಿಂಗ್‌ನಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ನಿರಾಸೆ ಅನುಭವಿಸಿದರು. 3ನೇ ಓವರ್‌ನಲ್ಲಿ ತರ್ಡ್‌ಮನ್ ವಿಭಾಗದಲ್ಲಿ ಕ್ಯಾಚ್ ಕೈಚೆಲ್ಲಿದರಿಂದ ಜೀವ ದಾನ ಪಡೆದಿದ್ದ ಧವನ್, 5ನೇ ಓವರ್‌ನ ಕೊನೆಯ ಎಸೆತದಲ್ಲಿ ಅದೇ ವಿಭಾಗದಲ್ಲಿ ಕ್ಯಾಚಿತ್ತು ಔಟಾದರು.

ಈ ಮಧ್ಯೆ ಟಿ20 ಸ್ಪೆಷಲಿಸ್ಟ್ ಸುರೇಶ್ ರೈನಾ, ತಲಾ ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 20 ಎಸೆತಗಳಲ್ಲಿ 20 ರನ್‌ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗುವ ಪ್ರಯತ್ನ ನಡೆಸಿದರು. ಆದರೆ, ಮಧ್ಯಮ ವೇಗಿ ದಸುನ್ ಶನಕ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಹೊರನಡೆದರು. ಅನುಭವಿಗಳದ ಯುವರಾಜ್ ಸಿಂಗ್ (10) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (2) ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದರು.

ಕೆಳ ಕ್ರಮಾಂಕದಲ್ಲಿ ಅಶ್ವಿನ್ ಹೋರಾಟ

ಬ್ಯಾಟಿಂಗ್ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯಾ (2) ಮತ್ತು ರವೀಂದ್ರ ಜಡೇಜಾ (6) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಕೆಳ ಕ್ರಮಾಂಕದಲ್ಲಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 24 ಎಸೆತಗಳಲ್ಲಿ 5 ಆಕರ್ಷಕ ಬೌಂಡರಿಗೊಂದಿಗೆ 31 ರನ್‌ಗಳಿಸಿ ಔಟಾಗದೆ ಉಳಿದರು. ಅಲ್ಲದೆ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>