Quantcast
Channel: VijayKarnataka
Viewing all articles
Browse latest Browse all 6795

ವಿಶ್ವಟಿ20: ಸರಕಾರದ ಅನುಮತಿ ನಿರೀಕ್ಷೆಯಲ್ಲಿ ಪಾಕ್

$
0
0

ಲಾಹೋರ್ : ಭಾರತದ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಟಿ20 ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ತಂಡ ಸಿದ್ಧವಿದ್ದರೂ ಭದ್ರತಾ ದೃಷ್ಟಿಯಿಂದ ಭಾರತದ ಪ್ರವಾಸಕ್ಕೆ ಪಾಕಿಸ್ತಾನ ಸರಕಾರ ಇನ್ನು ಅನುಮತಿ ನೀಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ಶಹರ್ಯಾರ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನ ಸರಕಾರ ಅನುಮತಿ ನೀಡಿದರೆ ಮಾ.8ರಿಂದ ಏ.3ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳಲಿದೆ. ಪ್ರಸ್ತುತ ಆತಂಕದ ವಿಷಯ ಕುರಿತು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಯೊಂದಿಗೆ ಸಂವಹನ ನಡೆಸಲಾಗಿದೆ ಎಂದು ಖಾನ್ ಲಾಹೋರ್‌ನಲ್ಲಿ ತಿಳಿಸಿದ್ದಾರೆ. '' ಟೂರ್ನಿಯಲ್ಲಿ ಭಾಗಿಯಾಗುವ ಬಗ್ಗೆ ಐಸಿಸಿಗೆ ತಿಳಿಸಿದ್ದೇವೆ. ಈ ಕುರಿತ ನಿರ್ಧಾರ ಸರಕಾರ ತೆಗೆದುಕೊಳ್ಳಬೇಕೇ ಹೊರತು ನಮ್ಮದಲ್ಲ,'' ಎಂದು ಹೇಳಿದ್ದಾರೆ.

ಪಾಕಿಸ್ತಾನ ಮೂಲದವರು ಭದ್ರತಾ ಆತಂಕ ಎದುರಿಸುತ್ತಿರುವ ಕುರಿತು ನಾವು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಾವು ಸರಕಾರದೊಂದಿಗೆ ಭಾಗಿಯಾಗಿದ್ದೇವೆ ಎಂದು ಪಿಸಿಬಿ ಮುಖ್ಯಸ್ಥರು ಹೇಳಿದ್ದಾರೆ. ಕಳೆದ ತಿಂಗಳಲಷ್ಟೇ ಸುರಕ್ಷತೆ ಮತ್ತು ಭದ್ರತಾ ದೃಷ್ಟಿಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡ ಹೊರಗುಳಿದಿದೆ. ಇದೇ ಕಾರಣಕ್ಕಾಗಿ ಕಳೆದ ಆಕ್ಟೋಬರ್‌ನಲ್ಲಿ ಬಾಂಗ್ಲಾ ಪ್ರವಾಸವನ್ನು ಮೊಟಕುಗೊಳಿಸಿತ್ತು. ಪಾಕ್ ಹೇಳಿಕೆಗೆ ಬಿಸಿಸಿಐ ಆಗಲಿ ಅಥವಾ ಐಸಿಸಿ ಆಗಲಿ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಈ ಮಧ್ಯೆ ವಿಶ್ವ 20ಗೆ ಪಿಸಿಬಿ ತಂಡವನ್ನು ಪ್ರಕಟಿಸಿದ್ದು,ಆರಂಭಿಕ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ಅವರನ್ನು ಮುಂಬರುವ ಏಷ್ಯಾ ಕಪ್ ಮತ್ತು ವಿಶ್ವ20ತಂಡದಿಂದಕೈಬಿಡಲಾಗಿದೆ.

ತಂಡದ ವಿವರ: ಶಾಹಿದ್ ಆಫ್ರಿದಿ(ನಾಯಕ), ಮೊಹಮ್ಮದ್ ಹಫೀಜ್, ಶೊಯೇಬ್ ಮಲಿಕ್, ಉಮರ್ ಅಕ್ಮಲ್, ಸರ್ಫರಾಜ್ ಅಹ್ಮದ್, ಬಾಬರ್ ಅಜಾಂ, ಇಫ್ತಿಖಾರ್ ಅಹ್ಮದ್, ಇಮಾದ್ ವಾಸಿಂ, ಅನ್ವರ್ ಅಲಿ, ಮೊಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್, ಮೊಹಮ್ಮದ್ ನವಾಜ್, ಖುರ‌್ರಂ ಮನ್ಜೂರ್, ರುಮ್ಮಾನ್ ರಯೀಸ್


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>