Quantcast
Channel: VijayKarnataka
Viewing all articles
Browse latest Browse all 6795

ಫೈನಲ್‌ಗೆ ಯುವ ಭಾರತ ಲಗ್ಗೆ

$
0
0

ಐಸಿಸಿ ಕಿರಿಯರ ಏಕದಿನ ಕ್ರಿಕೆಟ್ ವಿಶ್ವಕಪ್ ಶ್ರೀಲಂಕಾ ವಿರುದ್ಧ ಯಂಗ್ ಇಂಡಿಯಾಗೆ 97 ರನ್‌ಗಳ ಭರ್ಜರಿ ಗೆಲುವು

ಮೀರ್‌ಪುರ: ಅಮೋಘ ಪ್ರದರ್ಶನ ಮುಂದುವರಿಸಿರುವ ಮೂರು ಬಾರಿಯ ಚಾಂಪಿಯನ್ ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 97 ರನ್‌ಗಳಿಂದ ಬಗ್ಗು ಬಡಿದು ಫೈನಲ್ ತಲುಪಿದೆ.

ಇಲ್ಲಿನ ಶೇರ್ ಬಾಂಗ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಯಂಗ್ ಇಂಡಿಯಾ, ಆರಂಭಿಕ ಆಘಾತದಿಂದ ಚೇತರಿಕೆ ಪಡೆದು ತನ್ನ ಪಾಲಿನ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 267 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

ಬಳಿಕ ಚುರುಕಿನ ಕ್ಷೇತ್ರ ರಕ್ಷಣೆ ಮತ್ತು ಶಿಸ್ತಿನ ಬೌಲಿಂಗ್ ದಾಳಿಯ ನೆರವಿನಿಂದ ದ್ವೀಪ ರಾಷ್ಟ್ರ ಶ್ರೀಲಂಕಾ ತಂಡವನ್ನು 42.4 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ ಯುವ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು. ಇದರೊಂದಿಗೆ ಫೆ.14 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಮುಂದಾಳತ್ವದ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ಅಥವಾ ವೆಸ್ಟ್ ಇಂಡೀಸ್ ತಂಡವನ್ನು ಎದುರಾಗಲಿದೆ.

ಆರಂಭಿಕ ಆಘಾತದಿಂದ ಚೇತರಿಕೆ

ಅಗ್ರ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಶಕ್ತಿಯಾಗಿರುವ ರಿಶಭ್ ಪಂತ್ (14) ಹಾಗೂ ನಾಯಕ ಇಶಾನ್ ಕಿಶನ್ (7) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ತಂಡದ ಮೊತ್ತ 27 ರನ್ ತಲುಪುವ ಹೊತ್ತಿಗಾಗಲೇ ಇಬ್ಬರೂ ಆರಂಭಿಕರು ಪೆವಿಲಿಯನ್ ಸೇರಿದ್ದರು. ಆದರೆ, ಈ ಹಂತದಲ್ಲಿ ಜತೆಯಾದ ಅನ್ಮೋಲ್‌ಪ್ರೀತ್ ಸಿಂಗ್ ಹಾಗೂ ಸರ್ಫರಾಜ್ ಖಾನ್, 126 ಎಸೆತಗಳಲ್ಲಿ 96 ರನ್‌ಗಳ ಅಮೋಘ ಜತೆಯಾಟ ನಡೆಸಿ ಚೇತರಿಕೆ ನೀಡದರು.

ಅನ್ಮೋಲ್, ಸರ್ಫರಾಜ್ ಅರ್ಧಶತಕ

ಶ್ರೀಲಂಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಅನಮೋಲ್‌ಪ್ರೀತ್ ಸಿಂಗ್, 92 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 72 ರನ್ ದಾಖಲಿಸಿದರು. ಅವರ ಈ ಜಾವಾಬ್ದಾರಿಯುತ ಬ್ಯಾಟಿಂಗ್‌ಗೆ ಪಂದ್ಯ ಶ್ರೇಷ್ಠ ಗೌರವ ಒಲಿಯಿತು. ಮತ್ತೊಂದೆಡೆ ಟೂರ್ನಿಯಲ್ಲಿ ಭಾರತ ತಂಡದ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್, 71 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 59 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಕಳೆದ ಐದು ಇನಿಂಗ್ಸ್‌ಗಳಲ್ಲಿ ಸರ್ಫರಾಜ್ ಗಳಿಸಿದ ನಾಲ್ಕನೇ ಅರ್ಧಶತಕ ಇದಾಗಿದೆ.

ಇನಿಂಗ್ಸ್ ಅಂತ್ಯದಲ್ಲಿ ವಾಷಿಂಗ್ಟನ್ ಸುಂದರ್ (43 ರನ್, 45 ಎಸೆತಗಳು) ಹಾಗೂ ಅರ್ಮಾನ್ ಜಾಫರ್ (29 ರನ್, 16 ಎಸೆತಗಳು) ಅಮೂಲ್ಯ ರನ್‌ಗಳ ಕಾಣಿಕೆ ನೀಡಿದರು. ಶ್ರೀಲಂಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ವೇಗಿ ಅಸಿತ ಫರ್ನಾಂಡೊ, 43ಕ್ಕೆ 4 ವಿಕೆಟ್ ಪಡೆದು ಭಾರತ ತಂಡದ ಬ್ಯಾಟಿಂಗ್ ಪಲ ಅಡಗಿಸಲು ಯತ್ನಿಸಿದರು. ಲಾಹಿರು ಕುಮಾರ (50ಕ್ಕೆ 2) ಹಾಗೂ ತಿಲಾನ್ ನಿಮೇಶ್ (50ಕ್ಕೆ 2) ಉತ್ತಮ ಸಾಥ್ ನೀಡಿದರು.

ಡಾಗರ್ ಸ್ಪಿನ್ ಮೋಡಿ, ಚುರುಕಿನ ಫೀಲ್ಡಿಂಗ್

ಮೈದಾನದಲ್ಲಿ ಪಾದರಸದಂತೆ ಹರಿದಾಡಿ ಚುರುಕಿನ ಕ್ಷೇತ್ರ ರಕ್ಷಣೆಯೊಂದಿಗೆ ಗಮನ ಸೆಳೆದ ಯುವ ಭಾರತ ತಂಡ, ಎದುರಾಳಿ ತಂಡದ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ರನ್‌ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ವೇಗಿಗಳಾದ ಅವೇಶ್ ಖನ್ (41ಕ್ಕ 2) ಹಾಗೂ ಖಲೀಲ್ ಅಹ್ಮದ್ (34ಕ್ಕೆ 1) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ಉತ್ತಮ ಆರಂಭ ಒದಗಿಸಿಕೊಟ್ಟರು. ಇನಿಂಗ್ಸ್ ಮಧ್ಯದಲ್ಲಿ ಹೋರಾಟ ಪ್ರದರ್ಶಿಸಿದ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾದ ಎಡಗೈ ಸ್ಪಿನ್ ಬೌಲರ್ ಮಯಾಂಕ್ ಡಾಗರ್, 21 ರನ್ ನೀಡಿ 3 ವಿಕೆಟ್ ಪಡೆದು ಭಾರತದ ಗೆಲುವನ್ನು ಖಾತ್ರ ಪಡಿಸಿದರು. ಉಳಿದಂತೆ ರಾಹುಲ್ ಬಾಥಮ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ವಿಕೆಟ್ ಪಡೆದು ಗೆಲುವಿಗೆ ಬಲವಾದರು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>