Quantcast
Channel: VijayKarnataka
Viewing all articles
Browse latest Browse all 6795

ಭವಿಷ್ಯ ಹೇಳುವ ಸಿರಿವಂತ ಕನಸು

$
0
0

ಕನಸು ಬೀಳುವುದು ಸಹಜ. ಮಗುವಿನಿಂದ ಹಿಡಿದು ಎಲ್ಲ ವಯಸ್ಸಿನವರಿಗೂ ಕನಸು ಬೀಳುತ್ತದೆ. ಆದರೆ ಕೆಲವು ನಿರ್ದಿಷ್ಟ ಕನಸು ಬಿದ್ದರೆ ನಿಮ್ಮ ಸಂಪತ್ತು ವೃದ್ಧಿಸುತ್ತದೆ.

*ಕನಸಿನಲ್ಲಿ ಯಾವುದಾದರು ದೇವತೆ ಅಥವಾ ದೇವರು ಕಂಡರೆ ಮುಂಬರುವ ದಿನಗಳಲ್ಲಿ ಯಶಸ್ಸು ಉಂಟಾಗಿ ಸಂಪತ್ತು ಹೆಚ್ಚಾಗುತ್ತದೆ.

*ಮಹಿಳೆ ಅಥವಾ ಹುಡುಗಿ ಡಾನ್ಸ್ ಮಾಡುವ ಕನಸು ಕಂಡರೆ ಹಣ ಬರುವ ಸೂಚನೆ ಇದು.

*ಮಿಂಚುಳ್ಳಿ ಅಥವಾ ಕೊಕ್ಕರೆಯ ಕನಸು ಬಿದ್ದರೆ ಗೌರವ ಹೆಚ್ಚಾಗುತ್ತದೆ ಮತ್ತು ಕೆಲವೇ ದಿನಗಳಲ್ಲಿ ಹಣ ಬರುತ್ತದೆ.

*ಕದಮ್ ಮರವು ಕನಸಿನಲ್ಲಿ ಕಂಡರೆ ಒಳ್ಳೆಯ ಆರೋಗ್ಯ, ಗೌರವ ಮತ್ತು ಸಂಪತ್ತು ಬರುವ ಸೂಚನೆ.

*ನೆಲ್ಲಿಕಾಯಿ ಮತ್ತು ತಾವರೆ ಕಂಡರೆ ಕೆಲವೇ ದಿನಗಳಲ್ಲಿ ಹಣ ಬರುತ್ತದೆ.

*ನೀವೇ ಕಿವಿಯೋಲೆಯನ್ನು ಧರಿಸಿಕೊಂಡಂತೆ ಕನಸು ಬಿದ್ದರೆ ಹಣ ಬರುತ್ತದೆ.

*ರೈತರು ಕೃಷಿ ಭೂಮಿಯಲ್ಲಿ ಕೆಲಸ ಮಾಡುವಂತೆ ಕನಸು ಕಂಡರೆ ಅಪರಿಚಿತ ಮೂಲದಿಂದ ಹಣ ಬರುತ್ತದೆ.

*ದೀಪದ ಬಗ್ಗೆ ಕನಸು ಬಿದ್ದರೆ ನಿಮಗೆ ಯಾವುದೋ ಒಂದು ರೀತಿಯಿಂದ ಆಶೀರ್ವಾದ ಸಿಗುತ್ತದೆ.

*ಕನಸಿನಲ್ಲಿ ಚಿನ್ನ ಕಂಡರೆ ಸಂಪತ್ತು ಪಡೆಯುವ ಸೂಚನೆಯಾಗಿದೆ.

*ನೀವು ಬೆರಳಿಗೆ ಉಂಗುರ ಹಾಕುತ್ತಿದ್ದಂತೆ ಕನಸು ಕಂಡರೆ ಐಶ್ವರ್ಯವನ್ನು ಸೂಚಿಸುತ್ತದೆ.

*ಅರಮನೆ ಕಂಡರೆ ಅಧಿಕ ಪ್ರಮಾಣದಲ್ಲಿ ಹಣ ಬರುವ ಸೂಚನೆ.

*ಹಾಲು ಕರೆಯುವ ದೃಶ್ಯ ಕಂಡರೆ ಹಣ ಬರುತ್ತದೆ ಎಂದು ಪರಿಗಣಿಸಲಾಗಿದೆ.

*ಬೇರೆಯವರು ಹಾಲು ಕರೆಯುತ್ತಿರುವ ದೃಶ್ಯ ಕಂಡರೂ ಹಠಾತ್ ಆಗಿ ಹಣ ಬರುತ್ತದೆ.

*ಕನಸಿನಲ್ಲಿ ಬಿಳಿ ಕುದುರೆ ಕಂಡರೆ ಭವಿಷ್ಯದಲ್ಲಿ ಸಂತಸದ ದಿನಗಳು ಇವೆ ಹಾಗೂ ಐಶ್ವರ್ಯ ವೃದ್ಧಿಸುತ್ತದೆ ಎಂಬ ಸೂಚನೆ

*ಆನೆ ಕಂಡರೆ ಯಾವುದೋ ಮೂಲದಿಂದ ಸಂಪತ್ತು ಬರುತ್ತದೆ.

*ಹಸು ಕಂಡರೆ ಮಂಗಳಕರ ಸೂಚನೆಯಾಗಿದ್ದು, ಐಶ್ವರ್ಯ, ವೈಭವ ಮತ್ತು ಅದ್ಭುತಗಳು ಉಂಟಾಗುತ್ತವೆ.

*ಹಾಲು ಮತ್ತು ತುಪ್ಪದ ಕನಸು ಕಂಡರೂ ಹಣ ಬರುತ್ತದೆ.

*ಇಲಿಗಳು ಕಂಡರೆ ಮನೆಗೆ ಸಂಪತ್ತು ಬರುತ್ತದೆ.

*ಕಪ್ಪು ಚೇಳು ಕಂಡರೆ ಸಂಪತ್ತನ್ನು ಸೂಚಿಸುತ್ತದೆ.

*ಹೆಡೆ ಎತ್ತಿದ ಹಾವು ಕಂಡರೆ ಸಂಪತ್ತಿನ ಜತೆಗೆ ಸಮಸ್ಯೆಗಳೂ ಎದುರಾಗುತ್ತವೆ.

*ಬಿಲದಲ್ಲಿ ಹಾವು ಕಂಡರೆ ಹಠಾತ್ ಆಗಿ ಹಣ ಬರುತ್ತದೆ.

*ಸತ್ತ ಪಕ್ಷಿ ಕಂಡರೆ ಚಿಂತಿಸಬೇಡಿ. ಹಠಾತ್ ಹಣ ಬರುವ ಲಕ್ಷಣವಿದು.

*ಗಿಳಿ ಕಂಡರೆ ಹಣ ಬರುತ್ತದೆ ಎಂಬ ಪ್ರಬಲವಾದ ಸೂಚನೆ ಇದು.

*ಮಾವಿನಹಣ್ಣು ಕಂಡರೆ ವಜ್ರ ಮತ್ತು ಚಿನ್ನಾಭರಣ ಸಿಗುತ್ತದೆ ಎಂಬ ಸೂಚನೆ.

*ಜೇನುಗೂಡುಗಳು ಕಂಡರೆ ಹಣ ಪಡೆಯುವ ಸೂಚನೆ.

*ಬಿಳಿ ಇರುವೆ ಕೂಡ ಹಣ ಬರುವ ಸೂಚನೆ.

*ನೀವೇ ಸ್ವತಃ ಮರ ಹತ್ತುವ ಹಾಗೆ ಕಂಡರೆ ಹಣ ಸಂಪಾದನೆ ಮಾಡುತ್ತೀರಿ.

*ಬೆಟ್ಟ, ಗುಡ್ಡಗಳನ್ನು ಹತ್ತುತ್ತಿರುವಂತೆ ಕಂಡರೆಯೂ ಹಣ ಸಂಪಾದನೆ ಮಾಡುತ್ತೀರಿ.

*ಮರದ ತುಂಬಾ ಹಣ್ಣುಗಳು ಇರುವ ಕನಸು ಕಂಡರೆ ಹಣ ಹಾಗೂ ಶ್ರೀಮತಿಂಕೆಯ ಸೂಚನೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>