Quantcast
Channel: VijayKarnataka
Viewing all articles
Browse latest Browse all 6795

ರಾಬರ್ಟ್ ವಾದ್ರಾಗೆ ಕ್ಲೀನ್‌ಚಿಟ್

$
0
0

ಭೂಮಿ ಕಬಳಿಕೆ ಆರೋಪದಲ್ಲಿ ವಾದ್ರಾ ತಪ್ಪಿಲ್ಲ; ರಾಜಸ್ಥಾನ್ ಪೊಲೀಸ್

ಬಿಕಾನೇರ್: ರಾಜಸ್ಥಾನದಲ್ಲಿ ಸರಕಾರಿ ಭೂಮಿ ಕಬಳಿಕೆಯ ಆರೋಪ ಎದುರಿಸುತ್ತಿದ್ದ ಉದ್ಯಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಅಲ್ಲಿನ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ.

ರಾಬರ್ಟ್ ವಾದ್ರಾ ಪ್ರಾಯೋಜಕತ್ವದ 'ಸ್ಕೈ ಲೈಟ್ ಹಾಸ್ಪಿಟಾಲಿಟಿ' ಉದ್ಯಮ ಯಾವುದೇ ತಪ್ಪು ಎಸಗಿಲ್ಲ. ಸರಕಾರಿ ಭೂಮಿ ಕಬಳಿಸಿರುವವರು ಪಿತೂರಿ ಮತ್ತು ವಂಚನೆ ನಡೆಸಿ, ಭೂಮಿಯನ್ನು ವಾದ್ರಾ ಅವರ 'ಸ್ಕೈ ಲೈಟ್ ಹಾಸ್ಪಿಟಾಲಿಟಿ'ಗೆ ಮಾರಾಟ ಮಾಡಿದ್ದಾರೆ ಎಂಬ ವಿಚಾರ ರಾಜಸ್ಥಾನ ಪೊಲೀಸರ ತನಿಖೆಯಿಂದ ಹೊರಮೂಡಿದೆ.

ರಾಬರ್ಟ್ ವಾದ್ರಾ ಮತ್ತು ಅವರ ತಾಯಿಯ ಪ್ರಾಯೋಜಕತ್ವ ಇರುವ 'ಸ್ಕೈ ಲೈಟ್ ಹಾಸ್ಪಿಟಾಲಿಟಿ' ಉದ್ಯಮಕ್ಕೆ ಖೋಟಾ ದಾಖಲೆಗಳ ಆಧಾರದಲ್ಲಿ 69.55 ಹೆಕ್ಟೇರ್ ಸರಕಾರಿ ಭೂಮಿಯನ್ನು 2010ರಲ್ಲಿ ಮಾರಾಟ ಮಾಡಲಾಗಿದೆ ಎಂದು 2014ರಲ್ಲಿ ವಸುಂಧರ ರಾಜೆ ನೇತೃತ್ವದ ರಾಜ್ಯ ಸರಕಾರ, ಪೊಲೀಸ್ ತನಿಖೆಗೆ ಆದೇಶಿಸಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಉಪಪೊಲೀಸ್ ವರಿಷ್ಠಾಧಿಕಾರಿ ರಾಮ್ ಅವತಾರ್ ಸೋನಿ, ಭೂಮಿಯ ವಿಶ್ವಾಸಾರ್ಹ ಖರೀದಿದಾರರಾಗಿರುವ ರಾಬರ್ಟ್ ವಾದ್ರಾ ಅವರು ನಿಶ್ಚಿತವಾಗಿ ವಂಚನೆ ಮತ್ತು ಪಿತೂರಿಯ ಸಂತ್ರಸ್ತರಾಗಿದ್ದಾರೆ. ಈ ಖರೀದಿಯಲ್ಲಿ ಅವರ ತಪ್ಪುಗಳೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾದ್ರಾ ವಿರುದ್ಧ ಸರಕಾರಿ ಭೂಮಿ ಕಬಳಿಕೆಯ ಆರೋಪ ಮಾಡಿದ್ದ ಬಿಕಾನೇರ್ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘ್ವಾಲ್, ಪೊಲೀಸ್ ತನಿಖೆಯ ವರದಿ ತಮಗೆ ತಿಳಿದುಬಂದಿಲ್ಲ ಎಂದು ಉತ್ತರ ನೀಡಿದ್ದಾರೆ.

ಕಾಂಗ್ರೆಸ್ ಶಾಸಕ ಭನ್ವರ್ ಸಿಂಗ್ ಭಾಟಿ ಅವರು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿ ನಡೆಸಿದ ಈ ನಾಟಕದಲ್ಲಿ ಅದು ಸೋತಿದೆ ಎಂದು ಟೀಕಿಸಿದ್ದಾರೆ.

ಖೋಟಾ ದಾಖಲೆಗಳನ್ನು ಸೃಷ್ಟಿಸಿ ವಾದ್ರಾ ಅವರ ಕಂಪನಿಗೆ ಸರಕಾರಿ ಭೂಮಿ ಮಾರಾಟ ಮಾಡಿದ್ದ 9 ವ್ಯಕ್ತಿಗಳ ಹೆಸರನ್ನು ತನಿಖಾ ವರದಿಯಲ್ಲಿ ಪ್ರಕಟಿಸಲಾಗಿದ್ದು, ಅದರಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಭೂಮಿ ಕಬಳಿಕೆ ಸಂಬಂಧ 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲಿ 4 ಪ್ರಕರಣಗಳು ಸ್ಕೈ ಲೈಟ್ ಹಾಸ್ಪಿಟಾಲಿಟಿ ವಿರುದ್ಧ ದಾಖಲಾಗಿವೆ. ಸ್ಕೈ ಲೈಟ್ ಕಂಪನಿಗೆ ಭೂಮಿ ಖರೀದಿಸಿದ ಮಹೇಶ್ ನಗರ್ ಅವರನ್ನು ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಮಾಡಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>