Quantcast
Channel: VijayKarnataka
Viewing all articles
Browse latest Browse all 6795

ಚಳಿ ಚಳಿಯಲಿ 'ಕೊಡಗಿನ ಕಾಫಿ'ಯ ಘಮಲು

$
0
0

ಹೊಸದಿಲ್ಲಿ: ಇಂಡಿಯಾ ಗೇಟ್ ಮತ್ತು ವಿಜಯಚೌಕದ ಭವ್ಯ ಹಿನ್ನೆಲೆಯ ರಾಜಪಥದಲ್ಲಿ ಮಂಗಳವಾರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯದ 'ಕೊಡಗು: ಕಾಫಿಯ ನಾಡು' ಸ್ತಬ್ಧಚಿತ್ರ ನೋಡುಗರ ಮನ ಸೆಳೆಯಿತು.

ಮೂಳೆ ಕೊರೆಯುವ ಚಳಿಯ ವಾತಾವರಣದಲ್ಲಿ ಸ್ತಬ್ದಚಿತ್ರದಿಂದ ಹೊರಟ ಕಾಫಿ ಪರಿಮಳ ನೋಡುಗರ ನಡುವೆ ಪಸರಿಸಿತು. ಬೃಹದಾಕಾರದ ಲೋಟದಿಂದ ಬಟ್ಟಲಿಗೆ ಕಾಫಿಯನ್ನು ಸುರಿಸುತ್ತಿರುವ ಪ್ರತಿಕೃತಿ ಮತ್ತು ಪಸರಿಸಿದ ಪರಿಮಳ ಮತ್ತು ಆವರಿಸಿದ ಹಬೆಯು ಬಿಸಿ ಕಾಫಿಯನ್ನು ಸವಿಯುವ ಬಯಕೆ ಹುಟ್ಟಿಸಿದ್ದು ವಿಶೇಷ. ರಾಜ್ಯ ಮೂಲದ ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಡಿ.ವಿ.ಸದಾನಂದಗೌಡ ಅವರಷ್ಟೇ ಅಲ್ಲದೆ ನೋಡುಗರು ಕೂಡ ಎದ್ದು ನಿಂತು ಸ್ತಬ್ದಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.

ಗಿಡಗಳಿಂದ ಕಾಫಿ ಹಣ್ಣು ಬಿಡಿಸುವ ಹಂತದಿಂದ ಪೇಯವಾಗಿ ಬಟ್ಟಲಿಗೆ ಸುರಿಯವ ತನಕ ನಾನಾ ಹಂತಗಳನ್ನು ಸ್ತಬ್ದಚಿತ್ರ ಬಿಂಬಿಸಿತು. ಕಾಫಿ ತೋಟದ ಕಾರ್ಮಿಕರು ಮತ್ತು 'ಕಾಫಿ ತೋಟದ ಮಾಲೀಕರಾಗಿ' ಕೊಡಗಿನ ಕುರಿತಾಗಿ ಗಣಪತಿ ಕವಿತಾ ಮತ್ತು ಸಿ.ಎಂ. ಸಚ್ಚಿ ಮತ್ತು ಕೆ. ಸೋಮಯ್ಯ ಹಾಗೂ ನೇವಿ ಚಾರ್ಲೇ ಪಾಲ್ಗೊಂಡಿದ್ದರು. ಕಾಫಿ ಎಸ್ಟೇಟ್‌ಗಳಲ್ಲಿರುವ ನಾಯಿಗಳ ಚಿತ್ರವನ್ನು ಅಳವಡಿಸಲಾಗಿತ್ತು. ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಈ ಸ್ತಬ್ಧಚಿತ್ರವನ್ನು ರೂಪಿಸಿದವರು ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಮತ್ತು ಅವರ ತಂಡದವರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>