ತಮ್ಮದೇ ಒಂದು ತಂಡ ಕಟ್ಟಿಕೊಂಡಿರುವ ಪ್ರವೀಣ್ ದಾಸ್ ಬೀದಿಗೆ ಇಳಿದಿದ್ದರು. ಅಷ್ಟು ಸಾಲದೆಂಬಂತೆ ತಮ್ಮ ತಂಡದೊಡನೆ ಬೀದಿಯಲ್ಲಿ ಒಟ್ಟಾಗಿ ನಿಂತು ರಸ್ತೆ ಸುರಕ್ಷತೆ ಬಗ್ಗೆ ಬೆಂಗಳೂರಿನ ಕೆ.ಆರ್ ಪುರಂನ ರಸ್ತೆಯಲ್ಲಿ ಬೀದಿ ನಾಟಕವಾಡಿ ಜನಮನ ಗೆಲ್ಲುವಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಗು ಸುರೇಶ, ಶಿವಕುಮಾರ್ ಆರಾಧ್ಯ ಸೇರಿದಂತೆ ಹಿರಿಯ ಕಲಾವಿದರ ತಂಡದೊಂದಿಗೆ ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬಿಝಿಯಾಗಿರುವ ಪ್ರವೀಣ್ ಆಗಾಗ್ಗೆ ರಕ್ತದಾನದಂತಹ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ರಕ್ತದಾನ ಮಾಡುತ್ತಿರುತ್ತಾರೆ. ಇದೀಗ ಸಿನಿಮಾವೊಂದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿವರಾಜ್ ನಿರ್ದೇಶನದ ಉಡುಂಬಾ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟನೆಯೊಂದಿಗೆ ಇನ್ನಿತರೇ ಸಾಮಾಜಿಕ ಕಾರ್ಯಗಳಲ್ಲೂ ಪ್ರವೀಣ್ ದಾಸ್ ತೊಡಗಿಸಿಕೊಂಡಿರುವುದು ಯುವ ಕಲಾವಿದರಿಗೆ ಮಾದರಿಯಾಗುವಂತಿದೆ.
ನಟ-ನಟಿಯರು ಕೇವಲ ಮಾತಿಗಷ್ಟೇ ಸೀಮಿತ ಎಂಬ ಮಾತನ್ನು ಇತ್ತೀಚೆಗೆ ನಟ ಪ್ರವೀಣ್ದಾಸ್ ನೇತೃತ್ವದ ತಂಡ ಸುಳ್ಳು ಮಾಡಿದೆ.