Quantcast
Channel: VijayKarnataka
Viewing all articles
Browse latest Browse all 6795

‘ಅಡಕೆ ಚಹಾ’ ಇಂದು ಮಾರುಕಟ್ಟೆಗೆ

$
0
0

ತೀರ್ಥಹಳ್ಳಿಯ ಯುವ ಸಂಶೋಧಕ ನಿವೇದನ್ ನೆಂಪೆ ಸಾಹಸ/ ಗ್ರೀನ್ ಟೀ ಮಾದರಿಯಲ್ಲಿ ಅಡಕೆ ಚಹಾ
ಬೆಂಗಳೂರು : 'ಟೀ' ಎಂದರೆ ನಿಮಗೆ ಎಷ್ಟು ಬಗೆ ಗೊತ್ತು. ಮಸಾಲ ಟೀ, ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ ಕನಿಷ್ಟ ಅಂದ್ರು 5-10 ಬಗೆಯದಿರುಬಹುದಾ? ಆದರೆ ಇಲ್ಲೊಬ್ಬರು ಸತತ ಅಧ್ಯಯನದ ಮೂಲಕ ಜಾಗತಿಕ ಮಟ್ಟದಲ್ಲಿ ಅಪರೂಪದ 'ಅಡಕೆ ಚಹಾ' (ಅರೇಕಾ ಟೀ)ವನ್ನು ಪರಿಚಯಿಸಿದ್ದಾರೆ.

ಇದರ ರೂವಾರಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ನಿವಾಸಿಯಾದ ನಿವೇದನ್ ನೆಂಪೆ. ಇವರ ಸತತ ಎರಡು ವರ್ಷಗಳ ಪರಿಶ್ರಮದ ಫಲವಾಗಿ ಆವಿಷ್ಕಾರಗೊಂಡಿರುವ 'ಅಡಕೆ ಚಹಾ' ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಆಹಾರ ಇಲಾಖೆಯ (ಎಫ್‌ಎಸ್‌ಎಸ್‌ಎಸ್‌ಎಐ)ನ ಪ್ರಮಾಣಪತ್ರ ಹಾಗೂ ಸಿಎಫ್‌ಟಿಆರ್‌ಐ ಮಾನ್ಯತೆಯನ್ನೂ ಪಡೆದಿರುವ 'ಅಡಿಗೆ ಚಹಾ'ಗೆ 'ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್' ಮತ್ತು 'ಇನೋವೇಟಿವ್ ಪ್ರಾಡಕ್ಟ್ ಆಫ್ ದಿ ಇಯರ್ 2015' ಪ್ರಶಸ್ತ್ತಿಗಳು ಸಹ ಲಭಿಸಿವೆ.

ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಇವರು ಕಲಿತದ್ದು ಬ್ಯಾಚ್ಯುಲರ್ ಆಫ್ ಫಾರ್ಮಸಿ. ಬಳಿಕ ಮೆಲ್ಬರ್ನ್‌ನ ವಿವಿಯಲ್ಲಿ ಮ್ಯಾನಿಫ್ಯಾಕ್ಚರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ ಪದವಿ ಸಹ ಪಡೆದರು. ಯಾವುದಾದರೂ ಕಂಪನಿಗೆ ಸೇರಿದ್ದರೆ ಪ್ರತಿ ತಿಂಗಳೂ ಕೈ ತುಂಬ ಸಂಬಳ ಬರುತ್ತಿತ್ತು. ಆದರೆ ತಾನು ಮಾಡುವ ಪ್ರತಿ ಕೆಲಸವು ವಿಭಿನ್ನವಾಗಿರಬೇಕ್ಕೆನ್ನುವ ಇವರಿಗೆ ಕಂಪನಿ ಕೆಲಸ ಇಷ್ಟವಾಗಲಿಲ್ಲ. ಬದಲಿಗೆ ಬಾಲ್ಯದಿಂದಲೂ ಇತರರಿಗೆ ನೆರವಾಗಬೇಕು ಎಂಬ ಭಾವನೆ ಹೊಂದಿದ್ದರು. ಹೀಗಾಗಿ ಹುಟ್ಟೂರಲ್ಲಿ ಸ್ವಂತವಾಗಿ ಕೃಷಿಗೆ ಸಂಬಂಧಿಸಿದ ಮೌಲ್ಯವರ್ಧಿತ ಕಂಪನಿ ಸ್ಥಾಪಿಸಿ, ಅಲ್ಲಿ ರೈತರು ಬೆಳೆಯುವ ನಾನಾ ಉತ್ಪನ್ನಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು. ಅದರ ಮೊದಲ ಫಲವೇ 'ಅಡಕೆ ಚಹಾ'.

ಚಹಾದ ವಿಶೇಷತೆ

ಆಹಾರ ಪದಾರ್ಥಗಳ ವಿಷಾರಕ್ಕೆ ಬಂದರೆ ಅಡಕೆಗೆ ವಿಶೇಷ ಸ್ಥಾನವಿದೆ. ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಡಿಕೆಯಿಂದ ಸಿದ್ದಗೊಂಡಿರುವ ಈ ಚಹಾ ಬಳಕೆ ಮಾಡುವುದರಿಂದ ವೃದ್ಧಾಪ್ಯವನ್ನು ದೂರವಾಗಲಿದೆ, ಖಿನ್ನತೆ ಹಾಗೂ ನಂಜು ನಿವಾರಕ, ಜೀರ್ಣಕ್ರಿಯೆ ಸುಗಮಗೊಳಿಸಿ ಹಸಿವನ್ನು ಹೆಚ್ಚಿಸಲಿದೆ ಜತೆಗೆ ಮಧುಮೇಹ ನಿವಾರಕವೂ ಆಗಿದ್ದು, ಮನಸ್ಸಿಗೆ ಆರಾಮ ಹಾಗೂ ಅಹಲ್ಲಾದವನ್ನು ನೀಡುತ್ತದೆ ಎಂದು ಸಾಭೀತಾಗಿದೆ ಎನ್ನುತ್ತಾರೆ ನಿವೇದನ್ ನೆಂಪಿ.

ಇಂದು ಬಿಡುಗಡೆ

ಮಲ್ಲೇಶ್ವರಂನ ಬ್ರಿಗೇಡ್ ಗೇಟ್‌ವೇ ಹೋಟೆಲ್‌ನ ಶೆರಟಾನ್ ಗ್ರೌಂಡ್‌ನಲ್ಲಿ ಜ. 22ರಂದು ಮಧ್ಯಾಹ್ನ 3.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, 'ಅಡಕೆ ಚಹಾ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಯಾಗಿ ಭಾವಹಿಸಲಿದ್ದು, ಸಂಸದ ಡಾ.ಎಂ. ರಾಮಾ ಜೋಯಿಸ್, ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಅಡಕೆ ಬೆಳೆಗಾರರಿಗೆ ವರವಾಗಲಿರುವ ಚಹಾ!

ಮೊದಲಿಗೆ ಕೇವಲ ಕರ್ನಾಟಕ ಮಾರುಕಟ್ಟೆಗೆ ಈ ಉತ್ಪನ್ನ ಬಿಡುಗಡೆಯಾಗಲಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ದೇಶಾದ್ಯಂತ ಮಾರುಕಟ್ಟೆಗೆ ವಿಸ್ತರಿಸಲಾಗುವುದು. ತಮ್ಮದೇ ಸಂಶೋಧನಾ ಸಂಸ್ಥೆಯಾದ ಮಿಸ್ಟಿಕ್ ಆರೋಮ್ಯಾಟ್ಸ್‌ನಿಂದ ಉತ್ಪನ್ನ ತಯಾರಿಸಲಾಗುತ್ತಿದೆ. ಗ್ರೀನ್ ಟೀ ಬ್ಯಾಗ್ ಮಾದರಿಯಲ್ಲಿ 'ಅಡಕೆ ಚಹಾ' ಬ್ಯಾಗ್ ಮಾರುಕಟ್ಟೆಗೆ ಬರಲಿದ್ದು, 10 ಟೀ ಮಾಡಬಹುದಾದ ಒಂದು ಬ್ಯಾಗ್‌ಗೆ 75ರೂ. ದರ ನಿಗದಿಪಡಿಸಲಾಗಿದೆ. ಹಾಲು, ಸಕ್ಕರೆ ಇಲ್ಲದೆ ಕೇವಲ ಬಿಸಿ ನೀರಿನಲ್ಲಿ ಟೀ ಬ್ಯಾಗ್ ಅದ್ದಿದರೆ ಚಹಾ ಸಿದ್ಧವಾಗಲಿದೆ ಎಂದು ವಿವರಿಸಿದರು.

ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಅಡಕೆ ಮಾರುಕಟ್ಟೆಯನ್ನು ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಡಕೆ ಚಹಾ ಪ್ರಮುಖ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆಯಿದೆ. ರೈತರ ಉತ್ಪನ್ನಗಳ ಬೆಲೆ ಹೆಚ್ಚಳ, ಮಾರುಕಟ್ಟೆ ವಿಸ್ತರಣೆಗೆ ಶ್ರಮಿಸಬೇಕೆಂಬ ಉದ್ದೇಶದಿಂತೆ ಹೊಸ ಹೊಸ ಸಂಶೋಧನೆಗಳನ್ನು ನಡೆಸುವ ಉದ್ದೇಶ ತಮ್ಮದಾಗಿದ್ದು, ಅದರ ಮೊದಲ ಯತ್ನದಲ್ಲಿ 'ಅಡಕೆ ಚಹಾ' ರೂಪುಗೊಂಡಿದೆ ಎಂದು ಚಹಾ ಸಂಶೋಧಕ ನಿವೇದನ್ ನೆಂಪೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>