Quantcast
Channel: VijayKarnataka
Viewing all articles
Browse latest Browse all 6795

ಜ.18ರಿಂದ ಚಿನ್ನದ ಬಾಂಡ್ ಯೋಜನೆ ಶುರು

$
0
0

ಹೊಸದಿಲ್ಲಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಿನ್ನದ ನಗದೀಕರಣ ಬಾಂಡ್ ಯೋಜನೆಯ ಎರಡನೇ ಹಂತವು ಜ.18ರಂದು ಆರಂಭವಾಗಲಿದೆ.

ದೇಶದ ದೇವಸ್ಥಾನ ಮತ್ತು ಮನೆಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಚಿನ್ನವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರಕಾರವು ಬಾಂಡ್ ಯೋಜನೆಯ ಮೊದಲ ಹಂತದಲ್ಲಿ(ನವೆಂಬರ್ 2015) 246 ಕೋಟಿ ರೂ. ಮೌಲ್ಯದ 915.95 ಕೆ.ಜಿ. ಚಿನ್ನವನ್ನು ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಸಂಗ್ರಹಿಸಿತ್ತು.

''ಎರಡನೇ ಹಂತವು ಜ.18ರಿಂದ 22ರ ತನಕ ಚಾಲನೆಯಲ್ಲಿರಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು,'' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ತಿಳಿಸಿದ್ದಾರೆ.

ಬ್ಯಾಂಕ್‌ಗಳ ಮುಖ್ಯ ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಜೇಟ್ಲಿ, ''ಬ್ಯಾಂಕ್‌ಗಳು ಹೆಚ್ಚಿನ ಪ್ರಯತ್ನದ ಮೂಲಕ ಬಾಂಡ್ ಯೋಜನೆಯತ್ತ ಹೂಡಿಕೆದಾರರನ್ನು ಆಕರ್ಷಿಸಬೇಕು,'' ಎಂದು ಸೂಚಿಸಿದರು.

''ಜನರಲ್ಲಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಆಕಾಶವಾಣಿ, ಎಫ್‌ಎಂ ರೇಡಿಯೊ, ಪತ್ರಿಕೆಗಳನ್ನು ಬಳಸಿಕೊಳ್ಳಲಾಗುವುದು. ಎಸ್‌ಎಂಎಸ್ ಆಂದೋಲನವನ್ನೂ ನಡೆಸಲಾಗುವುದು,'' ಎಂದು ವಿತ್ತ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಟ್ವೀಟ್ ಮಾಡಿದ್ದಾರೆ.

ಚಿನ್ನಕ್ಕೆ ಮಾರುಕಟ್ಟೆಗಿಂತಲೂ ಕಡಿಮೆ ದರ ನಿಗದಿ ಮಾಡುವುದು ಮತ್ತು ಕಡಿಮೆ ಬಡ್ಡಿ ದರದಿಂದ ಗ್ರಾಹಕರು ಯೋಜನೆ ಬಗ್ಗೆ ಮೊದಲ ಹಂತದಲ್ಲಿ ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಅಲ್ಲದೇ ಠೇವಣಿಯಾಗಿ ಇಡುವ ಚಿನ್ನವನ್ನು ಕರಗಿಸಲಾಗುತ್ತದೆ ಎನ್ನುವ ಅಂಶವು ಜನರಿಗೆ ನಿರಾಶೆ ತಂದಿತ್ತು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>