Quantcast
Channel: VijayKarnataka
Viewing all articles
Browse latest Browse all 6795

ಸ್ಟಾರ್ಟಪ್‌ಗಳಿಗೆ ಪ್ರತ್ಯೇಕ ಶಾಖೆ ತೆರೆದ ಎಸ್‌ಬಿಐ

$
0
0

ಬೆಂಗಳೂರು: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿಯೇ ಮೊದಲ ಬಾರಿಗೆ ಸ್ಟಾರ್ಟಪ್‌ಗಳಿಗೆ ಮೀಸಲಾಗಿರುವ ಶಾಖೆಯನ್ನು ಬೆಂಗಳೂರಿನಲ್ಲಿ ಗುರುವಾರ ಆರಂಭಿಸಿದೆ.

ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ನೂತನ ' ಎಸ್‌ಬಿಐ ಇನ್‌ಕ್ಯೂಬ್' ಶಾಖೆ ಯನ್ನು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಟ್ಟಾಚಾರ್ಯ, ಬೆಂಗಳೂರು ಸ್ಟಾರ್ಟಪ್‌ಗಳಿಗೆ ದೇಶದಲ್ಲೇ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ಹೊಸ ಬಗೆಯ ಐಡಿಯಾಗಳೊಂದಿಗೆ ತಮ್ಮದೇ ಕಂಪನಿಯನ್ನು ಸ್ಥಾಪಿಸಲು ಬಯಸುವ ಯುವ ಉದ್ಯಮಿಗಳಿಗೆ ಎಸ್‌ಬಿಐ ಇನ್‌ಕ್ಯೂಬ್ ಶಾಖೆ ಹಣಕಾಸು ನೆರವು ಮತ್ತು ಮಾರ್ಗದರ್ಶನ ನೀಡಲಿದೆ ಎಂದರು.

ಬೆಂಗಳೂರು ಹೊರತುಪಡಿಸಿ ಪುಣೆ ಮತ್ತು ಎನ್‌ಸಿಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ವ್ಯಾಪ್ತಿಯಲ್ಲಿ ಎಸ್‌ಬಿಐ ಇನ್‌ಕ್ಯೂಬ್ ಶಾಖೆ ಆರಂಭವಾಗಲಿದೆ. ಸ್ಟಾರ್ಟಪ್‌ಗಳಿಗೆ ಸಂಬಂಧಿಸಿದ ಹಣಕಾಸು ಪ್ರಕ್ರಿಯೆ, ನೋಂದಣಿ, ವಿದೇಶಿ ವಿನಿಮಯ ಪಾವತಿ, ವೆಂಚರ್ ಕ್ಯಾಪಿಟಲ್ ಇತ್ಯಾದಿಗಳಿಗೆ ಸಲಹೆ, ಮಾರ್ಗದರ್ಶನವನ್ನು ಕೂಡ ಈ ಶಾಖೆ ನೀಡಲಿದೆ. ಆರಂಭಿಕ ಹಂತದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲವನ್ನು ಬ್ಯಾಂಕ್ ಮಂಜೂರು ಮಾಡುವುದಿಲ್ಲ. ಆದರೆ ಸ್ಟಾರ್ಟಪ್‌ಗಳಿಗೆ ಕಂಪನಿಯ ಲೆಕ್ಕಪತ್ರಗಳು, ತೆರಿಗೆ ಹಾಗೂ ವಿದೇಶಿ ಮೂಲದ ಸಾಲ ಸೇರಿದಂತೆ ಹಣಕಾಸು ವ್ಯವಸ್ಥೆಯನ್ನು ಹೇಗೆ ನಿರ್ವಹಿಸಬೇಕು ಬಗ್ಗೆ ತಜ್ಞರಿಂದ ಸಲಹೆ ಒದಗಿಸಲಿದೆ. ಸ್ಟಾರ್ಟಪ್ ಬೆಳವಣಿಗೆಯಾದ ನಂತರ ಸಾಲ ಸೌಲಭ್ಯವನ್ನೂ ನೀಡಲಾಗುವುದು. ಕೇವಲ ಮಾಹಿತಿ ತಂತ್ರಜ್ಞಾನ ಆಧಾರಿಯ ಸ್ಟಾರ್ಟಪ್‌ಗಳನ್ನು ಮಾತ್ರವಲ್ಲದೆ, ಇತರ ಯಾವುದೇ ಹೊಸತನದ ಐಡಿಯಾಗಳನ್ನು ಒಳಗೊಂಡಿರುವ ಸ್ಟಾರ್ಟಪ್‌ಗಳಿಗೆ ಕೂಡ ಎಸ್‌ಬಿಐ ಇನ್‌ಕ್ಯೂಬ್ ತನ್ನ ಸೇವೆ ನೀಡಲಿದೆ ಎಂದು ಅರುಂಧತಿ ಭಟ್ಟಾಚಾರ್ಯ ತಿಳಿಸಿದರು. ಎಸ್‌ಬಿಐ ಎಕ್ಸ್‌ಕ್ಲೂಸಿಫ್ ಎಂಬ ವೆಲ್ತ್ ಮ್ಯಾನೇಜ್‌ಮೆಂಟ್ ಸೇವೆಗೂ ಭಟ್ಟಾಚಾರ್ಯ ಈ ಸಂದರ್ಭ ಚಾಲನೆ ನೀಡಿದರು.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಮನವಿ:

ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ವಿಸ್ತರಿಸುವುದು, ಕೃಷಿ ವಲಯಕ್ಕೆ ಸಾಲ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮುಂದಿಡಲಾಗಿದೆ ಎಂದು ಅರುಂಧತಿ ಭಟ್ಟಾಚಾರ್ಯ ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>