ಕಳೆದ ಅಕ್ಟೋಬರ್ನಲ್ಲಿ ಪ್ರತಿ ಕೆ.ಜಿಗೆ 200 ರೂ.ಗಳ ಗಡಿ ದಾಟಿದ್ದ ಆಹಾರ ಧಾನ್ಯಗಳ ಬೆಲೆ, ಈಗ 160 ರೂ.ಗಳ ಆಸುಪಸಿಗೆ ಇಳಿಕೆಯಾಗಿದೆ. ಈ ಹಿಂದೆ ಸರಕಾರ ಅಕ್ರಮ ದಾಸ್ತಾನುಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿತ್ತು. ಆಗ ವಶಪಡಿಸಿಕೊಂಡಿದ್ದ ಧಾನ್ಯಗಳನ್ನು ರಿಟೇಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ನಾನಾ ರಾಜ್ಯಗಳಲ್ಲಿ ಒಟ್ಟು 1,12,545.96 ಟನ್ ಬೇಳೆ ಕಾಳುಗಳನ್ನು ಜಪ್ತಿ ಮಾಡಲಾಗಿತ್ತು. 14 ರಾಜ್ಯಗಳು ಮತ್ತು ಒಂದು ಕೇಂದರಾಡಳಿತ ಪ್ರದೇಶದಲ್ಲಿ ಅಕ್ರಮ ದಾಸ್ತಾನಿನ ಮೇಲೆ 14,726 ದಾಳಿಯನ್ನು ಕೈಗೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ 86,709 ಟನ್ ಬೇಳೆ ಕಾಳುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 81,473 ಟನ್ಗಳನ್ನು ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 25,545 ಟನ್ ಜಪ್ತಿಯಾಗಿದ್ದು, ಇದರಲ್ಲಿ 22,421 ಟನ್ಗಳನ್ನು ಬಿಡುಗಡೆಗೊಳಿಸಲಾಗಿದೆ.
ಹೊಸದಿಲ್ಲಿ: ಅಕ್ರಮ ದಾಸ್ತಾನುಗಾರರಿಂದ ಜಪ್ತಿ ಮಾಡಿದ್ದ 1.12 ಲಕ್ಷ ಟನ್ ಬೇಳೆ ಕಾಳುಗಳನ್ನು ಸರಕಾರ ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪೂರೈಕೆಯನ್ನು ಹೆಚ್ಚಿಸಿ ದರಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಂಡಿದೆ.