Quantcast
Channel: VijayKarnataka
Viewing all articles
Browse latest Browse all 6795

ಪ್ಯಾನ್‌ಕಾರ್ಡ್: ತಪ್ಪು ಮಾಹಿತಿಗೆ ಜೈಲು ಶಿಕ್ಷೆ

$
0
0

* ಜನವರಿ 1ರಿಂದ ಹೊಸ ನಿಯಮಾವಳಿ ಜಾರಿ
* ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣ ವರ್ಗಾವಣೆಗೆ ಪ್ಯಾನ್ ಇಲ್ಲದಿದ್ದರೆ ಫಾರ್ಮ್ 60 ಕಡ್ಡಾಯ
* ಅದರಲ್ಲಿ ತಪ್ಪು ಮಾಹಿತಿ ನೀಡಿದರೆ 7 ವರ್ಷ ತನಕ ಸೆರೆವಾಸ ಸಾಧ್ಯತೆ
ಹೊಸದಿಲ್ಲಿ: ಪ್ಯಾನ್ ಕಾರ್ಡ್ ಹೊಂದಿರದವರು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣಕಾಸು ವರ್ಗಾವಣೆಗಳ ಸಂದರ್ಭ ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ಸಲ್ಲಿಸಿದರೆ ಇನ್ನು ಮುಂದೆ 7 ವರ್ಷಗಳ ತನಕ ಜೈಲಿನ ಕಂಬಿ ಎಣಿಸಬೇಕಾದೀತು. ಜತೆಗೆ ಭಾರಿ ದಂಡವನ್ನೂ ತೆರಬೇಕಾಗುತ್ತದೆ.

ಪ್ಯಾನ್‌ಕಾರ್ಡ್‌ಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯ ಕೆಲವು ಹೊಸ ನಿಯಮಾವಳಿಗಳು ಈ ಜನವರಿ 1ರಿಂದ ಜಾರಿಯಾಗಿದೆ. ನಿಯಮಾವಳಿಗಳ ಪ್ರಕಾಋ ಪ್ಯಾನ್ ಕಾರ್ಡ್ ಇಲ್ಲದವರು ನಿರ್ದಿಷ್ಟ ಮಿತಿಗಿಂತ ಹೆಚ್ಚು ಮೊತ್ತದ ಹಣ ವರ್ಗಾವಣೆ ಮಾಡುವ ವೇಳೆ, ' ಫಾರ್ಮ್ ಸಂಖ್ಯೆ 60' ಭರ್ತಿ ಮಾಡಬೇಕು. ಒಂದು ಪುಟದ ಈ ಅರ್ಜಿಯಲ್ಲಿ ವ್ಯಕ್ತಿ ಗುರುತು ಮತ್ತು ವಿಳಾಸದ ದೃಢೀಕರಣ ಮತ್ತು ಇತರ ವಿವರಗಳನ್ನು ಒದಗಿಸಬೇಕಾಗುತ್ತದೆ. ಆಗ ತಪ್ಪು ಮಾಹಿತಿಗಳನ್ನು ನಮೂದಿಸಿದರೆ, ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸೆರೆವಾಸ 7 ವರ್ಷಗಳ ತನಕವೂ ಮುಂದುವರಿಯಬಹುದು ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ಕಾಯಿದೆಯ 277ನೇ ಸೆಕ್ಷನ್ ಪ್ರಕಾರ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ. ಒಂದು ವೇಳೆ 25 ಲಕ್ಷ ರೂ. ತೆರಿಗೆ ವಂಚಿಸುವ ದುರುದ್ದೇಶದಿಂದ ತಪ್ಪು ಮಾಹಿತಿ ಕೊಟ್ಟರೆ 6 ತಿಂಗಳಿನಿಂದ 7 ವರ್ಷ ತನಕ ಸೆರೆವಾಸ ಆಗಬಹುದು. ಇದಕ್ಕಿಂತ ಕಡಿಮೆ ಮೊತ್ತದ ತೆರಿಗೆ ವಂಚನೆಗೆ ಯತ್ನಿಸಿದರೆ 3 ತಿಂಗಳಿನಿಂದ 2 ವರ್ಷಗಳ ತನಕ ಜೈಲು ಪಾಲಾಗುವ ಭೀತಿ ಉಂಟಾಗಲಿದೆ.

ದೇಶದೊಳಗೆ ಕಪ್ಪು ಹಣದ ಚಲಾವಣೆಯನ್ನು ನಿಯಂತ್ರಿಸುವ ಹಾಗೂ ತೆರಿಗೆಯ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಹೋಟೆಲ್ ಅಥವಾ ವಿದೇಶ ಪ್ರವಾಸದ ಬಿಲ್ 50,000 ರೂ.ಗಿಂತ ಹೆಚ್ಚಾದರೆ ಪ್ಯಾನ್ ಕಡ್ಡಾಯವಾಗಿದೆ.

ಫಾರ್ಮ್ 60ರಲ್ಲಿ ವ್ಯಕ್ತಿ ತನ್ನ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಹಣ ಕಳಿಸುವ ವಿಧಾನ (ನಗದು, ಚೆಕ್, ಕಾರ್ಡ್, ಡಿ.ಡಿ, ಆನ್‌ಲೈನ್ ವರ್ಗಾವಣೆ ಇತ್ಯಾದಿ) ಕುರಿತ ವಿವರಗಳನ್ನು ನೀಡಬೇಕಾಗುತ್ತದೆ. ವ್ಯಕ್ತಿಯ ಒಟ್ಟು ಆದಾಯ, ಕೃಷಿ ಮತ್ತು ಕೃಷಿಯೇತರ ಅಂದಾಜು ಆದಾಯದ ವಿವರ ಕೊಡಬೇಕು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>