Quantcast
Channel: VijayKarnataka
Viewing all articles
Browse latest Browse all 6795

ಪುಟ್ಟಣ್ಣನಾಗಿ ಕಮಾಲ್ ಮಾಡುವ ಕೋಮಲ್

$
0
0

- ಕನ್ನಡ ಚಿತ್ರ: ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ

- ಶರಣು ಹುಲ್ಲೂರು

ಹಲವು ಕಾರಣಗಳಿಂದಾಗಿ ಕೋಮಲ್ ಅಭಿನಯದ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಚಿತ್ರ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ಕೋಮಲ್ ಜತೆ ಪ್ರಿಯಾಮಣಿ ತೆರೆ ಹಂಚಿಕೊಂಡಿದ್ದರು. ಅಲ್ಲದೇ ಅಪರಾಧ ಜಗತ್ತಿನ ಕತೆಯಿಂದ ನಿರ್ದೇಶಕ ಶ್ರೀನಿವಾಸ್ ರಾಜು ಕೂಡ ಬಿಡುಗಡೆ ಬಯಸಿದ್ದರು. ಹಲವು ಅಚ್ಚರಿಗಳು ಒಂದಾದ ಕಾರಣ, ನಿರೀಕ್ಷೆಯಂತೂ ಇತ್ತು. ಅದನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಕೋಮಲ್. ತಮ್ಮ ಇಮೇಜ್ ಅನ್ನು ಬದಗಿಟ್ಟು ಪುಟ್ಟಣ್ಣ ಪಾತ್ರ ಮಾಡಿದ್ದಾರೆ. ಹೀಗಾಗಿ ಸಿನಿಮಾ ಭಯ ಹುಟ್ಟಿಸುತ್ತಲೇ ಸಾಕಷ್ಟು ನಗಿಸುತ್ತದೆ. ಭಯ ಹುಟ್ಟಿಸುವುದು ಸಿನಿಮಾ ಚೆನ್ನಾಗಿಲ್ಲ ಅನ್ನುವ ಕಾರಣಕ್ಕಲ್ಲ. ಇದು ಹಾರರ್ ಕಂ ಕಾಮಿಡಿ ಚಿತ್ರ.

ಕೋಮಲ್ ಕನ್ನಡದ ಪ್ರತಿಭಾವಂತ ನಟ. ಆದರೆ, 'ಎಲ್ಲವನ್ನೂ' ಮಾಡಲು ಹೋಗಿ, ತಮ್ಮ ಸಿನಿಮಾದಲ್ಲಿ ತಾವೇ ಕಳೆದು ಹೋಗಿದ್ದರು. ಈ ನಡೆ ಕಾಮಿಡಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಈ ಸಿನಿಮಾದಲ್ಲಿ ಮತ್ತೆ ಹಳೆಯ ಕೋಮಲ್ ಕಾಣಿಸಿದ್ದಾರೆ. ಎಂದಿನ ತಮ್ಮ ಟಿಪಿಕಲ್ ಕಾಮಿಡಿಯ ಮೂಲಕ ನಗಿಸುತ್ತಲೇ ಹೋಗುತ್ತಾರೆ. ಜತೆಗೆ ಕ್ಯೂರಿಯಾಸಿಟಿ ಮೂಡಿಸುವ ಚಿತ್ರಕತೆಯೂ ಇರುವುದರಿಂದ ಎಲ್ಲಾ ವರ್ಗದ ಜನರಿಗೂ ಸಿನಿಮಾ ಇಷ್ಟವಾಗುತ್ತದೆ.

ಕನ್ನಡದಲ್ಲಿ ಗ್ಲಾಮ್ ಪಾತ್ರಕ್ಕಷ್ಟೇ ಸೀಮಿತವಾಗಿದ್ದ ಪ್ರಿಯಾಮಣಿ, ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಪೋಷಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕುರಿ ಪ್ರತಾಪ್, ಪ್ರಶಾಂತ್ ಸಿದ್ಧಿ ಕೂಡ ನಗಿಸುವಲ್ಲಿ ಹಿಂದೆ ಬೀಳುವುದಿಲ್ಲ. ಮತ್ತೊಂದು ಅಚ್ಚರಿಯೆಂದರೆ, ಸಾಧು ಕೋಕಿಲಾ ಮತ್ತು ಖಳ ನಟ ರವಿಶಂಕರ್ ತಮ್ಮ ನಟನಾ ಸಾಮರ್ಥ್ಯವನ್ನು ಹಿಡಿತಕ್ಕೆ ತಗೆದುಕೊಂಡು ನಟಿಸಿದ್ದಾರೆ. ಹೀಗಾಗಿ ಇಬ್ಬರನ್ನೂ ಹೊಸ ರೀತಿಯಲ್ಲಿ ಕಾಣಬಹುದು.

ನಾಯಕನಾಗಬೇಕೆಂದು ಗಾಂಧಿನಗರಕ್ಕೆ ಬರುವ ಪುಟ್ಟಣ್ಣ (ಕೋಮಲ್) ತಾನು ಸಿನಿಮಾ ಮಾಡಲು ಏನೆಲ್ಲ ಕಷ್ಟ ಪಡುತ್ತಾನೆ. ಅವನೇ ಚಿತ್ರಕತೆಯ ಭಾಗವಾಗುತ್ತಾನೆ. ಕೊನೆಗೆ ಪುಟ್ಟಣ್ಣ ಸಿನಿಮಾ ಮಾಡುತ್ತಾನಾ? ಅಥವಾ ತನ್ನೂರಿಗೆ ಹೊರಡುತ್ತಾನಾ ಅನ್ನುವ ಕತೆ ಇಲ್ಲಿದೆ. ಈ ಕತೆಯ ಸುತ್ತ ಹಲವು ರೋಚಕ ಘಟನೆಗಳು ನಡೆಯುತ್ತವೆ. ಅವುಗಳನ್ನು ಸಿನಿಮಾದಲ್ಲೇ ನೋಡುವುದು ಚೆಂದ.

ಹಾರರ್ ದೃಶ್ಯಗಳಿಗೆ ಸಿನಿಮಾಟೋಗ್ರಫಿ, ಹಿನ್ನೆಲೆ ಸಂಗೀತ ಸಖತ್ ಮಿಕ್ಸ್ ಆಗಿದೆ. ಹೀಗಾಗಿ ಹೃದಯ ಗಟ್ಟಿ ಇದ್ದವರು ಸಿನಿಮಾ ನೋಡುವುದು ಸೂಕ್ತ. ಕೋಮಲ್ ಈ ಸಿನಿಮಾದ ಮೂಲಕ ಮತ್ತೆ ರಂಜಿಸಲು ನಿಂತಿದ್ದಾರೆ. ಕಾಮಿಡಿ ಜತೆ ಥ್ರಿಲ್ ಅನುಭವಕ್ಕೆ ಈ ಸಿನಿಮಾ ನೋಡಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>