Quantcast
Channel: VijayKarnataka
Viewing all articles
Browse latest Browse all 6795

ಬೆಂಗಳೂರಿನಲ್ಲಿ ಮುಂದುವರೆದ ದರೋಡೆ ಕೃತ್ಯಗಳು

$
0
0

ಬೆಂಗಳೂರು: ನಗರದಲ್ಲಿ ದರೋಡೆ ಕೃತ್ಯಗಳು ಮುಂದುವರಿದಿದ್ದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಟೆಕ್ಕಿಯೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ತಲೆಯ ಹಿಂಬಾಗಕ್ಕೆ ಚಾಕುವಿನಿಂದ ಇರಿದು ಮೊಬೈಲ್‌ ಮತ್ತು ಪರ್ಸ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಎಚ್‌ಸಿಎಲ್‌ ಕಂಪನಿ ಉದ್ಯೋಗಿ ಸಂದೀಪ್‌ ಬರ್ಮನ್‌ (28) ದಾಳಿಗೊಳಗಾದವರು. ರಕ್ತಸ್ರಾವದ ನಡುವೆ ಅವರು ಮನೆಗೆ ತೆರಳಿದ್ದು, ಸಹೋದರಿ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾತ್ರಿ ಕೆಲಸ ಮುಗಿಸಿ ಕಂಪನಿಯ ಕ್ಯಾಬ್‌ನಲ್ಲಿ ಮರಳಿದ ಸಂದೀಪ್‌ ಕಲ್ಯಾಣನಗರದ ಕೆರೆ ಎದುರಿನ ಫುಡ್‌ಕೋರ್ಟ್‌ ಸಮೀಪ ಇಳಿದುಕೊಂಡು ಸಿಗರೇಟ್‌ ಸೇದುತ್ತಾ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂದೇ ಬೈಕಿನಲ್ಲಿ ಬಂದ ಮೂವರಲ್ಲಿ ಇಬ್ಬರು ಸಂದೀಪ್‌ನನ್ನು ಅಡ್ಡಗಟ್ಟಿದ್ದು, ಮತ್ತೊಬ್ಬ ಕತ್ತಲೆಯಲ್ಲಿ ಬೈಕ್‌ ಸಮೇತ ನಿಂತಿದ್ದ.

ಅವರಿಬ್ಬರು ಸಂದೀಪನಿಗೆ ಜೇಬಿನಲ್ಲಿ ಇರುವುದನ್ನೆಲ್ಲ ಕೊಡು ಒತ್ತಾಯಿಸಿದ್ದು, 'ಕನ್ನಡ ಬರುವುದಿಲ್ಲ' ಎಂದು ಹೇಳಿದಾಗ ಜೇಬಿಗೆ ಕೈ ಹಾಕಿ ಎರಡೂ ಮೊಬೈಲ್‌ಗಳನ್ನು ಕಿತ್ತುಕೊಂಡು, ಪರ್ಸ್‌ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಸಂದೀಪ್‌ನ ತಲೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಅವರು ಪರಾರಿಯಾಗಿದ್ದಾರೆ.

ಕನ್ನಡ-ತಮಿಳು

ದರೋಡೆ ನಡೆಸಿದವರು ತನ್ನ ಜತೆಗೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ, ಪರಸ್ಪರ ತಮಿಳಿನಲ್ಲಿ ಮಾತನಾಡುತ್ತಿದ್ದರು. ಇಬ್ಬರ ಕೈಯಲ್ಲೂ ಮಾರಕಾಸ್ತ್ರಗಳಿದ್ದವು ಎಂದು ಸಂದೀಪ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.



Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>