Quantcast
Channel: VijayKarnataka
Viewing all articles
Browse latest Browse all 6795

ಸಾಕು ನಾಯಿ ಒಡೆಯನ ಪ್ರಾಣವುಳಿಸಿದ್ದು ಹೇಗೆ

$
0
0

ಬೆಂಗಳೂರು: ನಸುಕಿನಲ್ಲಿ ಹಾಲು ತರಲು ತೆರಳಿದ್ದ ಪ್ರಾಧ್ಯಾಪಕರೊಬ್ಬರನ್ನು ದರೋಡೆಕೋರರ ಕೈಯಿಂದ ಅವರದ್ದೇ ಸಾಕುನಾಯಿ ರಕ್ಷಿಸಿದ ಘಟನೆ ನಗರದಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್‌ ನಿವಾಸಿಯಾಗಿರುವ ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರು ಮಾ.8ರಂದು ಬೆಳಗ್ಗೆ 5.30ಕ್ಕೆ ಹಾಲು ತರಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅವರ ಜತೆ ಎಂದಿಗೂ ಹಿಂಬಾಲಿಸಿಕೊಂಡು ಹೋಗದ ಸಾಕು ನಾಯಿ ಲಿಯೋ ಆ ದಿನ ಪ್ರಾಧ್ಯಾಪಕರನ್ನು ಹಿಂಬಾಲಿಸಿಕೊಂಡು ಹೋಗಿದೆ.

ನಂದಿನಿ ಚಿತ್ರ ಮಂದಿರದ ಬಳಿ ಹಾಲು ತೆಗೆದುಕೊಂಡ ಪ್ರಾಧ್ಯಾಪಕರು ಮನೆಗೆ ಮರಳುತ್ತಿದ್ದಾಗ 15ನೇ ಕ್ರಾಸ್‌ನಲ್ಲಿ ಏಕಾಏಕಿ ಕಾರೊಂದು ಅಡ್ಡಗಟ್ಟಿ ಸ್ಕೂಟರ್‌ನ್ನು ನಿಲ್ಲಿಸಿದೆ. ಕಾರಿಂದ ಇಳಿದ ಮೂವರು ದುಷ್ಕರ್ಮಿಗಳು ಡ್ರ್ಯಾಗರ್‌ ಹಾಗೂ ಚಾಕು ತೆಗೆದು ಪ್ರಾಧ್ಯಾಪಕರ ಕುತ್ತಿಗೆ ಬಳಿ ಇಟ್ಟು ಸರ ನೀಡುವಂತೆ ಬೆದರಿಸಿದ್ದಾರೆ. ಅದೇ ವೇಳೆಗೆ ಸ್ವಲ್ಪ ದೂರದಲ್ಲೇ ಸ್ಕೂಟರ್‌ನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಲಿಯೋ ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳ ಮೇಲೆ ಎರಗಿದೆ. ನಾಯಿ ಮೈ ಮೇಲೆ ಎರಗುತ್ತಿದ್ದಂತೆ ಗಲಿಬಿಲಿಗೊಂಡ ದುಷ್ಕರ್ಮಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾದರು.

ದುಷ್ಕರ್ಮಿಗಳು ಬಂದಿದ್ದ ಕಾರಿನ ನೋಂದಣಿ ಸಂಖ್ಯೆಯೊಂದಿಗೆ ಪ್ರಾಧ್ಯಾಪಕರು ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸಮೀಪದ ಪ್ರದೇಶದಲ್ಲಿರುವ ಸಿಸಿ ಕ್ಯಾಮೆರಾ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ .


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>