Quantcast
Channel: VijayKarnataka
Viewing all articles
Browse latest Browse all 6795

ಮಾಜಿ ಸಿಎಂ, ಪಿಎಂ ಬಂಧುಗಳು: 8ರಲ್ಲಿ ಐವರು ಗೆದ್ದರು

$
0
0

ಲಖನೌ: ಉತ್ತರ ಪ್ರದೇಶ ಚುನಾವಣೆ ಕಣ ಮಾಜಿ ಪ್ರಧಾನಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಬಂಧುಗಳಿಗೆ ಅಗ್ನಿ ಪರೀಕ್ಷೆಯಾಗಿತ್ತು. ಕಣಕ್ಕಿಳಿದ ಎಂಟು ಮಂದಿಯಲ್ಲಿ ಐವರು ಈ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.

ಕಣದಲ್ಲಿದ್ದ ಎಂಟು ಮಂದಿಯ ಪೈಕಿ ಏಳು ಮಂದಿ ಅಖಿಲೇಶ್‌ ಯಾದವ್‌ ಅಥವಾ ಇತರ ಮಾಜಿ ಮುಖ್ಯಮಂತ್ರಿಗಳ ಬಂಧುಗಳು. ಅಲಹಾಬಾದ್‌ ಪಶ್ಚಿಮ ಕ್ಷೇತ್ರದಿಂದ ಗೆದ್ದ ಸಿದ್ಧಾರ್ಥ್‌ನಾಥ್‌ ಸಿಂಗ್‌ ಅವರು ಮಾಜಿ ಪ್ರಧಾನಿ ಲಾಲ್‌ ಬಹಾದೂರ್‌ ಶಾಸ್ತ್ರಿ ಅವರ ಮೊಮ್ಮಗ.

ಬಿಜೆಪಿಯು ನಾಲ್ಕು ಮಂದಿ ಮಾಜಿ ಸಿಎಂ ಹಾಗೂ ಮಾಜಿ ಪಿಎಂ ಬಂಧುಗಳಿಗೆ ಟಿಕೆಟ್‌ ನೀಡಿತ್ತು. ಮಾಜಿ ಸಿಎಂ ಹೇಮಾವತಿ ನಂದನ್‌ ಬಹುಗುಣ ಅವರ ಪುತ್ರಿ ರೀಟಾ ಬಹುಗುಣ, ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ಅವರ ಮೊಮ್ಮಗ ಸಂದೀಪ್‌ ಕುಮಾರ್‌ ಸಿಂಗ್‌, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಪುತ್ರ ಪಂಕಜ್‌ ಸಿಂಗ್‌ ಮತ್ತು ಲಾಲ್‌ ಬಹಾದೂರ್‌ ಶಾಸ್ತ್ರಿ ಅವರ ಮೊಮ್ಮಗ ಸಿದ್ಧಾರ್ಥನಾಥ್‌ ಸಿಂಗ್‌ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದವರು. ಈ ನಾಲ್ವರೂ ಗೆದ್ದಿದ್ದಾರೆ.

ಸಮಾಜವಾದಿ ಪಾರ್ಟಿ ಮೂವರಿಗೆ ಟಿಕೆಟ್‌ ನೀಡಿತ್ತು. ಮುಲಾಯಂ ಸಿಂಗ್‌ ಅವರ ತಮ್ಮ ಶಿವಪಾಲ್‌ ಯಾದವ್‌, ಸೊಸೆ ಅಪರ್ಣಾ ಯಾದವ್‌, ಅಖಿಲೇಶ್‌ ಸೋದರ ಸಂಬಂಧಿ ಅನುರಾಗ್‌ ಯಾದವ್‌ರ ಪೈಕಿ ಗೆದ್ದಿದ್ದು ಶಿವಪಾಲ್‌ ಯಾದವ್‌ ಮಾತ್ರ.

ಕಾಂಗ್ರೆಸ್‌ ಮಾಜಿ ಸಿಎಂ ಕಮಲಾಪತಿ ತ್ರಿಪಾಠಿ ಅವರ ಮೊಮ್ಮಗ ಲಲಿತೇಶ್‌ಪತಿ ತ್ರಿಪಾಠಿ ಅವರಿಗೆ ಟಿಕೆಟ್‌ ನೀಡಿತ್ತಾದರೂ ಅವರು ಗೆಲ್ಲಲಿಲ್ಲ.



Viewing all articles
Browse latest Browse all 6795

Trending Articles