Quantcast
Channel: VijayKarnataka
Viewing all articles
Browse latest Browse all 6795

ವೀಸಾ ಸಿಗದ ಭಾರತ ತಂಡ ಟೂರ್ನಿಗೆ ಅಲಭ್ಯ

$
0
0

ಹೊಸದಿಲ್ಲಿ: ನಿಗದಿತ ಸಮಯಕ್ಕೆ ವೀಸಾ ಸಿಗದ ಕಾರಣ ಜರ್ಮನಿಯಲ್ಲಿ ನಡೆಯಲಿರುವ ಕೆಮಿಸ್ಟ್ರಿ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಭಾರತೀಯ ಬಾಕ್ಸರ್‌ಗಳು ಕಳೆದುಕೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಇದೇ ರೀತಿಯ ಮತ್ತೊಂದು ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ಬಾಕ್ಸರ್‌ಗಳನ್ನು ಕಳುಹಿಸಲಾಗುವುದು ಎಂದು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಭಾನುವಾರ ಭರವಸೆ ನೀಡಿದೆ.

ಇಬ್ಬರು ಏಷ್ಯನ್‌ ಯೂತ್‌ನ ಪದಕ ವಿಜೇತರು ಸೇರಿದಂತೆ 10 ಸದಸ್ಯರ ಹೊಸ ಭರವಸೆಯ ತಂಡ 44ನೇ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿ ಜರ್ಮನಿಯ ಹಾಲೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ವೀಸಾ ದೊರೆಯದ ಕಾರಣ ಪ್ರಯಾಣದ ಕನಸು ಭಗ್ನಗೊಂಡಿದೆ.

'ಈವರೆಗೆ ವೀಸಾ ದೊರೆತಿಲ್ಲ. ಏಕೆಂದರೆ ಷೇಂಗಾನ್‌ಗೆ ವೀಸಾ ಪಡೆಯಲು ವಿಳಂಬವಾಗಿ ಅರ್ಜಿ ಸಲ್ಲಿಸಲಾಗಿತ್ತು. ಹೊಸದಿಲ್ಲಿಯಿಂದಲೇ ಕೇಂದ್ರೀಕೃತ ವೀಸಾ ಪ್ರಕ್ರಿಯೆಯನ್ನು ನಡೆಸಲಾಗಿತ್ತು,ಆದರೆ ವೀಸಾ ದೊರೆತ್ತಿಲ್ಲ' ಎಂದು ಭಾರತೀಯ ಬಾಕ್ಸಿಂಗ್‌ ಸಂಸ್ಥೆಯ ಅಧ್ಯಕ್ಷ ಅಜಯ್‌ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ ''ರಾಷ್ಟ್ರೀಯ ರಾಜಧಾನಿಯಿಂದ ಭಾನುವಾರ ಎಲ್ಲಾ ಬಾಕ್ಸರ್‌ಗಳು ತವರಿಗೆ ಹಿಂದಿರುಗಿದ್ದಾರೆ. ಶೀಘ್ರದಲ್ಲಿ ಮತ್ತೊಂದು ಟೂರ್ನಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗುವುದು,'' ಎಂದು ಅವರು ಹೇಳಿದ್ದಾರೆ. ಏಷ್ಯನ್‌ ಯೂತ್‌ ಬೆಳ್ಳಿ ಪದಕ ವಿಜೇತ ಅಂಕುಶ್‌ ದಹಿಯಾ (60ಕೆಜಿ) ಮತ್ತು ರೆಯಲ್‌ ಪುರಿ (81ಕೆಜಿ) ಸೇರಿದಂತೆ 10 ಸದಸ್ಯರನ್ನು ಭಾರತ ತಂಡ ಒಳಗೊಂಡಿತ್ತು. ಕೆಮಿಸ್ಟ್ರಿ ಕಪ್‌ ಇದೇ 13ರಿಂದ 18ರವರೆಗೆ ಜರುಗಲಿದೆ.



Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>