Quantcast
Channel: VijayKarnataka
Viewing all articles
Browse latest Browse all 6795

ಕಾಂಗ್ರೆಸ್‌ ಗೆಲುವಿನಲ್ಲಿದೆ ಆಪ್‌ ಪಾಲು!

$
0
0

ಹೊಸದಿಲ್ಲಿ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುವ ಸಣ್ಣ ಲೆಕ್ಕಾಚಾರ ಇದ್ದದ್ದು ನಿಜ, ಆದರೆ ಈ ಮಟ್ಟಿನ ಭರ್ಜರಿ ಗೆಲುವು ಸಾಧಿಸಿದ್ದು ಮಾತ್ರ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದೆ. ಹಸ್ತ ಪಾಳಯ ಸಾಧಿಸಿದ ನಿರೀಕ್ಷೆ ಮೀರಿದ ಈ ಜಯಭೇರಿಯ ಹಿಂದೆ ಆಮ್‌ ಆದ್ಮಿ ಪಾರ್ಟಿ ಬಿಟ್ಟುಕೊಟ್ಟ ಮತಗಳ ಪಾಲು ಇದೆ ಎನ್ನುವುದು ಇದೀಗ ಬಹಿರಂಗಗೊಂಡ ಗುಟ್ಟು.

ಆಡಳಿತ ವಿರೋಧಿ ಅಲೆ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟಕ್ಕೆ ಮುಳುವಾಗಲಿದೆ ಎಂದು ಸಮೀಕ್ಷಾ ವರದಿಗಳು ಸಾರಿದ್ದವು. 2014ರ ಲೋಕಸಭೆ ಚುನಾವಣೆಯಲ್ಲಿ ಕಂಡ ಹಿನ್ನಡೆ ಕೂಡ ಮಿತ್ರಕೂಟದ ಸೋಲಿನ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಕಾಲಿ-ಬಿಜೆಪಿ ಬಣದ ಸೋಲು ನಿರೀಕ್ಷಿತವೇ ಆಗಿದೆ.

ಆದರೆ ಕಾಂಗ್ರೆಸ್ಸಿನ ಪ್ರಚಂಡ ಗೆಲುವು ಹಲವು ಒಳ ಎಣಿಕೆಗಳತ್ತ ಮುಖಮಾಡುವಂತೆ ಮಾಡಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ಆಪ್‌ಗೆ ಬಿಟ್ಟುಕೊಟ್ಟಿದ್ದ ಮತಗಳನ್ನು ವಿಧಾನಸಭೆ ಚುನಾವಣೆ ಹೊತ್ತಿಗೆ ಮರಳಿ ಪಡೆಯುವಲ್ಲಿ ಕಾಂಗ್ರೆಸ್‌ ಯಶಸ್ಸು ಸಾಧಿಸಿದೆ. ಅದೇ ತಾನೇ ರಚನೆಗೊಂಡಿದ್ದ ಆಪ್‌ 2014ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬಿನಾದ್ಯಂತ ಅಬ್ಬರ ಮೆರೆದಿತ್ತು. 13 ಲೋಕಸಭೆ ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಆಪ್‌ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾಂಗ್ರೆಸ್‌ ಮೂರು ಸ್ಥಾನ ಗೆಲ್ಲುವಷ್ಟರಲ್ಲಿ ಸುಸ್ತಾಗಿತ್ತು. ಅಕಾಲಿ-ಬಿಜೆಪಿ ಮಿತ್ರಕೂಟ 6 ಸ್ಥಾನ ಗೆದ್ದಿತ್ತು.

ಲೋಕಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ, ಅಕಾಲಿ-ಬಿಜೆಪಿ ಮತಗಳಿಗಿಂತ ಹೆಚ್ಚಾಗಿ ಬಾಚಿದ್ದು ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳನ್ನು. ಅಂದು ಶೇ.30ರಷ್ಟು ಮತಗಳು ಆಪ್‌ ಪಾಲಾಗಿದ್ದವು. ಇದರಲ್ಲಿ ಮೂರರಿಂದ ನಾಲ್ಕು ಪಟ್ಟು ಮತಗಳನ್ನು ಕಾಂಗ್ರೆಸ್‌ ಕಳೆದುಕೊಂಡಿತ್ತು. 2014ರ ಚುನಾವಣೆ ರೀತಿಯಲ್ಲಿಯೇ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ ಮತ ಹಂಚಿಕೆ ನಡೆದಿದ್ದರೆ 117 ಸ್ಥಾನಗಳ ಪೈಕಿ ಆಪ್‌ 33 ಸ್ಥಾನ ಗೆಲ್ಲುತ್ತಿತ್ತು. ಆದರೆ ಆ 33 ವಿಧಾನಸಭೆ ಕ್ಷೇತ್ರಗಳ ಪೈಕಿ 20ನ್ನು ಕಾಂಗ್ರೆಸ್‌ ಗೆದ್ದುಕೊಂಡಿತು. ಉಳಿದವುಗಳ ಪೈಕಿ ಎರಡು ಸ್ಥಾನ ಅಕಾಲಿ-ಬಿಜೆಪಿ ಕೂಟ ದಕ್ಕಿಸಿಕೊಂಡಿತು. ಅಂತಿಮವಾಗಿ ಆಪ್‌ ಪಾಲಿಗೆ ಉಳಿದದ್ದು 9 ಸೀಟು. ಇವುಗಳೊಂದಿಗೆ ಆಪ್‌ ಒಟ್ಟಾರೆ ಸಾಧನೆ 20ಕ್ಕೆ ಕೊನೆಗೊಂಡಿತು.

ಇಲ್ಲಿ ಆಪ್‌ ಪ್ರಾಬಲ್ಯದ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಗೆದ್ದುಕೊಂಡದ್ದೇ ಕಾಂಗ್ರೆಸ್‌ನ ಭರ್ಜರಿ ಗೆಲುವಿಗೆ ನಾಂದಿಯಾಯಿತು. ಒಟ್ಟಾರೆ ಅಂಕಿ ಸಂಖ್ಯೆಗಳ ಪ್ರಕಾರ 2014ರ ಚುನಾವಣೆಯಲ್ಲಿ ಆಪ್‌ ಪಾಲಾಗಿದ್ದ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳು ಮರಳಿ ಕೈಸೇರಿದ್ದರಿಂದ ಫಲಿತಾಂಶ ಬದಲಾಯಿತು ಎನ್ನುವುದು ರಾಜಕೀಯ ವಿಶ್ಲೇಷಕರ ವಿವರಣೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>