ಶನಿವಾರ ಕೋರ್ಟ್ ವಿಚಾರಣೆ ಎದುರಿಸಿ ನೇರವಾಗಿ ಎಐಸಿಸಿ ಕಚೇರಿಗೆ ಆಗಮಿಸಿದ ಉಭಯ ನಾಯಕರು, ಈ ಪ್ರಕರಣದ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ. ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
'ಸ್ವಚ್ಛ ಮಸ್ಸಿನಿಂದ ನಾವಿಂದು ನ್ಯಾಯಾಲಯಕ್ಕೆ ಹಾಜರಾಗಿದ್ದೆವು. ಈ ನೆಲದ ಕಾನೂನಿನಿಗೆ ಬದ್ಧನಾಗುವ ಯಾವುದೇ ನಾಗರಿಕ ಮಾಡುವ ಕೆಲಸವನ್ನೇ ನಾವು ಮಾಡಿದ್ದೇವೆ. ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಅದರಲ್ಲಿ ತಾರತಮ್ಯವೇ ಇಲ್ಲ. ಸತ್ಯ ಹೊರಬೀಳುವ ಬಗ್ಗೆ ತಮಗೆ ಯಾವುದೇ ಅನುಮಾನಗಳಿಲ್ಲ,' ಎಂದು ಸೋನಿಯಾ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಪಕ್ಷಗಳ ಮೇಲೆ ನೇರ ಟಾರ್ಗೆಟ್ ಮಾಡಿರುವ ಕೇಂದ್ರ ಸರಕಾರ, ವಿವಿಧ ತನಿಖಾ ಏಜೆನ್ಸಿಗಳನ್ನು ಸಂಪೂರ್ಣ ಬಳಸಿಕೊಳ್ಳುತ್ತಿದೆ. ಇದಕ್ಕೆಲ್ಲಾ ಅಂಜುವ ಪ್ರಶ್ನೆಯೇ ಇಸ್ಸ. ನಮ್ಮ ಹೋರಾಟ ಮುಂದುವರಿಯಲಿದೆ. ಈ ಪ್ರಕರಣವನ್ನು ಕೋರ್ಟ್ಗೆ ಎಳೆದಿರುವ ಜನರ ಉದ್ದೇಶ ಏನೆಂಬುದು ತಮಗೆ ಗೊತ್ತಿದೆ ಎಂದು ಸೋನಿಯಾ, ಸುಬ್ರಮಣ್ಯಂ ಸ್ವಾಮಿ ಅವರ ಹೆಸರು ಪ್ರಸ್ತಾಪಿಸದೆ ಸೂಕ್ಷ್ಮವಾಗಿ ತಿಳಿಸಿದರು.
ಈ ಜನರು ಬಹಳ ದಿನಗಳಿಂದ ತಮ್ಮ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣಲಾರರು ಎಂದು ಸೋನಿಯಾ ತಿಳಿಸಿದರು.
ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, 'ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿರುವ ಪ್ರಧಾನಿ ಈ ಮೂಲಕ ತಮ್ಮನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಮಣಿಸಬಹುದು ಎಂದುಕೊಂಡಿದ್ದಾರೆ. ಇದಕ್ಕೆಲ್ಲಾ ತಲೆಬಾಗುವ ಪ್ರಶ್ನೆಯೇ ಇಲ್ಲ. ಾಂಗ್ರೆಸ್ ಪಕ್ಷ ಬಡವರ ವಿರುದ್ಧ ಹೋರಾಟ ಮುಂದುವರಿಸಲಿದೆ,' ಎಂದರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸೋನಿಯಾ ಮತ್ತು ರಾಹುಲ್ ಬೆಂಬಲಿಸಲು ಕಾಂಗ್ರೆಸ್ ಒಗ್ಗಟ್ಟಾಗಿದೆ. ನಾವು ಹೋರಾಡುತ್ತೇವೆ. ನಿರ್ದಿಷ್ಟ ಮೌಲ್ಯಗಳಿಗಾಗಿ ಹೋರಾಡುತ್ತಾ ಬಂದಿರುವ ಕಾಂಗ್ರೆಸ್, ಆ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಪ್ರತಿಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲು ಸರಕಾರದ ತನಿಖಾ ಏಜೆನ್ಸಿಗಳನ್ನು ಸಂಪೂರ್ಣ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.