Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ 9.3.2017

$
0
0

ಮೇಷ:- ಈ ದಿನದ ಯಾವುದೇ ಕೆಲಸ ಕಾರ್ಯಗಳಲ್ಲಿ ಆರಂಭ ಶೂರತ್ವ ಬೇಡ. ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು. ಸೋದರರೊಂದಿಗಿನ ಬಾಂಧವ್ಯ ಮರು ಹೊಂದಾಣಿಕೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಿರುವುದು.

ವೃಷಭ:- ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಕೌಟುಂಬಿಕವಾಗಿಯೂ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ. ಆರೋಗ್ಯ ಉತ್ತಮವಿರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮಿಥುನ:- ಕಷ್ಟ ನಷ್ಟ ತಾತ್ಕಾಲಿಕವಾದದ್ದು. ಕೋಪ ಮತ್ತು ವಾದ ಮಾಡುವ ಸ್ವಭಾವವನ್ನು ಕಡಿಮೆ ಮಾಡಿಕೊಂಡಲ್ಲಿ ಈ ದಿನ ಸಂತೋಷದ ಕ್ಷ ಣಗಳನ್ನು ಕಳೆಯುವಿರಿ. ಹಣದ ವಿಚಾರದಲ್ಲಿ ಜಾಗ್ರತರಾಗಿರಿ. ನಂಬಿದವರಿಂದ ಮೋಸ ಹೋಗುವ ಸಾಧ್ಯತೆಯಿದೆ.

ಕಟಕ:- ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸವನ್ನು ತಂದು ಕೊಡುವವು. ನಿಮ್ಮ ಮೇಲಧಿಕಾರಿಗಳ ಕೃಪೆ ನಿಮ್ಮ ಮೇಲಾಗುವುದು. ಮನೆಯಲ್ಲಿ ಮಡದಿ ಮಕ್ಕಳ ಮೇಲೆ ಪ್ರೀತಿ ವಿಶ್ವಾಸ ತೋರಿರಿ. ಮನೆಯಲ್ಲಿ ಶಾಂತಿ ನೆಲೆಸುವುದು.

ಸಿಂಹ:- ನೂತನ ಯೋಜನೆಗಳಿಂದ ಬದುಕಿಗೆ ಹೊಸ ಆಯಾಮ ದೊರೆಯಲಿದೆ. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಆಲಿಸುವಿರಿ. ಯೋಜನಾಬದ್ಧ ಕಾರ್ಯಗಳಲ್ಲಿ ಗೆಲುವು ಕಾಣುವುದು. ಆರ್ಥಿಕ ಸ್ಥಿತಿ ಉತ್ತಮವಿರುವುದು.

ಕನ್ಯಾ:- ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಒತ್ತಡ ಉಂಟು ಮಾಡುವುದು. ನಿಧಾನವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗಿರಿ. ಸ್ನೇಹಿತರ ಬೆಂಬಲ ನಿಮಗಿರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು.

ತುಲಾ:-ಮಾಡುವ ಕೆಲಸ ಕಾರ್ಯಗಳಲ್ಲಿ ತಾಳ್ಮೆಯಿಂದಿರಿ. ನಿಮ್ಮ ನಿಷ್ಠೆಯ ಪ್ರಯತ್ನವು ಒಳ್ಳೆಯ ಫಲಿತಾಂಶ ಕೊಡುವುದು. ವೃತ್ತಿ ರಂಗದಲ್ಲಿ ಯಶಸ್ಸನ್ನು ಹೊಂದುವಿರಿ. ಆರೋಗ್ಯದ ಕಡೆ ಗಮನವಿರಲಿ. ಪ್ರಯಾಣದಲ್ಲಿ ಎಚ್ಚರವಿರಲಿ.

ವೃಶ್ಚಿಕ:- ಭವಿಷ್ಯದ ಹೊಸ ಯೋಜನೆಗಳಿಗೆ ಇದು ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಸಾಮಾಜಿಕ ಮತ್ತು ರಾಜಕೀಯವಾಗಿ ಹೆಸರು ಗಳಿಸುವಿರಿ. ಕೌಟುಂಬಿಕ ಜೀವನ ಉತ್ತಮವಿರುವುದು.

ಧನಸ್ಸು:- ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ಮಕರ:- ಇಂದು ಒಳ್ಳೆಯ ದಿನವಾಗಿ ಪರಿವರ್ತಿಸಿಕೊಳ್ಳುವಿರಿ. ನಿಮ್ಮ ಮಾತುಗಳನ್ನು ಶತ್ರುಗಳು ಆಲಿಸುವಂತೆ ಮಾಡುವಿರಿ. ಸ್ನೇಹಿತರು ಸಕಾಲದಲ್ಲಿ ಹಣಕಾಸಿನ ವಿಷಯವಾಗಿ ಸಹಾಯ ಮಾಡುವರು. ಆರೋಗ್ಯ ಉತ್ತಮವಿರುವುದು.

ಕುಂಭ:- ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಮನೋರಂಜನೆಗಾಗಿ ಯೋಚಿಸುವ ಸಮಯವಿದು. ಹೂಡಿಕೆ ವಿಷಯದಲ್ಲಿ ಲಾಭವಾಗಲಿದೆ. ಸಂಗಾತಿಯ ಸಲುವಾಗಿ ಖರ್ಚು ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು.

ಮೀನ:- ಹೊಸ ಸಂಬಂಧವು ಏರ್ಪಡಲಿದ್ದು ಅದು ಪ್ರಮುಖ ಪ್ರಾಶಸ್ತ್ಯ ಪಡೆಯಲಿದೆ. ನೆಂಟರೊಂದಿಗೆ ತೀರ್ಥಯಾತ್ರೆಯ ಪ್ರಯಾಣಕ್ಕೆ ತಯಾರಾಗುವರು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುವುದು. ಆರ್ಥಿಕ ಸ್ಥಿತಿ ಉತ್ತಮವಿರುವುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>