Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ ಮಾರ್ಚ್‌ 8, 2017

$
0
0

ಮೇಷ:- ಆರೋಗ್ಯ ವಿಚಾರಿಸಲು ಸ್ನೇಹಿತರು ಬರುವ ಸಾಧ್ಯತೆಯಿದೆ. ಆದರೆ ಅಪರಿಚಿತ ವ್ಯಕ್ತಿಗಳ ಭೇಟಿಗೆ ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು ಅವರು ಭೂತಗನ್ನಡಿಯಲ್ಲಿ ನೋಡಿ ಅಪಪ್ರಚಾರ ಮಾಡುವರು. ರಾಜಕೀಯ ಜನರಿಗೆ ಟೀಕೆ ತಪ್ಪವು.

ವೃಷಭ:- ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಕೌಟುಂಬಿಕವಾಗಿ ಉತ್ತಮ ದಿನ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮಿಥುನ:- ಆಸ್ತಿ ವ್ಯವಹಾರಗಳು ಚರ್ಚೆ ಬರಲಿವೆ. ನಿಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿಕೊಳ್ಳಿರಿ. ಸಹೋದರರ ನಡುವೆ ವೈಷಮ್ಯ ಕಡಿಮೆ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕಟಕ:- ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಇಂದು ನೀವು ಮಾಡುವ ಕೆಲಸದಲ್ಲಿ ಪೂರ್ಣವಿಶ್ವಾಸ ತೋರಿರಿ. ಇದರಿಂದ ಒಳಿತಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣವಿರುವುದು. ಕಚೇರಿ ಕೆಲಸಗಳಲ್ಲಿನ ಬಿಕ್ಕಟ್ಟು ನಿವಾರಣೆ ಆಗಲಿದೆ. ಹಿತ ಚಿಂತಕರೊಡನೆ ಸಮಾಲೋಚನೆ ನಡೆಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:- ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಯಿದೆ. ವ್ಯಾಪಾರ-ವ್ಯವಹಾರದಲ್ಲಿ ಎಂದಿಗಿಂತ ಲಾಭಾಂಶ ಹೆಚ್ಚಾಗಲಿದೆ. ಮಡದಿ ಮಕ್ಕಳ ಜೊತೆ ಸಂತಸದ ಜೀವನವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ತುಲಾ:- ಆರ್ಥಿಕ ಅಭಿವೃದ್ಧಿ ಸ್ವಲ್ಪ ನಿಧಾನವಾದರೂ ಸಂತೃಪ್ತಿಯ ಬದುಕು ನಿಮ್ಮದಾಗುವುದು. ಹೊಸ ಹೊಸ ಆಲೋಚನೆಗಳು ನಿಮ್ಮ ಕಾರ್ಯಕ್ಷ ಮತೆಗೆ ಒರೆಗಲ್ಲಾಗಿ ನಿಲ್ಲುವುದು. ಸ್ನೇಹಿತರ ಸಹಾಯ ಉತ್ತಮವಾಗಿರುವುದು.

ವೃಶ್ಚಿಕ:- ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಮಿತ್ರರ ಸಹಕಾರವೂ ದೊರೆಯುವುದು. ಹಿರಿಯರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು.

ಧನಸ್ಸು:- ಆರೋಗ್ಯ ಉತ್ತಮವಿರುವುದು. ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ಇಂದು ನಿಮಗೆ ಸಂತೋಷದ ದಿನ. ಆದಾಗ್ಯೂ ಗುರು-ಹಿರಿಯರ ಮಾತನ್ನು ಮೀರುವುದು ಉಚಿತವಲ್ಲ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ಮಕರ:- ಉದ್ಯೋಗಿಗಳು ತಮ್ಮ ಬೇಡಿಕೆ ಈಡೇರುವುದಕ್ಕಾಗಿ ಮುಷ್ಕರ ಹೂಡುವುದು ಅನಿವಾರ್ಯವಾಗುವುದು. ಗೆಳೆಯರು ನಿಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವರು. ಸಂಜೆಯ ವೇಳೆಗೆ ಅಧಿಕಾರ ವರ್ಗದವರು ನಿಮ್ಮ ಬೇಡಿಕೆಯನ್ನು ಈಡೇರಿಸುವರು.

ಕುಂಭ:- ನೌಕರಿಯಲ್ಲಿ ಸಮಸ್ಯೆಗಳು ಎದುರಾಗುವ ಸಂಭವವಿದ್ದು ಅಧೈರ್ಯದಿಂದ ಕೂಡುವ ಕಾಲವಲ್ಲ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ:- ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವುದು. ಕಚೇರಿಯಲ್ಲಿನ ಕೆಲಸಗಾರರು ಅಸಹಕಾರವನ್ನು ನೀಡುವರು. ಆದಾಗ್ಯೂ ಸೇವಕ ಮತ್ತು ಮಾಲಕರ ನಡುವೆ ಒಪ್ಪಂದವಾಗಿ ಸುಖವಾಗಿರುವರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್