Quantcast
Channel: VijayKarnataka
Viewing all articles
Browse latest Browse all 6795

ಡೆಬಿಟ್‌ ಕಾರ್ಡ್‌ನ ಸೇವಾ ಶುಲ್ಕ ಕಡಿತ

$
0
0

ಮುಂಬಯಿ: ''ನಗದುರಹಿತ ವ್ಯವಹಾರ ನಡೆಸಲು ಸರಕಾರ ಉತ್ತೇಜಿಸುತ್ತದೆ. ಆದರೆ, ಡೆಬಿಟ್‌ ಕಾರ್ಡ್‌ ವ್ಯವಹಾರಗಳಲ್ಲಿ ಸಾಕಷ್ಟು ಹಣವನ್ನು ಬ್ಯಾಂಕ್‌ಗಳು ಕಡಿತ ಮಾಡುತ್ತವೆ,'' ಎನ್ನುವ ಗ್ರಾಹಕರ ದೂರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಂದಿಸಿದೆ.

ಡೆಬಿಟ್‌ ಕಾರ್ಡ್‌ ವ್ಯವಹಾರ ಸಂಬಂಧ ವರ್ತಕರಿಗೆ ವಿಧಿಸುವ ಶುಲ್ಕದಲ್ಲಿ(ಎಂಡಿಆರ್‌) ಕಡಿತ ಮಾಡಲು ಆರ್‌ಬಿಐ ಮುಂದಾಗಿದೆ. ಇದರಿಂದಾಗಿ ಡೆಬಿಟ್‌ ಕಾರ್ಡ್‌ನಲ್ಲಿ ವ್ಯವಹಾರ ನಡೆಸುವ ಸಣ್ಣ ವರ್ತಕರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ಹೊಸ ನಿಯಮವು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಆದರೆ, ಕ್ರೆಡಿಟ್‌ ಕಾರ್ಡ್‌ ವಹಿವಾಟಿಗೆ ಈ ರಿಯಾಯಿತಿಗಳು ಅನ್ವಯವಾಗುವುದಿಲ್ಲ.

ಸ್ವೈಪಿಂಗ್‌ ಮೆಷಿನ್‌ ಮೂಲಕ ನಡೆಯುವ ಡೆಬಿಟ್‌ ಕಾರ್ಡ್‌ ವ್ಯವಹಾರಗಳಲ್ಲಿ ವಹಿವಾಟುಗಳ ಮೊತ್ತದ ಶೇ.0.75ರಷ್ಟನ್ನು ಸೇವಾ ಶುಲ್ಕ ರೂಪದಲ್ಲಿ ಬ್ಯಾಂಕ್‌ಗಳು ಕಡಿತ ಮಾಡಿಕೊಳ್ಳುವುತ್ತಿವೆ. ಇದರ ಬದಲಿಗೆ ಇನ್ನು ಮುಂದೆ ಕೇವಲ ಶೇ. 0.40 ರಷ್ಟನ್ನು ವರ್ತಕರಿಂದ ಶುಲ್ಕ ರೂಪದಲ್ಲಿ ಸಂಗ್ರಹಿಸಲು ಆರ್‌ಬಿಐ ಸೂಚಿಸಿದೆ. ನಗದುರಹಿತ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಿಸರ್ವ್‌ ಬ್ಯಾಂಕ್‌ ಈ ಕ್ರಮ ಕೈಗೊಂಡಿದೆ. ಎಂಡಿಆರ್‌ ಕಡಿತದಿಂದ ಬ್ಯಾಂಕ್‌ಗಳಿಗೆ ಆಗುವ ನಷ್ಟವನ್ನು ಭರಿಸುವುದಾಗಿ ಆರ್‌ಬಿಐ ಹೇಳಿದೆ.

ಪ್ರಸ್ತುತ ಡೆಬಿಟ್‌ ಕಾರ್ಡ್‌ ಮೂಲಕ ನಡೆಯುವ 2 ಸಾವಿರ ರೂ.ವರೆಗಿನ ವಹಿವಾಟಿಗೆ ಶೇ.0.75ರಷ್ಟು ಹಾಗೂ 2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಶೇ.1ರಷ್ಟು ಸೇವಾ ಶುಲ್ಕ ಸಂಗ್ರಹಿಸಲಾಗುತ್ತಿದೆ.

=========

ಯಾರಿಗೆ ಅನ್ವಯ?

ಎಂಡಿಆರ್‌ ಕಡಿತದ ಪ್ರಯೋಜನವು ಸಣ್ಣ ವರ್ತಕರಿಗೆ ಅನ್ವಯವಾಗುತ್ತದೆ. ಅಂದರೆ, ವಾರ್ಷಿಕ 20 ಲಕ್ಷ ರೂ.ಒಳಗಿನ ವಹಿವಾಟು ನಡೆಸುವ ವರ್ತಕರು, ವಿಮೆ, ಮ್ಯೂಚುವಲ್‌ ಫಂಡ್ಸ್‌, ಶೈಕ್ಷ ಣಿಕ ಸಂಸ್ಥೆ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಹೊಸ ನಿಯಮ ಅನ್ವಯವಾಗುತ್ತದೆ. 'ಗ್ರಾಹಕರು ಸೇವಾ ಶುಲ್ಕ ತೆರಬೇಕಾಗಿಲ್ಲ' ಎಂಬ ಫಲಕವನ್ನು ವರ್ತಕರು ತಮ್ಮ ಅಂಗಡಿಗಳಲ್ಲಿ ನೇತು ಹಾಕಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>