Quantcast
Channel: VijayKarnataka
Viewing all articles
Browse latest Browse all 6795

ಮಾರುಕಟ್ಟೆಯಲ್ಲಿ ನೋಟು ಕೊರತೆ ಇಲ್ಲ: ಜೇಟ್ಲಿ

$
0
0

ಹೊಸದಿಲ್ಲಿ: ಚಲಾವಣೆಯಲ್ಲಿದ್ದ ಶೇ.86ರಷ್ಟು ಹಣವನ್ನು ವಾಪಸ್‌ ಪಡೆಯುವ ನೋಟು ಅಮಾನ್ಯತೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ನೋಟು ಅಮಾನ್ಯತೆ ನೀತಿ ಜಾರಿಗೊಳಿಸಿದ, ಕೆಲವೇ ವಾರಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಈಗಂತೂ ಮಾರುಕಟ್ಟೆಯಲ್ಲಿ ನೋಟಿನ ಕೊರತೆ ಇಲ್ಲವೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಎಸ್‌ಪಿಎಂಸಿಐಎಲ್‌ನ 11ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಆರ್‌ಬಿಐನ ನೋಟು ಮುದ್ರಣಾಲಯಗಳು, ಸೆಕ್ಯೂರಿಟಿ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌(ಎಸ್‌ಪಿಎಂಸಿಐಎಲ್‌) ಕಾರ್ಯ ಶ್ಲಾಘನೀಯ. ಇವು ವಿಶ್ರಾಂತಿ ಬಯಸದೇ, ಹೊಸ ನೋಟು ಮುದ್ರಣ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿವೆ. ಹಳೆಯ ನೋಟುಗಳ ಜಾಗಕ್ಕೆ ಹೊಸ ನೋಟುಗಳು ಬರುವಂತೆ ಮಾಡಿವೆ,'' ಎಂದರು.

''ವಿಶ್ವದಲ್ಲೇ ನೋಟು ಅಮಾನ್ಯತೆಯ ಬೃಹತ್‌ ಕಾರ್ಯವನ್ನು ಭಾರತ ಮಾಡಿ ಮುಗಿಸಿದೆ. ಭ್ರಷ್ಟಾಚಾರ, ಕಾಳ ಧನ ಮತ್ತು ನಕಲಿ ನೋಟು ನಿಯಂತ್ರಣಕ್ಕಾಗಿ ನೋಟು ಅಮಾನ್ಯತೆಯನ್ನು ಮಾಡಲಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಒಂದು ವರ್ಷ ಬೇಕಾಗಬಹುದು ಅಥವಾ ಕನಿಷ್ಠ 6-7 ತಿಂಗಳಾದರೂ ಬೇಕಾಗುತ್ತದೆ ಎಂದು ಕೆಲವರು ಟೀಕೆಗಳನ್ನು ಮಾಡಿದರು. ಆದರೆ, ಕೆಲವೇ ವಾರಗಳಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದಿದ್ದೇವೆ, ಇಡೀ ದೇಶದಲ್ಲಿ ಒಂದೇಒಂದು ಅಹಿತಕರ ಘಟನೆಗೆ ಆಸ್ಪದ ನೀಡದೇ, ಈ ಸಾಧನೆಯನ್ನು ಮಾಡಿದ್ದೇವೆ. ಇದಕ್ಕೆ ಆರ್‌ಬಿಐ ಮತ್ತು ಎಸ್‌ಪಿಎಂಸಿಐಎಲ್‌ನ ಮುದ್ರಣಾಲಯಗಳ ಅವಿರತ ಶ್ರಮವೇ ಕಾರಣ. ವಿಶ್ರಾಂತಿ ಪಡೆಯದೇ 24 ಗಂಟೆ ಉದ್ಯೋಗಿಗಳು ದುಡಿದಿದ್ದಾರೆ,'' ಎಂದು ಜೇಟ್ಲಿ ಹೇಳಿದರು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>