Quantcast
Channel: VijayKarnataka
Viewing all articles
Browse latest Browse all 6795

ಆಟೊಮೇಶನ್‌: ಬೆಂಗಳೂರಿನಲ್ಲಿ ಎಲ್‌ಆ್ಯಂಡ್‌ಟಿ ಲ್ಯಾಬ್‌ ಅಸ್ತಿತ್ವಕ್ಕೆ

$
0
0

* ಕೇಶವ ಪ್ರಸಾದ್‌.ಬಿ.ಕಿದೂರು
ಬೆಂಗಳೂರು:
ಅಮೆರಿಕದ ರಾಕ್‌ವೆಲ್‌ ಆಟೊಮೇಶನ್‌ ಮತ್ತು ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸವೀರ್‍ಸಸ್‌ ಬೆಂಗಳೂರಿನಲ್ಲಿ ' ಇಂಟರ್‌ ಆಫ್‌ ಎವರಿಥಿಂಗ್ಸ್‌ ಲ್ಯಾಬ್‌' ಅನ್ನು ಸ್ಥಾಪಿಸುವುದಾಗಿ ತಿಳಿಸಿದೆ.

ರಾಕ್‌ವೆಲ್‌ ಆಟೊಮೇಶನ್‌ ಉದ್ಯಮಿಗಳಿಗೆ ಆಟೊಮೇಶನ್‌ ತಂತ್ರಜ್ಞಾನವನ್ನು ಒದಗಿಸುವ ಅಮೆರಿಕ ಮೂಲದ ಕಂಪನಿಯಾಗಿದ್ದರೆ, ಎಲ್‌ಆ್ಯಂಡ್‌ಟಿ ಟೆಕ್ನಾಲಜೀಸ್‌ ಎಂಜಿನಿಯರಿಂಗ್‌ ಸಲ್ಯೂಷನ್ಸ್‌ ಅನ್ನು ಒದಗಿಸುತ್ತದೆ.

'' ಕಳೆದ 10 ವರ್ಷಗಳೀಂದ ರಾಕ್‌ವೆಲ್‌ ಆಟೊಮೇಶನ್‌ ಜತೆ ಎಲ್‌ಆ್ಯಂಡ್‌ಟಿ ಸಹಯೋಗ ಹೊಂದಿದ್ದು, ಪ್ರಾಡಕ್ಟ್ ಎಂಜಿನಿಯರಿಂಗ್‌, ಅಪ್ಲಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈಗ ಸ್ಮಾರ್ಟ್‌ ಉತ್ಪಾದನೆಯ ಸಲುವಾಗಿ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ವಲಯದಲ್ಲಿ ಸಂಶೋಧನೆ ನಡೆಸಲಿದ್ದೇವೆ. ಬೆಂಗಳೂರಿನಲ್ಲಿ ಈ ವರ್ಷ ' ಇಂಟರ್‌ನೆಟ್‌ ಆಫ್‌ ಎವರಿಥಿಂಗ್ಸ್‌ ' ಲ್ಯಾಬ್‌ ಅಸ್ತಿತ್ವಕ್ಕೆ ಬರಲಿದ್ದು, ಪವರ್‌ ಎಲೆಕ್ಟ್ರಾನಿಕ್ಸ್‌, ಎಂಟರ್‌ಪ್ರೈಸಸ್‌ ಕನೆಕ್ಟ್ ಮತ್ತು ಮೋಶನ್‌ ಕಂಟ್ರೋಲ್‌ ತಂತ್ರಜ್ಞಾನದ ಅಭಿವೃದ್ಧಿ ನಡೆಯಲಿದೆ'' ಎಂದು ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸವೀರ್‍ಸಸ್‌ನ ಸಿಇಒ ಡಾ. ಕೇಶಬ್‌ ಪಾಂಡಾ ತಿಳಿಸಿದ್ದಾರೆ.

ಆಟೊಮೇಶನ್‌ನಿಂದ ಕಾರ್ಪೊರೇಟ್‌ ವಲಯದಲ್ಲಿ ಉದ್ಯೋಗ ಕಡಿತವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಂಡಾ, '' ಆಟೊಮೇಶನ್‌ನಿಂದಾಗಿ ಜಗತ್ತಿಗೆ ಅನೇಕ ವಿಧದದಲ್ಲಿ ಪ್ರಯೋಜನವಾಗಿದೆ. ಕೈಗಾರಿಕೆ ಮತ್ತು ಬಿಸಿನೆಸ್‌ ವಲಯವಲ್ಲದೆ, ಸರಕಾರಗಳು ಕೂಡ ಈಗ ಆಟೊಮೇಶನ್‌ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸುತ್ತಿವೆ. ಆಟೊಮೇಶನ್‌ನಿಂದ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವುದು ಒಂದು ಮಿಥ್ಯೆಯಾಗಿದೆ. ವಾಸ್ತವವಾಗಿ ಇದು ಬೌದ್ಧಿಕ ಸಂಪನ್ಮೂಲದ ಸದ್ಭಳಕೆಗೆ ಅನುವು ಮಾಡಿಕೊಡುತ್ತದೆ. ಉದ್ಯೋಗಿಗಳ ಕೌಶಲ್ಯವನ್ನು ಹರಿತಗೊಳಿಸುತ್ತದೆ'' ಎಂದು ಹೇಳಿದ್ದಾರೆ.

ಸ್ಮಾರ್ಟ್‌ ಸಿಟಿಗೆ ಉಪಯುಕ್ತ:

ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸವೀರ್‍ಸಸ್‌ ರಾಕ್‌ವೆಲ್‌ ಆಟೊಮೇಶನ್‌ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸುತ್ತಿರುವ 'ಎಂಟರ್‌ನೆಟ್‌ ಆಫ್‌ ಎವರಿಥಿಂಗ್ಸ್‌ ಲ್ಯಾಬ್‌'ನಿಂದ ಸ್ಮಾರ್ಟ್‌ಸಿಟಿ ಯೋಜನೆಗಳಿಗೆ ಅಗತ್ಯವಿರುವ ನಾನಾ ಬಗೆಯ ತಂತ್ರಜ್ಞಷಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಕಂಪನಿಯ ಸಿಇಒ ಡಾ. ಕೇಶಬ್‌ ಪಾಂಡಾ ಹೇಳಿದ್ದಾರೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>