Quantcast
Channel: VijayKarnataka
Viewing all articles
Browse latest Browse all 6795

ಭರಪೂರ ಅರಿಶಿನ

$
0
0

ಚಂದ್ರು ಹಿರೇಮಠ ಮುಧೋಳ

ಸೇಲಂ ತಳಿಯ ಅರಿಶಿನವನ್ನು ಸಸಿ ನಾಟಿ- ಪಾಲಿಥಿನ್‌ ಮಲ್ಚಿಂಗ್‌- ಹನಿ ನೀರಾವರಿ ವಿಧಾನದಲ್ಲಿ ಬೆಳೆದು ಯಶ ಕಂಡಿದ್ದಾರೆ ಯುವ ರೈತ ಶ್ರೀಕಾಂತ.

ಶ್ರೀಕಾಂತ ಪರಸಪ್ಪ ಕುಂಬಾರ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದವರು. ಒಂದೂವರೆ ಎಕರೆಯಲ್ಲಿ ಅರಿಶಿನದ ಜತೆ ಹೆಬ್ಬೇವು, ನುಗ್ಗೆ ಹಾಗೂ ಚೆಂಡು ಹೂವು ಬೆಳೆದಿದ್ದಾರೆ.

ಕೋಕೋಪೀಟ್‌ ಮಾಧ್ಯಮದಲ್ಲಿ ಅರಿಶಿಣ ಬೀಜಗಳನ್ನು ಹಾಕಿ ಬೆಳೆಸಿ, ನಾಲ್ಕು ವಾರಗಳ ಬಳಿಕ ನಾಟಿ ಮಾಡಿದ್ದಾರೆ. ಸಸಿ ನಾಟಿಯಿಂದ ಗಿಡ ಬೇಗನೆ ಬೆಳೆಯುತ್ತದೆ. ಒಂದು ಸಸಿ ತಯಾರಿಸಲು ಒಂದು ರೂಪಾಯಿ ಖರ್ಚು ಬಂದಿದೆ. ಈ ವಿಧಾನದಲ್ಲಿ ಕಳೆ ಸಮಸ್ಯೆ ಕಡಿಮೆ. ಸಾಮಾನ್ಯವಾಗಿ ಎಕರೆಯಲ್ಲಿ ಅರಿಶಿನ ಬಿತ್ತನೆಗೆ 12-15 ಕ್ವಿಂಟಲ್‌ ಬೀಜ ಅಗತ್ಯ. ಆದರೆ, ಸಸಿ ನಾಟಿ ಮಾಡಿದ್ದರಿಂದ 8 ಕ್ವಿಂಟಲ್‌ ಬೀಜ ಸಾಕಾಗಿದೆ. ಬಿತ್ತನೆ ಖರ್ಚಿನಲ್ಲಿ ಎಕರೆಗೆ 20 ಸಾವಿರ ರೂ. ಉಳಿತಾಯವಾಗಿದೆ ಎನ್ನುತ್ತಾರೆ ಶ್ರೀಕಾಂತ ಕುಂಬಾರ.

ಹೊದಿಕೆ

ಪಾಲಿಥಿನ್‌ ಹೊದಿಕೆ ಸಾವಯವ ತತ್ವಕ್ಕೆ ವಿರುದ್ಧವೇ. ಆದರೆ, ಇದರಿಂದ ಅನೇಕ ಉಪಯೋಗಗಳಿವೆ. ಮುಖ್ಯವಾಗಿ ಕಳೆ ನಿರ್ವಹಣೆ ಖರ್ಚು ಶೇ.60-70ರಷ್ಟು ಉಳಿತಾಯವಾಗುತ್ತದೆ.

ಬೆಳೆಗೆ ಅಲ್ಪ ನೀರು ಸಾಕು. ನೀರು ಆವಿಯಾಗುವ ಪ್ರಮಾಣ ತೀರಾ ಕಡಿಮೆ. ಅರಿಶಿನ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ಉಣಿಸುತ್ತಾರೆ. ನೀರು ಉಳಿಯುವ ಜತೆಗೆ ರೋಗ ಪ್ರಮಾಣ ಕಡಿಮೆ. ನೀರು ಕಟ್ಟುವ ಶ್ರಮವಿಲ್ಲ. ಅಧಿಕ ಇಳುವರಿಗೆ ಸಹಕಾರಿ.

ಒಂದೂವರೆ ಎಕರೆಗೆ 30 ಟನ್‌ ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ಜತೆಗೆ ದ್ರವಗೊಬ್ಬರ, ರಂಜಕ ಕರಗಿಸುವ ಪಿಎಸ್‌ಬಿ ಮತ್ತು ಅಝೋಸ್ಟರಿಲ್ಲಂ ಜೀವಾಣು ಗೊಬ್ಬರು ಕೊಟ್ಟಿದ್ದಾರೆ. ಇವನ್ನು ಒಂದೊಂದು ತಿಂಗಳ ಅಂತರದಲ್ಲಿ ಮೂರು ಬಾರಿ ನೀಡಿದ್ದಾರೆ.

ಗುಣಮಟ್ಟದ ಬಿತ್ತನೆ ಗಡ್ಡೆ ಬಳಸಿರುವುದರಿಂದ ಗಡ್ಡೆ ಕಳೆ ರೋಗ ಸಮಸ್ಯೆ ಬಂದಿಲ್ಲ. ಅರಿಶಿನ ಬೆಳೆಯ ಮೊದಲು ಇದೇ ಹೊಲದಲ್ಲಿ ಚೆಂಡು ಹೂವು ಮತ್ತು ಗೋಧಿ ಬೆಳೆದು ಬೆಳೆ ಬದಲಾವಣೆ ಮಾಡಿಕೊಂಡಿದ್ದರೆ. ಭೂಮಿಗೆ ಮೂರು ತಿಂಗಳು 'ಬೆಳೆ ರಜೆ' ಕೊಟ್ಟು ಉಳಿಮೆ ಮಾಡಿ ಬಲಿಸಿಕೊಂಡಿದ್ದಾರೆ. ಶ್ರೀಕಾಂತ ಅವರು ಅರಿಶಿನ ಗಿಡ ನಾಟಿ ಮಾಡಿದ್ದು ಜೂನ್‌ ತಿಂಗಳ ಮೊದಲ ವಾರ. ಒಂದೂವರೆ ಎಕರೆಗೆ 40 ಕ್ವಿಂಟಲ್‌ ಒಣ ಅರಿಶಿಣ ಸಿಕ್ಕಿದೆ.

ಜೈವಿಕ ಗೊಬ್ಬರ

ಅರಿಶಿನ ಬೆಳೆಗೆ ಹನಿ ನೀರಾವರಿ ಮೂಲಕ ಜೀವಾಮೃತವನ್ನು ತಿಂಗಳಿಗೆ ಒಂದು ಸಲ ಕೊಟ್ಟಿದ್ದಾರೆ. ಇದಲ್ಲದೇ ಮೀನಿನ ಸಾರ ನೀಡಿದ್ದಾರೆ. ಇದನ್ನು ನೀಡುವುದರಿಂದ ಗಡ್ಡೆಯಿಂದ ಬರುವ ಮರಿಗಳ ಸಂಖ್ಯೆ ವೃದ್ಧಿಯಾಗುತ್ತದೆ ಎಂಬುದು ಅವರ ಅನಿಸಿಕೆ. ಪಂಚಗವ್ಯವನ್ನು ಕೂಡ ನೀಡಿದ್ದು ಇದು ಬೆಳೆ ಪ್ರಚೋದಕವಾಗಿ ಹಾಗೂ ಬೆಳೆಗೆ ರೋಗನಿರೋಧಕ ಶಕ್ತಿ ನೀಡುತ್ತದೆ. ಇದಲ್ಲದೇ ಕಾಲಕಾಲಕ್ಕೆ ಅಗತ್ಯವಾದ ಜೈವಿಕ ಗೊಬ್ಬರ ನೀಡಿದ್ದಾರೆ.

ಇಳುವರಿ

ಎಕರೆಗೆ 20,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಹಸಿ ಅರಿಶಿನ ಕುದಿಸಿದ ನಂತರ 1 ಕೆಜಿಯಿಂದ 200 ಗ್ರಾಂ ಒಣ ಅರಿಶಿನ ಬರುತ್ತದೆ.40 ಕ್ವಿಂಟಲ್‌ ಒಣ ಅರಿಶನ ಮಾರಾಟದಿಂದ 4 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ. 1.20 ಲಕ್ಷ ರೂಪಾಯಿ ಖರ್ಚಾಗಿದ್ದು, ಉಳಿದ 2.80 ಲಕ್ಷ ರೂಪಾಯಿ ನಿವ್ವಳ ಆದಾಯ. ಹೆಚ್ಚಿನ ಮಾಹಿತಿಗೆ ಶ್ರೀಕಾಂತ ಕುಂಬಾರ ಅವರ ಮೊ. 9620208095.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>