Quantcast
Channel: VijayKarnataka
Viewing all articles
Browse latest Browse all 6795

ಆದಾಯ ವೃದ್ಧಿಸಿದ ಸಿಹಿ ಗೆಣಸು

$
0
0

ಪ್ರಮೋದ ಹರಿಕಾಂತ ಬೆಳಗಾವಿ

ಖಾನಾಪುರ ತಾಲೂಕಿನ ಮಹಿಳೆಯರು ಸ್ವ ಸಹಾಯ ಸಂಘ ರಚಿಸಿಕೊಂಡಾಗ ವಾರದ ಹಣ ಕಟ್ಟಲು ಯಜಮಾನರನ್ನು ಅವಲಂಬಿಸಬೇಕಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈ ಮಹಿಳೆಯರು ಸ್ವಂತ ಆದಾಯ ಗಳಿಸುವ ಮೂಲಕ ಕೆಲವೇ ತಿಂಗಳಲ್ಲಿ ಸ್ವಾವಲಂಬಿ ಬದುಕಿನ ದಾರಿ ಕಂಡು ಕೊಂಡಿದ್ದಾರೆ. ಬದುಕಿನಲ್ಲಿ ಸಿಹಿ ಕ್ಷಣಗಳನ್ನು ಮೂಡಿಸಿದ್ದು ಖಾನಾಪುರದ ಸಿಹಿ ಗೆಣಸು.

ಒಂದು ವರ್ಷದ ಹಿಂದೆ ಸಂಘ ರಚಿಸಿಕೊಂಡಿದ್ದ ಮಹಿಳೆಯರು ಇತರರಂತೆ ಹಣ ಉಳಿತಾಯಕಷ್ಟೇ ಸೀಮಿತವಾಗಿದ್ದರು. ಆದರೆ, ಸ್ವಂತ ಉದ್ಯೋಗ ಆರಂಭಿಸಬೇಕೆನ್ನುವ ಸದಸ್ಯರ ಉತ್ಸಾಹ ಸಿಹಿ ಗೆಣಸಿನ ಮೌಲ್ಯವರ್ಧನೆಗೆ ದಾರಿ ಮಾಡಿಕೊಟ್ಟಿದೆ. ಸಿಹಿ ಗೆಣಸಿನಿಂದ ಚಿಫ್ಸ್‌ ತಯಾರಿಸಿದ ಇವರ ಪ್ರಯೋಗ ಕೆಲವೇ ದಿನಗಳಲ್ಲಿ ಯಶಸ್ವಿಯಾಗಿ ಆದಾಯ ತಂದುಕೊಡಲು ಶುರು ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಶಿವಪಾರ್ವತಿ ಸ್ವ ಸಹಾಯ ಸಂಘ ಇಂಥದೊಂದು ಮೌಲ್ಯವರ್ಧನೆ ಮೂಲಕ ಗಮನ ಸೆಳೆದಿದೆ.

ಸುಮಾರು 25ರಿಂದ 35 ವರ್ಷದೊಳಗಿನ ಸದಸ್ಯರನ್ನೇ ಹೊಂದಿರುವ ಈ ಸಂಘ ಅತಿ ಕಡಿಮೆ ಅವಧಿಯಲ್ಲಿ ಹೆಸರು ಗಳಿಸುವ ಮೂಲಕ ಬೆಳಗಾವಿ ಜಿಲ್ಲೆಗೇ ಸಿಹಿ ಗೆಣಸಿನ ರುಚಿ ಹಬ್ಬಿಸಿದೆ. ಈಚೆಗೆ ಬೈಲಹೊಂಗಲದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಸಂಘದ ಮಹಿಳೆಯರು ಪ್ರತ್ಯೇಕ ಮಳಿಗೆ ಬಾಡಿಗೆ ಪಡೆದು ಸಾವಿರಾರು ರೂಪಾಯಿ ಮೌಲ್ಯದ ಚಿಫ್ಸ್‌ ಮಾರಿ ಸೈ ಎನಿಸಿಕೊಂಡಿದ್ದಾರೆ.

ಖಾನಾಪುರ ತಾಲೂಕಿನಲ್ಲಿ ಸಿಹಿ ಗೆಣೆಸನ್ನು ಯಥೇಚ್ಚವಾಗಿ ಬೆಳೆಯಲಾಗುತ್ತದೆ. ಆದರೆ, ಈ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಪ್ರತಿ ವರ್ಷವೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಹಿಳೆಯರು ಚಿಫ್ಸ್‌ ಮೂಲಕ ಸಿಹಿ ಗೆಣಸಿನ ಮೌಲ್ಯವರ್ಧನೆ ಮಾಡಿ ರೈತರಲ್ಲೂ ಹೊಸ ಆಶಾ ಭಾವನೆ ಮೂಡಿಸಿದ್ದಾರೆ. ಖಾರ ಮಿಶ್ರಿತ ಚಿಫ್ಸ್‌ ನಾಲಿಗೆಗೆ ಸಿಹಿ ಗೆಣಸಿನ ಹೊಸ ರುಚಿ ಪರಿಚಯಿಸಿದೆ.

ಗಳಿಕೆ ತಂದ ಗೆಣಸು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಚಿಫ್ಸ್‌ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಯೋಜನೆಯ ಸಿಬ್ಬಂದಿ ಸ್ವ ಸಹಾಯ ಸಂಘಗಳ ಬಳಿಯೇ ಹೋಗಿ ತರಬೇತಿ ನೀಡುತ್ತಿದ್ದರು. ಅದರಂತೆ ಶಿವ ಪಾರ್ವತಿ ಮಹಿಳಾ ಸಂಘಕ್ಕೂ ತರಬೇತಿ ನೀಡಿದ್ದರು. ಆದರೆ, ಇದರಲ್ಲಿಯೇ ಹೊಸತನವನ್ನು ಹುಡುಕಿದ ಮಹಿಳೆಯರು ಖಾನಾಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಿಹಿ ಗೆಣಸನ್ನು ತಮ್ಮ ಹೊಸ ಉದ್ಯೋಗಕ್ಕೆ ಬಳಸಿಕೊಂಡರು. ಚಿಫ್ಸ್‌ ತಯಾರಿಸಿ ಊರಿನಲ್ಲಿಯೇ ಮಾರಾಟ ಮಾಡಿದರು.

ಯೋಜನೆ ಕ್ಲಿಕ್‌ ಆಯಿತು. ಚಿಫ್ಸ್‌ಗೆ ಬೇಡಿಕೆ ಬರುತ್ತಿದ್ದಂತೆಯೇ ಸಂಘದ ಎಲ್ಲ ಸದಸ್ಯರ ಕೈಗೂ ಕೆಲಸ ಸಿಕ್ಕಿತು. ಕೆಲವರು ಗೆಣಸು ಕತ್ತರಿಸುವ ಕೆಲಸ ಮಾಡಿದರೆ, ಇನ್ನು ಕೆಲವರು ಅದಕ್ಕೆ ಮಸಾಲೆ ಹಚ್ಚಿದರು. ಮತ್ತೊಂದಿಷ್ಟು ಸದಸ್ಯರು ಅದನ್ನು ಎಣ್ಣೆಯಲ್ಲಿ ಕರಿದರು. 100, 200 ಗ್ರಾಂ ಲೆಕ್ಕದಲ್ಲಿ ಚಿಫ್ಸ್‌ ಪ್ಯಾಕೆಟ್‌ ಸಿದ್ಧ ಆದವು. ಗೆಣಸಿನ ಉತ್ಪನ್ನಕ್ಕೆ ಜಿಲ್ಲೆಯಲ್ಲಿ ಸಣ್ಣ ಮಾರುಕಟ್ಟೆಯೇ ನಿರ್ಮಾಣವಾಗಿದೆ ಎಂದು ಸಂಘದ ಸದಸ್ಯರು ಖುಷಿ ವ್ಯಕ್ತಪಡಿಸುತ್ತಾರೆ.

''ಎರಡು ತಿಂಗಳ ಹಿಂದೆಯಷ್ಟೇ ಆರಂಭಿಸಿದ್ದ ಉದ್ಯಮದಿಂದ ಈಗ ಆದಾಯ ಬರಲು ಆರಂಭವಾಗಿದೆ. ಆ ಆದಾಯ ಕೂಡಿಸಿ ಗೆಣಸು ಕತ್ತರಿಸಲು 10 ಸಾವಿರ ಮೌಲ್ಯದ ಯಂತ್ರ ಖರೀಸಿದ್ದೇವೆ. 100 ಗ್ರಾಂಗೆ 10 ರೂ. ಮತ್ತು 200 ಗ್ರಾಂ ಪ್ಯಾಕೆಟ್‌ಗೆ 20 ರೂ.ನಂತೆ ಮಾರುತ್ತೇವೆ. ಈಗ ದೊಡ್ಡ ಆರ್ಡರ್‌ಗಳನ್ನು ಸಹ ಪಡೆಯುತ್ತಿದ್ದೇವೆ. ತಯಾರಿಸಿದ ಉತ್ಪನ್ನ ಮಾರಲು ಸಂಘದ ಇಬ್ಬರು ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಬಂದ ಲಾಭದಲ್ಲಿ ಅರ್ಧ ಹಣ ಬಂಡವಾಳಕ್ಕೆ ಮೀಸಲಿಟ್ಟು ಉಳಿದ ಹಣವನ್ನು ಸದಸ್ಯರೆಲ್ಲ ಹಂಚಿಕೊಳ್ಳುತ್ತೇವೆ'' ಎಂದು ಸಂಘದ ಸದಸ್ಯೆ ತುಳಸಾ ಚೌಗುಲೆ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಮೊ. 9901141591.



Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>