Quantcast
Channel: VijayKarnataka
Viewing all articles
Browse latest Browse all 6795

ರುದ್ರಾಕ್ಷಿ ಯ ಮಹಿಮೆ ಅಪಾರ

$
0
0

ರುದ್ರಾಲೈಫ್‌ ಸಂಸ್ಥೆಯು ಸೆಂಟ್ರಲ್‌ ಕಾಟೇಜ್‌ ಇಂಡಸ್ಟಿ್ರೕಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಸಹಯೋಗದೊಂದಿಗೆ ಬೆಂಗಳೂರಿನ ಎರಡು ಕಡೆಗಳಲ್ಲಿ ಡಿ. 9 ರಿಂದ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟವನ್ನು ಆರಂಭಿಸಿದ್ದು ಡಿ.19ರವರೆಗೆ ನಡೆಯಲಿದೆ.

ರುದ್ರಾಲೈಫ್‌ ಸಂಸ್ಥೆಯು 2001 ರಲ್ಲಿಸ್ಥಾಪನೆಯಾಗಿದ್ದು, ಅಪ್ಪಟ ರುದ್ರಾಕ್ಷಿಗೆ ಹೆಸರುವಾಸಿಯಾಗಿದೆ. ಅನೇಕ ವರ್ಷಗಳ ಸಂಶೋಧನೆ, ವಿವಿಧ ಶಕ್ತಿಯುತ ಸಂಯೋಜನೆಯೊಂದಿಗೆ ರುದ್ರಾಲೈಫ್‌ ಅನ್ನು ಸ್ಥಾಪಿಸಲಾಗಿದೆ. ಉದಾಹರಣೆಗೆ ಸರಸ್ವತಿ ಬಂಧ, ಸ್ವಾಸ್ಥ್ಯ ಬಂಧ, ಯೂನಿಟಿ ಬಂಧ, ಕಾಳಸರ್ಪ ದೋಷ ನಿವಾರಣ್‌, ಧ್ಯಾನ ಯೋಗ ಮಾಲಾ, ಶನಿ ದೋಷ ನಿವಾರಣ್‌, ಶಿವ ಮಾಲಾ, ಮೋಹಿನಿ ಪವರ್‌ ಇತ್ಯಾದಿ. ಇದು ಅಗಾಧವಾಗಿ ಉಪಯುಕ್ತವಾಗಿದೆ ಎಂದು ಸಾಬೀತು ಆಗಿದೆ.

ಈ ರುದ್ರಾಕ್ಷಿಗೂ ಒಂದು ಕಥೆ ಇದೆ. ಶಿವನ ಕಣ್ಣೀರು ಭೂಮಿಗೆ ಬಿದ್ದಾಗ ಹಣ್ಣುಗಳನ್ನು ಹೊಂದಿದ ಮರ ಹುಟ್ಟಿತು. ಈ ರುದ್ರಾಕ್ಷಿಯು ಮಾನವಕುಲಕ್ಕೆ ಶಾಶ್ವತವಾದ ಆರ್ಶೀವಾದವನ್ನು ನೀಡುತ್ತಿದೆ. ಈತನ ಕಣ್ಣೀರು ಮತ್ತು ಪ್ರಕೃತಿ (ಶಕ್ತಿ/ನಿಸರ್ಗ)ಯ ಬೆಸುಗೆಯಿಂದ ಈ ರುದ್ರಾಕ್ಷಿಯು ಅತ್ಯಂತ ಪ್ರಬಲ ಮಣಿಗಳಾದವು. ರುದ್ರಾಕ್ಷಿಯಲ್ಲಿಪ್ರಬಲವಾದ ದೈವಿಕ ಶಕ್ತಿ ಇದೆ ಎಂಬುದು ಸಾಮಾನ್ಯ ನಂಬಿಕೆ.

ಯಶಸ್ವಿ ಸಾಧಕರು ಮತ್ತು ಮಹತ್ವಾಕಾಂಕ್ಷೆವುಳ್ಳವರು, ಉನ್ನತಮಟ್ಟಕ್ಕೆ ಹೋಗಬೇಕೆಂದು ಬಯಸುವವರು ಅಥವಾ ಒಂದು ಹಂತಕ್ಕೆ ಯಶಸ್ವಿ ಹೊಂದಿದವರು ಮಹಾಕಾವ್ಯಗಳಲ್ಲಿಮಂಗಳಕರ ಎಂದು ಪರಿಗಣಿಸಲಾದ ಎಲ್ಲಮುಖಿಯ ರುದ್ರಾಕ್ಷಿಯನ್ನು ಧರಿಸಬಹುದು. ಸಿದ್ಧ ಮಾಲಾ ರುದ್ರಾಕ್ಷಿ ಮಣಿಯು 1 ರಿಂದ 14 ಮುಖಿಯನ್ನು ಹೊಂದಿದೆ, ಗೌರಿಶಂಕರ ಮತ್ತು ಗಣೇಶ ಎಲ್ಲಗ್ರಹಗಳನ್ನು ಮತ್ತು ದೇವಾನುದೇವತೆಯನ್ನು ಪ್ರತಿನಿ-ಸುತ್ತದೆ. ಇದು ಒಂದು ಹಂತದ ಯಶಸ್ಸನ್ನು ನಿರ್ವಹಣೆ ಮಾಡಲು ಸಹಕಾರಿಯಾಗಿದೆ ಮತ್ತು ಇದು ಸಂಪೂರ್ಣ ಕುಟುಂಬಕ್ಕೆ ರಕ್ಷಣೆ ನೀಡುತ್ತದೆ. ಅಮೂಲ್ಯವಾದ ಈ ಮಣಿಯು ಕುಟುಂಬದ ಮುಂಬರುವ ಪೀಳಿಗೆಗೂ ಸಹಾಯ ಮಾಡುತ್ತದೆ. ಈ ಮಾಲೆಯನ್ನು ಧರಿಸಬಹುದು ಅಥವಾ ಪೂಜೆ ಕೋಣೆಯಲ್ಲಿಟ್ಟು ಪೂಜೆ ಮಾಡಬಹುದು ಅಥವಾ ಪಸ್‌ರ್‍ನಲ್ಲಿಇಟ್ಟುಕೊಳ್ಳಬಹುದು. ಗುಣಪಡಿಸುವಂತಹ ಗುಣವನ್ನು ಹೊಂದಿರುವ ಅಮೂಲ್ಯವಾದ ಮಾಲೆ ಇದು. ಅನೇಕ ವರ್ಷಗಳಿಂದ ಇದನ್ನು ಧರಿಸುವ ಜನರು ಇದರ ಪ್ರಭಾವಶಾಲಿ ಶಕ್ತಿಯ ಬಗ್ಗೆ ಪ್ರಶಂಸಾ ಪತ್ರಗಳನ್ನು ನೀಡಿದ್ದಾರೆ.

ರುದ್ರಾಲೈಫ್‌ ಮಾರಾಟ ಮಾಡುವ ರುದ್ರಾಕ್ಷಿ ಮಣಿಯು ಐಎಸ್‌ಒ 9001:2015 ಸರ್ಟಿಫಿಕೆಟ್‌ ಪಡೆದಿದೆ. ರುದ್ರಾಕ್ಷಿಯು ವಿದ್ಯುತ್ಕಾಂತೀಯ ಗುಣಲಕ್ಷಣಗಳನ್ನು ಹೊಂದಿದೆ ಹಾಗೂ ಇದನ್ನು ಧರಿಸಿದಾಗ ಮಾನವನ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಅನೇಕ ವೈಜ್ಞಾನಿಕ ಸಂಶೋಧನೆಯಿಂದ ತಿಳಿದುಬಂದಿದೆ. ಅನಾದಿ ಕಾಲದಿಂದಲೂ ಇದು ನೈಸರ್ಗಿಕ ಚಿಕಿತ್ಸಾ ಗುಣವನ್ನು ಹೊಂದಿದೆ ಎಂದು ಹೇಳಲಾಗಿದ್ದು ಆತ್ಮವಿಶ್ವಾಸ, ಬೆಳವಣಿಗೆ, ಅ-ಕ ರಕ್ತದೊತ್ತಡ, ಒತ್ತಡ ಮತ್ತು ಆತಂಕವನ್ನು ನಿಯಂತ್ರಣದಲ್ಲಿಡುತ್ತದೆ, ಅಧ್ಯಾತ್ಮಿಕತೆ, ವೈವಾಹಿಕ/ಕುಟುಂಬವನ್ನು ಆನಂದದಲ್ಲಿಡುತ್ತದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>