Quantcast
Channel: VijayKarnataka
Viewing all articles
Browse latest Browse all 6795

ಧನೂರಾಶಿಗೆ ಶನಿಯ ಪ್ರವೇಶ: ನಿಮ್ಮ ರಾಶಿಯ ಮೇಲೇನು ಪ್ರಭಾವ

$
0
0

ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್‌

ಜನವರಿ 26 ರಿಂದ ಜನವರಿ 24, 2020ರವರೆಗೆ ಸುಮಾರು ಮೂರು ವರ್ಷಗಳ ಕಾಲ ಶನಿಯು ಧನುರ್‌ ರಾಶಿಯಲ್ಲಿ ಸಂಚರಿಸುತ್ತಾನೆ. ತುಲಾ ರಾಶಿಯವರಿಗೆ ಏಳರಾಟ ಶನಿ ಬಿಡುಗಡೆಯಾಗುತ್ತದೆ. ಆದರೆ ವೃಶ್ಚಿಕ, ಧನು, ಮಕರ ರಾಶಿಯವರಿಗೆ ಸಾಡೇಸಾತಿ ಪ್ರಭಾವ ಇರುತ್ತದೆ. ಶನಿ ಮೂರು, ಆರು ಮತ್ತು ಹನ್ನೊಂದನೆ ರಾಶಿಯವರಿಗೆ ಒಳ್ಳೆಯ ಫಲ ಕೊಡುತ್ತಾನೆ. ಉಳಿದ ಸ್ಥಾನಗಳಲ್ಲಿ ಒಳ್ಳೆಯ ಫಲ ಕೊಡುವುದಿಲ್ಲ. ಈ ಸಂದರ್ಭದಲ್ಲಿ ದ್ವಾದಶರಾಶಿಗಳ ಫಲಾಫಲಗಳು ಹೀಗಿವೆ.

ಮೇಷ - ನವಮ ಶನಿಯಿಂದಾಗಿ ಧಾರ್ಮಿಕ ಕಾರ್ಯಗಳಲ್ಲಿ ವಿಘ್ನ. ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ತೊಂದರೆ. ಅನಾರೋಗ್ಯ, ನ್ಯಾಯಾಲಯದಲ್ಲಿ ಅಪಜಯ ಉಂಟಾಗುವ ಸಂಭವ.

ವೃಷಭ - ಅಷ್ಟಮ ಶನಿಯಿಂದಾಗಿ ನೀಚ ಕರ್ಮದಲ್ಲಿ ಆಸಕ್ತಿ, ಸ್ತ್ರೀ ಪುರುಷರಿಂದ ಮನಸ್ಸಿಗೆ ನೋವು ಬರುತ್ತದೆ. ದುಷ್ಟ ಜನರಿಂದ ದೂರವಿರದಿದ್ದರೆ ಅಪಮಾನಕ್ಕೆ ಈಡಾಗುವ ಸಾಧ್ಯತೆ ಹೆಚ್ಚು.

ಮಿಥುನ - ಸಪ್ತಮ ಶನಿಯ ಪ್ರಭಾವದ ಕಾರಣ ಪಾಪಕರ್ಮಾಸಕ್ತರಾಗಿರುತ್ತಾರೆ. ದಾಂಪತ್ಯ ವಿರಸ, ವಿವಾಹ ವಿಳಂಬ, ಹಣಕಾಸಿನಲ್ಲಿ ತೊಂದರೆ, ಪ್ರಯಾಣದಲ್ಲಿ ಕಷ್ಟಗಳು ಬರುವ ಸಾಧ್ಯತೆ ಹೆಚ್ಚು.

ಕರ್ಕಾಟಕ - ಷಷ್ಠಮದ ಶನಿಯು ಒಳ್ಳೆಯ ಫಲವನ್ನು ನೀಡುತ್ತಾನೆ. ಶತ್ರುಗಳ ನಾಶವಾಗುತ್ತದೆ. ಕೆಲಸಗಳಲ್ಲಿ ಪ್ರಗತಿ ಇದೆ. ಕವಿಗಳಿಗೆ ಪ್ರಶಸ್ತಿ ಲಭಿಸುವ ಸಾಧ್ಯತೆ ಹೆಚ್ಚು.

ಸಿಂಹ - ಪಂಚಮ ಶನಿಯ ಕಾರಣ ಮಾನಸಿಕ ನೆಮ್ಮದಿ ಇರುವುದಿಲ್ಲ. ಹೊಟ್ಟೆಯ ತೊಂದರೆ ಕಂಡುಬರುತ್ತದೆ. ದುಷ್ಟ ಜನರ ಸಂಪರ್ಕದಿಂದ ದೂರವಿರುವುದು ಒಳಿತು.

ಕನ್ಯಾ - ಚತುರ್ಥ ಶನಿಯ ಕಾರಣ ಅಸಡ್ಡೆಯ ಮನೋಭಾವ. ತಾಮಸಿಕ ಗುಣವನ್ನು ಮೈಗೂಡಿಸಿಕೊಳ್ಳುತ್ತಾರೆ. ಮನಸ್ಸಿಗೆ ವೃಥಾ ಭಯ, ವಾಹನದಿಂದ ನಷ್ಟ, ಸಂಬಂಧಿಕರೊಂದಿಗೆ ಜಗಳವಾಡುವ ಸಾಧ್ಯತೆ ಹೆಚ್ಚು.

ತುಲಾ - ತೃತೀಯ ಶನಿ ಒಳ್ಳೆಯ ಫಲವನ್ನೇ ನೀಡುತ್ತಾನೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯವಾಗುತ್ತದೆ. ಸ್ಥಾನಮಾನ ಗೌರವ ಸಿಗುತ್ತದೆ. ದೂರ ಪ್ರಯಾಣ, ನೂತನ ಉದ್ಯಮ ಮಾಡುತ್ತಾರೆ. ಭಾಗ್ಯವಂತರಾಗುತ್ತಾರೆ.

ವೃಶ್ಚಿಕ - ದ್ವಿತೀಯ ಶನಿಯ ಕಾರಣ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಪರಸ್ಥಳಕ್ಕೆ ವಲಸೆ ಹೋಗುವ ಸಂಭವವಿದೆ. ಹಣಕಾಸಿನ ಅನಾನುಕೂಲ, ಕುಟುಂಬದಲ್ಲಿ ಕಲಹ, ಮಾನ ನಷ್ಟ ಉಂಟಾಗಬಹುದು.

ಧನು - ಜನ್ಮರಾಶಿಯ ಶನಿಯಿಂದ ಸ್ವಜನ ಮನಸ್ತಾಪ, ಬಂಧುಗಳೊಂದಿಗೆ ವಿರಸ ಕಾಣಿಸಬಹುದು. ದೇಶ ಸಂಚಾರ ಮಾಡುತ್ತಾರೆ. ಕೆಲಸ ಕಾರ‍್ಯದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯುಂಟಾಗುತ್ತದೆ.

ಮಕರ - ವ್ಯಯದ ಶನಿಯ ಕಾರಣ ಧನ ಹಾನಿಯಾಗುವ ಸಾಧ್ಯತೆ ಹೆಚ್ಚು. ವಿನಾಕಾರಣ ಸಂಚಾರ, ಕಾಲಿಗೆ ತೊಂದರೆ, ಸಂಪತ್ತಿನ ಅವನತಿ, ಕಳ್ಳರಿಂದ ತೊಂದರೆ ಬರುವ ಸಾಧ್ಯತೆಗಳಿವೆ.

ಕುಂಭ - ಏಕಾದಶ ಶನಿಯಿಂದ ಪರಸ್ತ್ರೀ, ಪರಧನ ಲಭಿಸುತ್ತದೆ. ಅಸ್ತಿಪಾಸ್ತಿ ಸಂಪಾದಿಸುತ್ತಾರೆ. ವಾಹನ ಖರೀದಿಸುತ್ತಾರೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.

ಮೀನ - ದಶಮ ಶನಿಯಿಂದ ಹಣಕಾಸಿನ ನಷ್ಟ ಉಂಟಾದರೂ ಜ್ಞಾನಾರ್ಜನೆಯಲ್ಲಿ ಒಳಿತಿದೆ. ಗೌರವ ಸ್ಥಾನಮಾನ ಲಭಿಸುತ್ತದೆ. ಹಲವು ಮಿತ್ರರಿಂದ ಲಾಭವಾಗುತ್ತದೆ. ನೀತಿವಂತರಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ.

ಕುಂಡಲಿಯೂ ಶನಿ ಪ್ರಭಾವವೂ

ಶನಿಯು ಜಾತಕದಲ್ಲಿ ಪ್ರಬಲನಾಗಿದ್ದರೆ ಅವನು ಸೂಚಿಸುವ ದುಃಖವನ್ನು ಕಡಿಮೆ ಮಾಡುತ್ತಾನೆ. ಅವನು ನೀಚನಾಗಿ ಅರಿಮೂಢನಾಗಿದ್ದರೆ ಹೆಚ್ಚಿನ ದುಃಖವನ್ನು ಕೊಡುತ್ತಾನೆ. ವ್ಯಕ್ತಿಯು ಜನನ ಕಾಲದಲ್ಲಿ ಶನಿ ಇರುವ ಸ್ಥಿತಿಯಿಂದ ಅವನ ಸುಖ ದುಃಖಾಧಿಗಳನ್ನು ಹೇಳ ಬಹುದು. ಶನಿಯ ಸ್ವಕ್ಷೇತ್ರಗಳಾದ ಮಕರ, ಕುಂಭಗಳಲ್ಲಿ ಉಚ್ಛ ಕ್ಷೇತ್ರವಾದ ತುಲಾ ರಾಶಿಯಲ್ಲಿ ಅಥವಾ ಗುರು ಕ್ಷೇತ್ರಗಳಾದ ಧನು, ಮೀನಗಳಲ್ಲಿ ಇದ್ದರೆ ವ್ಯಕ್ತಿಯ ಸ್ವಂತ ದುಃಖಾನುಭವ ಕಡಿಮೆಯಾಗುತ್ತದೆ.

ಶನಿ ಉಳಿದ ಕ್ಷೇತ್ರಗಳಲ್ಲಿದ್ದರೆ ವ್ಯಕ್ತಿಯ ಜನ್ಮರಾಶಿ ದ್ವೀತಿಯ ದ್ವಾದಶದಲ್ಲಿ ಸಂಚಾರವಾದರೆ ಅದು ಒಟ್ಟು ಏಳುವರೆ ವರ್ಷದ ಶನಿಯಿಂದ ಕೆಲವರಿಗೆ ಬಹಳ ತೊಂದರೆ ಬರುತ್ತದೆ. ನಾಲ್ಕು ಮತ್ತು ಐದನೆ ಸ್ಥಾನದಲ್ಲಿ ಸಂಚಾರ ಮಾಡುವಾಗ ಒಟ್ಟು ಐದು ವರ್ಷ ಕಾಲವನ್ನು ಪಂಚಮ ಶನಿ ಎಂದು ಕರೆಯುತ್ತಾರೆ. ಜನ್ಮರಾಶಿಯಿಂದ ಏಳು, ಎಂಟನೆ ಸ್ಥಾನದಲ್ಲಿ ಸಂಚಾರ ಮಾಡುವಾಗ ಐದು ವರ್ಷಗಳ ಕಾಲ ಅಷ್ಟಮದ ಶನಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಕಷ್ಟಗಳು ಬರುವುದು ಸಾಮಾನ್ಯ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>