Quantcast
Channel: VijayKarnataka
Viewing all articles
Browse latest Browse all 6795

ಇನ್ನೂ ಹಿಂಪಡೆಯದ ಎಟಿಎಂ ಫೀ: ಜನರಲ್ಲಿ ಆಕ್ರೋಶ

$
0
0

ಚೆನ್ನೈ: ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ನಗದು ರಹಿತ ವ್ಯವಹಾರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ವ್ಯವಹಾರವನ್ನು ಜನಪ್ರಿಯಗೊಳಿಸಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಎಟಿಎಂ ಕಾರ್ಡ್‌ಗಳನ್ನು ನಿಗದಿಗಿಂತ ಹೆಚ್ಚು ಬಳಸಿದರೆ ಹಾಕುವ ಸೇವಾ ಶುಲ್ಕ ಹಿಂಪಡೆಯಲಾಗುವುದೆಂದು ಹೇಳಿದೆ. ಇದಿನ್ನೂ ಜಾರಿಗೊಳ್ಳದ ಕಾರಣ ಜನರು ಆಕ್ರೋಶಗೊಂಡಿದ್ದಾರೆ.

'ನಿಗದಿಗಿಂತ ಎಟಿಎಂ ಕಾರ್ಡ್ ಬಳಕೆಗೆ ಡಿ.31ರ ನಂತರ ಸೇವಾ ಶುಲ್ಕ ಕಡಿತಗೊಳಿಸುವ ನಿರೀಕ್ಷೆಯಿತ್ತು, ' ಎಂದು ಎನ್‌ಸಿಆರ್ ಕಾರ್ಪೋರೇಷನ್ ಎಂಡಿ ನವ್ರೋಜ್ ದಸ್ತೂರ್ ಹೇಳಿದ್ದಾರೆ. ಈ ಬಗ್ಗೆ ಆರ್‌ಬಿಐ ಮೌನ ವಹಿಸಿದ್ದು, ಬ್ಯಾಂಕ್‌ಗಳು ಎಟಿಎಂ ಕಾರ್ಡ್ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲು ಪುನಾರಂಭಿಸಿದೆ.

'ಮೊದಲು ಐದು ಬಾರಿ ಎಟಿಎಂ ಕಾರ್ಡ್ ಬಳಕೆಗೆ ಯಾವುದೇ ಸೇವಾ ಶುಲ್ಕ ವಿಧಿಸುತ್ತಿಲ್ಲ. ಆದರೆ ಅದಕ್ಕೂ ಹೆಚ್ಚಿನ ಬಳಕೆಗೆ ಶುಲ್ಕ ವಿಧಿಸುವುದು ಬಿಡುವುದು ಗ್ರಾಹಕರ ಕಾರ್ಡ್‌ನ ವರ್ಗ ಹಾಗೂ ಬ್ಯಾಂಕ್‌ನ ವಿವೇಚನೆಗೆ ಬಿಟ್ಟಿದ್ದು. ಸಾಮಾನ್ಯವಾಗಿ ಪ್ರತೀ ಗ್ರಾಹನನೊಟ್ಟಿಗೂ ಎಟಿಎಂ ಶುಲ್ಕ ವಿಧಿಸುವ ಬಗ್ಗೆ ಪ್ರತ್ಯೇಕ ಒಪ್ಪಂದವನ್ನು ಬ್ಯಾಂಕ್‌ಗಳು ಮಾಡಿಕೊಂಡಿರುತ್ತವೆ. ಪ್ರೀಮಿಯಂ ಕಾರ್ಡ್ ಇರುವ ಗ್ರಾಹಕರಿಗೆ ಬ್ಯಾಂಕ್‌ಗಳು ನೋಟು ರದ್ದಾಗುವ ಮುಂಚಿನಿಂದಲೂ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿರಲಿಲ್ಲ,' ಎನ್ನುತ್ತಾರೆ ಎಫ್‌ಎಸ್‌ಎಸ್‌ನ ಎಟಿಎಂ ಸೇವೆ ಹಾಗೂ ವ್ಯವಹಾರ ಪ್ರಕ್ರಿಯಾ ಅಧ್ಯಕ್ಷ ವಿ.ಬಾಲಸುಬ್ರಹ್ಮಣ್ಯನ್ ಹೇಳುತ್ತಾರೆ.

'ನಿರೀಕ್ಷಿಸಿದಂತೆ ಇನ್ನೂ ಸಾರ್ವಜನಿಕರಿಗೆ ಅಗತ್ಯದಷ್ಟು ಹಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ದೇಶದ ಕೇವಲ ಶೇ.20 ಎಟಿಎಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ರತನ್ ವಾಟಲ್ ಶಿಫಾರಸು ಮಾಡಿದಂತೆ ಕಡಿಮೆ ಹಣ ವ್ಯವಹಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜನಧನ್, ಆಧಾರ್ ಹಾಗೂ ಮೊಬೈಲ್‌ಗೆ ಸಂಪರ್ಕ ಕಲ್ಪಿಸಿ ಸಾಮಾಜಿಕ ಭದ್ರತೆಯೊಂದು ನಗದು ವ್ಯವಹಾರಕ್ಕೆ ಅನುಕೂಲವಾಗುವಂತೆ ದೀಪಾಯನ್ ನಿಧಿ (Digital Payments Action Network) ರಚಿಸಲು ಸರಕಾರ ಚಿಂತಿಸಬೇಕು, ' ಎನ್ನುತ್ತಾರೆ ಬಾಲಸುಬ್ರಹ್ಮಣ್ಯನ್.

ಹೊಸ ವರ್ಷಕ್ಕಾಗಿ ಖರೀದಿಸುವ ವೇಳೆ ಗ್ರಾಹಕರಿಗೆ ವ್ಯಾಪರಸ್ಥರು ಸೇವಾ ಶುಲ್ಕವನ್ನು ಮನ್ನಾ ಮಾಡುತ್ತಿಲ್ಲ. ಎಲ್ಲ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆಗೆ ವಿಧಿಸುವ ಶುಲ್ಕವನ್ನು ಆರ್‌ಬಿಐ ಮನ್ನಾ ಮಾಡುವಂತೆ ಹೇಳಿದ್ದರೂ, ಇನ್ನೂ ಜಾರಿಗೊಂಡಿಲ್ಲವೆಂದು ಚಿನ್ನಾಭರಣ ಹಾಗೂ ಜವಳಿ ಖರೀದಿಸಿದ ಗ್ರಾಹಕರು ಆರೋಪಿಸುತ್ತಿದ್ದಾರೆ. ಆರ್‌ಬಿಐ 1000 ರೂ.ವರೆಗೆ ಮಾಡುವ ವ್ಯವಹಾರಕ್ಕೆ ವ್ಯಾಪಾರ ರಿಯಾಯಿತಿ ದರವನ್ನು ಶೇ.0.5ರಷ್ಟು ಕಡಿತಗೊಳಿಸುವಂತೆ ಹಾಗೂ 2 ಸಾವಿರ ರೂ.ವರೆಗೆ ಮಾಡಿದ ವ್ಯಾಪಾರಕ್ಕೆ ಶೇ.0.25 ಕಡಿತಗೊಳಿಸುವಂತೆ ಹೇಳಿತ್ತು. ಆದರೆ, ಈ ರಿಯಾಯತಿಯನ್ನು ಗ್ರಾಹಕರ ಮೇಲೆ ಹಾಕಬೇಕೆಂದೇನೂ ಇಲ್ಲ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>