Quantcast
Channel: VijayKarnataka
Viewing all articles
Browse latest Browse all 6795

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಸ್ಥಿರ

$
0
0

ಹೊಸದಿಲ್ಲಿ: ಪಿಪಿಎಫ್‌ ಮತ್ತು ಕಿಸಾನ್‌ ವಿಕಾಸ ಪತ್ರದಂಥ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 2017ರ ಮೊದಲ ತ್ರೈಮಾಸಿಕದಲ್ಲಿ(ಜನವರಿ-ಮಾರ್ಚ್‌) ಬದಲಿಸದೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ನೋಟು ಅಮಾನ್ಯತೆ ನಂತರ ಬ್ಯಾಂಕ್‌ಗಳಿಗೆ ಹೆಚ್ಚಿನ ಹಣ ಹರಿದು ಬಂದಿದ್ದು, ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುತ್ತಿವೆ. ಅದೇ ರೀತಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವೂ ಇಳಿಕೆಯಾಗಲಿದೆ ಎನ್ನುವ ಉಳಿತಾಯದಾರರ ಕಳವಳವನ್ನು ಸರಕಾರ ಕಡಿಮೆ ಮಾಡಿದೆ. ನೋಟು ಅಮಾನ್ಯತೆಯಿಂದ ಬಸವಳಿದ ಜನರಿಗೆ ಸರಕಾರದ ಈ ಕ್ರಮ ತುಸು ಸಮಾಧಾನ ತಂದಿದೆ.

ಉಳಿತಾಯ ಯೋಜನೆಗಳ ಬಡ್ಡಿ ದರ ಸ್ಥಿರವಾಗಿಡುವ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್‌) ಬಡ್ಡಿ ದರ ಶೇ.8 ಮುಂದುವರಿಯಲಿದೆ. 5 ವರ್ಷಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(ಎನ್‌ಎಸ್‌ಸಿ)ದ ಬಡ್ಡಿ ದರವೂ ಶೇ.8ರಲ್ಲೇ ಮುಂದುವರಿಯಲಿದೆ.

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿ ದರ ಈಗಾಗಲೇ ಜಾಸ್ತಿ ಇದ್ದು, ಅದನ್ನು ಕಡಿಮೆ ಮಾಡಬೇಕು ಎನ್ನುವುದು ಬ್ಯಾಂಕ್‌ಗಳ ಅಭಿಪ್ರಾಯವಾಗಿದೆ.

ಕಳೆದ ವರ್ಷದ ಏಪ್ರಿಲ್‌ನಿಂದ ಸರಕಾರಿ ಬಾಂಡ್‌ಗಳ ರಿಟರ್ನ್ಸ್‌ ಮತ್ತು ಹಣದುಬ್ಬರಕ್ಕೆ ಬಡ್ಡಿ ದರಗಳನ್ನು ಜೋಡಿಸಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆಯಾಗುತ್ತಾ ಬಂದಿವೆ. 2016-17ನೇ ಸಾಲಿನ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ ತ್ರೈಮಾಸಿಕದಲ್ಲಿ ಪಿಪಿಎಫ್‌ ಬಡ್ಡಿ ದರವನ್ನು ಶೇ.8.7ರಿಂದ ಶೇ.8.1ಕ್ಕೆ ಕಡಿತ ಮಾಡಲಾಗಿತ್ತು. ಹೊಸ ವರ್ಷದ ಆರಂಭದ ಜನವರಿ-ಮಾರ್ಚ್‌ ಅವಧಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಇದಕ್ಕೆ ಪೂರಕವಾಗಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್‌) ಬಡ್ಡಿ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು.

112 ತಿಂಗಳ ಮೆಚ್ಯೂರಿಟಿ ಅವಧಿಯ ಕಿಸಾನ್‌ ವಿಕಾಸ ಪತ್ರಕ್ಕೆ (ಕೆವಿಪಿ) ವಾರ್ಷಿಕ ಬಡ್ಡಿ ಶೇ.7.7

ಪಿಪಿಎಫ್‌, ಎನ್‌ಎಸ್‌ಸಿ ಬಡ್ಡಿ ದರವು ಶೇ.8ರಲ್ಲಿ ಮುಂದುವರಿಯಲಿದೆ.

ಹಿರಿಯ ನಾಗರಿಕರ ಐದು ವರ್ಷಗಳ ಉಳಿತಾಯ ಯೋಜನೆ ಬಡ್ಡಿ ದರ ಶೇ.8.5ರಷ್ಟಿದ್ದು, ಬಡ್ಡಿಯನ್ನು ತ್ರೈಮಾಸಿಕದನ್ವಯ ನೀಡಲಾಗುತ್ತದೆ.

ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಸುಕನ್ಯ ಸಮೃದ್ಧಿ ಖಾತೆಗೆ ಶೇ.8.5 ಬಡ್ಡಿ ದರವಿದೆ.

ಉಳಿತಾಯ ಖಾತೆಗಳ ಬಡ್ಡಿ ದರ ಶೇ.4ರಷ್ಟಿದ್ದು, ನಿಶ್ಚಿತ ಠೇವಣಿಗಳ ಬಡ್ಡಿ ದರ 1-5 ವರ್ಷಗಳಿಗೆ ಶೇ.7ರಿಂದ 7.8ರಷ್ಟಿದೆ. 5 ವರ್ಷಗಳ ಅವಧಿಗೆ ಬಡ್ಡಿ ದರವು ಶೇ.7.3ರಷ್ಟಿದೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>