Quantcast
Channel: VijayKarnataka
Viewing all articles
Browse latest Browse all 6795

ಬಲಿದಾನ ಬೇಡ, ಶತ್ರುಗಳನ್ನು ಕೊಲ್ಲಿ: ಪರಿಕರ್‌

$
0
0

ಪಣಜಿ: ಬಲಿದಾನದ ಬದಲು ಶತ್ರುಗಳ ಸಂಹಾರವಾಗಲಿ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಹೇಳಿದ್ದಾರೆ.

'ದೇಶಕ್ಕಾಗಿ ಯೋಧರು ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಮಾತನ್ನು ಕೇಳುತ್ತೇವೆ. ಆದರೆ, ನಾನು ಅದನ್ನು ವಿರೋಧಿಸುತ್ತೇನೆ. ಶತ್ರುಗಳಿಗೆ ಏಕೆ ಬಲಿಯಾಗಬೇಕು ? ಎದುರಾಳಿಗಳನ್ನೇ ಕೊಲ್ಲಬೇಕು. ಕಳೆದೊಂದು ವರ್ಷದ ದಾಖಲೆ ನೋಡಿ, ಫಲಿತಾಂಶ ತಿಳಿಯುವುದು,'ಎಂದು ಪರಿಕರ್‌ ಹೇಳಿದ್ದಾರೆ.

ಗೋವಾ ಬಿಜೆಪಿ ಘಟಕ ಅವರ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಕರ್‌ ಮಾತನಾಡಿದರು.

ಕಪಲಾಂಗ್‌ನ ಎನ್‌ಎಸ್‌ಸಿಎನ್‌ ಶಿಬಿರದ ಮೇಲೆ ಉಗ್ರ ದಾಳಿ ನಡೆದ ಮ್ಯಾನ್ಮಾರ್ ಗಡಿಯಲ್ಲಿ ನಡೆದ ಪ್ರತಿದಾಳಿ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ, 'ಮ್ಯಾನ್ಮಾರ್‌ ದಾಳಿ ನಡೆದ ಮೂರು ತಾಸಿನೊಳಗೆ ಸಭೆ ನಡೆಯಿತು. ಅಧಿಕೃತ ಆದೇಶದ ಮೇರೆಗೆ ಇಡೀ ಕಾರ್ಯಾಚರಣೆಯನ್ನು ರಹಸ್ಯವಾಗಿ ನಡೆಸಲಾಯಿತು. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಬೇಕು,'ಎಂದು ತಿಳಿಸಿದರು.

ನನಗೆ ಭದ್ರತೆ ಬೇಡ:

ಭದ್ರತೆ ಇಲ್ಲದೇ ಓಡಾಡುವುದು ನನಗೆ ಇಷ್ಟ ಎಂದ ರಕ್ಷಣಾ ಸಚಿವ, ' ರಕ್ಷಣೆ ಪಡೆಯುವುದು ಕೆಲವೊಮ್ಮೆ ಸುರಕ್ಷಿತವಲ್ಲ,' ಎಂದಿದ್ದಾರೆ.

'ಗಣ್ಯರು ಬಗ್ಗೆ ಪೊಲೀಸರು ವೈರ್‌ಲೆಸ್‌ ಮೂಲಕ ನಿಖರ ಮಾಹಿತಿ ಪಡೆಯುತ್ತಾರೆ. ನನಗೆ ಭದ್ರತೆ ಬೇಡವಾದ ಕಾರಣ ನನ್ನಿಂದ ದೂರ ಇರುವಂತೆ ಪೊಲೀಸರಿಗೆ ಹೇಳುತ್ತೇನೆ. ಏಕೆಂದರೆ ರಕ್ಷಣಾ ಸಚಿವರ ಮೇಲೆ ದಾಳಿ ನಡೆದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುವುದು,'ಎಂದು ಚಟಾಕಿ ಹಾರಿಸಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>