'ರೈಲ್ವೆ ಇಲಾಖೆ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಮಗು ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷ ಹೇಳಿಲ್ಲ,' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
'ಎಎಪಿ ಏಕೆ ಧರಣಿ ಮಾಡುತ್ತಿದೆ ? ದಿಲ್ಲಿಯಲ್ಲಿ ಅವರ ಪಕ್ಷ ಅಧಿಕಾರದಲ್ಲಿದೆ' ಎಂದು ಈ ಮೊದಲು ರಾಹುಲ್ ಹೇಳಿದ್ದರು.
ಈ ಮಧ್ಯೆ, ಶಾಕುರ್ ಬಸ್ತಿ ಕೊಳಗೇರಿ ಪ್ರದೇಶ ತೆರವುಗೊಳಿಸಿರುವುದನ್ನು ವಿರೋಧಿಸಿ ಎಎಪಿ ಹಾಗೂ ಟಿಎಂಸಿ ಸಂಸದರು ಸಂಸತ್ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದರು.
'1992-94ರಿಂದ ಜನ ಆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ರೈಲ್ವೆ ಒಂದೇ ನಿಮಿಷದಲ್ಲಿ ಎಲ್ಲವನ್ನು ಧರೆಗುರುಳಿಸಿತು. ಗುಡಿಸಲುಗಳನ್ನು ನಿರ್ನಾಮ ಮಾಡಿದವರು ಮನುಷ್ಯರಲ್ಲ, ಪ್ರಾಣಿಗಳು,'ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ರೈಲ್ವೆಗೆ ಸೇರಿದ ಶಾಕುರ್ ಬಸ್ತಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಗುಡಿಸಲುಗಳನ್ನು ತೆರವುಗೊಳಿಸುವ ವೇಳೆ ಆಕಸ್ಮಿಕವಾಗಿ ಮಗು ಮೃತಪಟ್ಟಿರುವ ವಿಚಾರ ಕೇಂದ್ರ ಹಾಗೂ ದಿಲ್ಲಿ ಸರಕಾರದ ನಡುವೆ ಜಟಾಪಟಿಗೆ ಕಾರಣವಾಗಿದೆ.
ಹೊಸದಿಲ್ಲಿ: ದಿಲ್ಲಿಯ ಕೊಳಗೇರಿ ತೆರವನ್ನು ವಿರೋಧಿಸಿ ಎಎಪಿ ನಡೆಸಿರುವ ಪ್ರತಿಭಟನೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಉಪಾಧ್ಯಕ್ಷರ ಕಾಲೆಳೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಹುಲ್ ಇನ್ನೂ ಮಗು ಎಂದಿದ್ದಾರೆ.