Quantcast
Channel: VijayKarnataka
Viewing all articles
Browse latest Browse all 6795

ಕಂಗುಲಾಬಿ ಮಿಡಿದ ಮನ

$
0
0

ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಆ ಕೊರತೆಯನ್ನು ನೀಗಿಸಲು ತಯಾರಾಗುತ್ತಿದೆ ಕೆಂಗುಲಾಬಿ ಚಿತ್ರ. ಹಲವು ಪ್ರಶಸ್ತಿಗಳನ್ನು ಪಡೆದಿರುವ ಈ ಕಾದಂಬರಿಯಲ್ಲಿ ವೇಶ್ಯಯ ಬದುಕಿನ ಕಣ್ಣೀರಿನ ಕತೆಯಿದೆ. ಉತ್ತರ ಕರ್ನಾಟಕದ ಹಳ್ಳಿಯಿಂದ ಪ್ರಾರಂಭವಾಗುವ ಕತೆಯು ಮುಂಬಯಿಯ ರೆಡ್‌ಲೈಟ್‌ ಏರಿಯಾಗೆ ತಲುಪುವ ಹೊತ್ತಿಗೆ ನಾನಾ ತಿರುವುಗಳನ್ನು ಪಡೆಯುತ್ತದೆ. ಅಲ್ಲದೇ, ಕರಾಳ ಮುಖಗಳನ್ನು ಬಿಚ್ಚಿಡುವ ಅನೇಕ ಘಟನೆಗಳು ಇಲ್ಲಿವೆ.

ಕಾದಂಬರಿಯ ಪರಿಸರದಲ್ಲೇ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಿನಿಮಾದಲ್ಲಿ ಮುತ್ತು ಕಟ್ಟುವ ದೃಶ್ಯವಿದ್ದು ಆ ಸಂದರ್ಭದಲ್ಲಿ ಜೋಗತಿ ನೃತ್ಯ ಬಳಸಿಕೊಳ್ಳಲಾಗಿದೆ. ಬಳ್ಳಾರಿಯ ರಾಜ್ಯೊತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಮಂಜಮ್ಮ ಜೋಗ್ತಿ ಮತ್ತು ತಂಡದವರಿಂದ ಚೌಡ್ಕಿ ಪದ ಮತ್ತು ಜೋಗ್ತಿ ನೃತ್ಯವನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.

ದೇವದಾಸಿಯಿಂದ ಕಾಲ್‌ಗರ್ಲ್‌ವರೆಗಿನ ಎಲ್ಲ ಮಗ್ಗಲುಗಳನ್ನು ಒಳಗೊಂಡಿರುವ ಚಿತ್ರಕ್ಕೆ ಶ್ರೀಶ ಜಾವೂರ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಷ್ಟೇ ಸಿನಿಮಾದ ಹಾಡೊಂದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. 'ಯಾರಾರ‍ಯರ್ದೋ ಮನದಾಗೆ ಯಾರದ್ದೋ ಕಾಳಜಿ, ಅತಿಯಾದ್ರೆ ಅದೇ ಚುಚ್ಚುವ ಸೂಜಿ' ಎಂಬ ಹಾಡಿಗೆ ಕೃತಿಕಾ, ಯೋಗಿತಾ ಮತ್ತು ಗೌರೀಶ್‌ ಅಕ್ಕಿ ಹೆಜ್ಜೆ ಹಾಕಿದ್ದಾರೆ. ಸುರೇಶ್‌ ಗುಟ್ಟಳ್ಳಿ ಅವರ ನೃತ್ಯ ನಿರ್ದೇಶನದಲ್ಲಿ ಹಾಡು ಮೂಡಿ ಬಂದಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ