Quantcast
Channel: VijayKarnataka
Viewing all articles
Browse latest Browse all 6795

ಮತ್ತೆ ಬಂದ ಮರಿ ಟೈಗರ್‌ ವಿನೋದ್‌

$
0
0

ಪ್ರಭಾಕರ್‌ ಪುತ್ರ ವಿನೋದ್‌ ಪ್ರಭಾಕರ್‌ ಸಿನಿಮಾ ರಂಗದಿಂದಲೇ ದೂರ ಉಳಿಯುತ್ತಾರೆ ಎಂಬ ಗಾಸಿಪ್‌ ಹರಡಿತ್ತು. ಕೆಲ ವರ್ಷಗಳ ಹಿಂದೆ ವಿನೋದ್‌ ಕೂಡ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಮರಿ ಟೈಗರ್‌ ಅಬ್ಬರ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ.

ಶರಣು ಹುಲ್ಲೂರು

ವಿನೋದ್‌ ಪ್ರಭಾಕರ್‌ ಸಿನಿಮಾ ರಂಗದಲ್ಲಿ ಬಿಝಿ ಆಗಿದ್ದಾರೆ. ಸದ್ಯ ಅವರು ಏಕಕಾಲಕ್ಕೆ ಎರಡು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿನೋದ್‌ ಸಿನಿಮಾ ರಂಗದಿಂದಲೇ ದೂರ ಆಗುತ್ತಿದ್ದಾರೆ ಅನ್ನುವ ಗಾಸಿಪ್‌ ಕೂಡ ಎದ್ದಿತ್ತು. ಇದಕ್ಕೆ ಪುಷ್ಠಿ ಎನ್ನುವಂತೆ ಅವರು ಕೂಡ ಸಿನಿಮಾ ಸಂಬಂಧಿ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಮರಿ ಟೈಗರ್‌ ಸ್ಯಾಂಡಲ್‌ವುಡ್‌ನಲ್ಲಿ ಘರ್ಜಿಸುತ್ತಿದೆ. ಟೈಸನ್‌ ಸಿನಿಮಾ ಯಶಸ್ವಿನ ನಂತರ ಮರಿ ಟೈಗರ್‌ ಮತ್ತು ಕ್ರ್ಯಾಕ್‌ ಸಿನಿಮಾಗಳಲ್ಲಿ ಬಿಝಿ ಆಗಿದ್ದಾರೆ ವಿನೋದ್‌.

ಮರಿ ಟೈಗರ್‌ ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ಪೋಷಿಸುತ್ತಿರುವ ಇವರು, ಭರ್ಜರಿ ಆ್ಯಕ್ಷನ್‌ ದೃಶ್ಯಗಳಿಗೆ ಜೀವ ತುಂಬಿದ್ದಾರಂತೆ. ಥೇಟ್‌ ಅಪ್ಪ (ಪ್ರಭಾಕರ್‌)ನಂತೆಯೇ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಸಾಹಸ ಪ್ರಧಾನ ಚಿತ್ರಗಳಿಗೆ ಹೆಸರಾಗಿರುವ ಪಿ.ಎನ್‌.ಸತ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕಾಗಿ ವಿನೋದ್‌ಗೆ ಸಖತ್‌ ತಾಲೀಮು ಮಾಡಿಸಿದ್ದಾರಂತೆ. ತೇಜು ನಾಯಕಿಯಾಗಿದ್ದು, ರಾಜು ತಾಳಿಕೋಟೆ, ಬುಲೆಟ್‌ ಪ್ರಕಾಶ್‌ ಸೇರಿ ಬಹುದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ.

ಟೈಸನ್‌ ನಂತರ ನಿರ್ದೇಶಕ ಕೆ.ರಾಮ್‌ ನಾರಾಯಣ್‌ ಮತ್ತೆ ವಿನೋದ್‌ಗಾಗಿ ಹೊಸ ರೀತಿಯ ಕತೆಯನ್ನು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಕ್ರ್ಯಾಕ್‌ ಎಂಬ ಹೆಸರನ್ನು ಇಟ್ಟಿದ್ದಾರೆ. 'ಇವನ್ದೇ ಸಪರೇಟ್‌ ಟ್ರ್ಯಾಕ್‌' ಎಂಬ ಟ್ಯಾಗ್‌ಲೈನ್‌ ಹೊತ್ತು ಬರುತ್ತಿರುವ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಪೊಲೀಸ್‌ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅದೂ ತನಿಖಾಧಿಕಾರಿ ಅನ್ನುವುದು ವಿಶೇಷ.

ಘಟನೆಯೊಂದರ ಬೆನ್ನತ್ತುವ ಈ ಅಧಿಕಾರಿ ತಾನೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ಎಷ್ಟೇ ಕಷ್ಟವೆನಿಸಿದರೂ, ಆ ಪ್ರಕರಣವನ್ನು ಹೇಗೆ ಬೇಧಿಸುತ್ತಾನೆ ಅನ್ನುವ ಕತೆ ಇಲ್ಲಿದೆಯಂತೆ.

ಟೈಸನ್‌ ಚಿತ್ರದಲ್ಲಿ ವಿನೋದ್‌ ಸಮರ್ಥವಾಗಿ ಪೊಲೀಸ್‌ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದರಿಂದ, ಈ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ಪಾತ್ರಕ್ಕೂ ವಿನೋದ್‌ ಭರ್ಜರಿ ತಯಾರಿ ಮಾಡಿಕೊಂಡಿದ್ದಾರಂತೆ.

ಎರಡೂ ಪಾತ್ರಗಳ ಬಗ್ಗೆ ವಿನೋದ್‌ ಹೇಳುವುದು ಹೀಗೆ, 'ನನ್ನ ಶಕ್ತಿ ಏನು ಅಂತ ಇಬ್ಬರೂ ನಿರ್ದೇಶಕರಿಗೆ ಗೊತ್ತಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಕತೆ ಬರೆದುಕೊಂಡಿದ್ದಾರೆ. ಎರಡು ವಿಭಿನ್ನ ರೀತಿಯ ಪಾತ್ರಗಳು ಆಗಿದ್ದರಿಂದ ಸಾಕಷ್ಟು ತಯಾರಿ ಮಾಡಿಕೊಂಡೆ ಪಾತ್ರ ಮಾಡುತ್ತಿದ್ದೇನೆ. ಸಿನಿಮಾ ನನ್ನ ಉಸಿರು. ನನ್ನ ತಂದೆ ನನಗೆ ಕಲಿಸಿ ಹೋಗಿದ್ದು ನಟನೆಯನ್ನು ಮಾತ್ರ. ಹಾಗಾಗಿ ಅವರ ಹೆಸರನ್ನು ಮುಂದುವರಿಸಿಕೊಂಡು ಹೋಗುವುದು ನನ್ನ ಕರ್ತವ್ಯ' ಅಂತಾರೆ ವಿನೋದ್‌.

ಎರಡು ಚಿತ್ರಗಳ ಜತೆ ಜತೆಗೆ ಮತ್ತಷ್ಟು ಕತೆಗಳನ್ನು ಕೇಳಿದ್ದಾರಂತೆ. ಮುಂದಿನ ದಿನಗಳಲ್ಲಿ ಕಂಡಿತಾ ಅಭಿಮಾನಿಗಳು ಮತ್ತಷ್ಟು ಖುಷಿ ಸುದ್ದಿಯನ್ನು ಕೊಡುತ್ತಾರಂತೆ.

ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಅಭಿಮಾನಿಗಳು ಮೆಚ್ಚಿದ್ದಾರೆ. ಅಲ್ಲದೇ ಸಾಹಸ ಪ್ರಧಾನ ಕತೆಗಳಲ್ಲೇ ನನ್ನನ್ನು ಕಾಣಲು ಅವರು ಇಚ್ಚಿಸುತ್ತಾರೆ. ಹಾಗಾಗಿ ಸದ್ಯ ಅದೇ ರೀತಿಯ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ.

- ವಿನೋದ್‌ ಪ್ರಭಾಕರ್‌, ನಟ


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>