Quantcast
Channel: VijayKarnataka
Viewing all articles
Browse latest Browse all 6795

ಈ ವಾರ ಬಿಡುಗಡೆ: ಮಮ್ಮಿ, ನೋ ಎಂಟ್ರಿ

$
0
0

ತೆರೆಗೆ ಮಮ್ಮಿ

ಹೊಸ ತಂಡದ ಮಮ್ಮಿ ಸೇವ್‌ ಮಿ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಟೀಸರ್‌ ಮತ್ತು ಟ್ರೇಲರ್‌ಗಳಿಂದಲೇ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಯುವ ನಿರ್ದೇಶಕ ಲೋಹಿತ್‌ ನಿರ್ದೇಶನದ ಚಿತ್ರವು ತಾಯಿ ಮತ್ತು ಮಗುವಿನ ಸಂಬಂಧದ ಕತೆ ಹೊಂದಿದೆ. ಅಲ್ಲದೇ, ಇದು ಹಾರರ್‌, ಸಸ್ಪೆನ್ಸ್‌ ಕತೆಯ ಚಿತ್ರವಾಗಿದೆ. ಫ್ರೆಂಚ್‌ ಶೈಲಿಯ ವಿಶೇಷ ಮನೆಯ ಸೆಟ್‌ನಲ್ಲಿ ತಯಾರಾದ ಚಿತ್ರ ಇದಾಗಿದೆ.

ನಾಲ್ಕು ಪ್ರಧಾನ ಪಾತ್ರಗಳು ಸಿನಿಮಾದಲ್ಲಿದ್ದು, ಹೊಸ ರೀತಿಯಲ್ಲಿ ಕತೆಯನ್ನು ಹೇಳುತ್ತಿದ್ದಾರಂತೆ ನಿರ್ದೇಶಕರು. ಪ್ರೇಕ್ಷಕರು ಕೇವಲ ಭಯ ಪಡುವುದು ಮಾತ್ರವಲ್ಲ, ಇಡೀ ಸಿನಿಮಾವನ್ನು ಎಂಜಾಯ್‌ ಮಾಡಲಿದ್ದಾರೆ. ಅಲ್ಲದೇ ಸಂದೇಶ ಕೂಡ ಸಿನಿಮಾದಲ್ಲಿದೆ ಅಂತಾರೆ ನಿರ್ದೇಶಕರು.

ಬೇಬಿ ಯುವಿನಾ ಪಾರ್ಥವಿ, ಐಶ್ವರ್ಯ ಶಿಂಧೋಗಿ, ವತ್ಸಲಾ ಮೋಹನ್‌, ಗೋಲಿಸೋಡಾ ಮಧುಸೂಧನ್‌ ಮತ್ತು ಸಿದ್ಲಿಂಗು ಶ್ರೀಧರ್‌ ತಾರಾಗಣದಲ್ಲಿದ್ದು, ಹೆಚ್‌.ಸಿ. ವೇಣು ಅವರ ಛಾಯಾಗ್ರಹಣ, ಬಿ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಕೆ. ರವಿಕುಮಾರ್‌ ನಿರ್ಮಾಣದ ಚಿತ್ರವಿದು.

------------------

ಫೋಟೋ : ಮಮ್ಮಿ

------------------

ನೋ ಎಂಟ್ರಿ

ನೀನಾಸಂ ಅಜಯ್‌ ಮುಖ್ಯ ಭೂಮಿಕೆಯ ನೋ ಎಂಟ್ರಿ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಮೂಲಕ ವಿಭಿನ್ನವಾದ ಕತೆಯನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕ ಯಶಸ್‌. ಅಲ್ಲದೇ, ಈ ಸಿನಿಮಾದ ಮೂಲಕ ಅಜಯ್‌ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಿರುವುದು ವಿಶೇಷ.

ಇದೊಂದು ಪತ್ರಕರ್ತನ ಬದುಕಿನ ಸುತ್ತ ಹೆಣೆದ ಕತೆ ಎನ್ನುವುದು ವಿಶೇಷ. ಇಲ್ಲಿ ಅಜಯ್‌ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನೋ ಎಂಟ್ರಿ ಪ್ರದೇಶಗಳಿಗೆ ಕಾಲಿಡಲು ಎಲ್ಲರೂ ಭಯ ಪಡುತ್ತಾರೆ. ಒಂದು ವೇಳೆ ಪ್ರವೇಶಿಸಿದರೆ, ಅವರು ನಾರ್ಮಲ್‌ ವ್ಯಕ್ತಿಗಳಾಗಿರುವುದಿಲ್ಲ. ಅಂತಹ ವ್ಯಕ್ತಿಯೇ ಸಿನಿಮಾದ ನಾಯಕ. ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಮೊನ್ನೆಯಷ್ಟೇ ಹಾಡುಗಳು ಬಿಡುಗಡೆ ಆಗಿವೆ. ನರಸಿಂಹ ಮೂರ್ತಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಅನಿಕಾ ನಾಯಕಿ.

ಈ ಸಿನಿಮಾದ ಮೂಲಕ ಮಂಜುಳಾ ಗುರುರಾಜ್‌ ಪುತ್ರ ಸಾಗರ್‌ ಗುರುರಾಜ್‌ ಸಂಗೀತ ನಿರ್ದೇಶಕನಾಗಿ ಎಂಟ್ರಿ ಪಡೆದಿದ್ದಾರೆ. ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ. ಹಿರಿಯ ನಟ ಉಮೇಶ್‌ ಸೇರಿದಂತೆ ಹಲವು ಹಿರಿಯ ನಟರು ಪಾತ್ರ ಮಾಡಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!