Quantcast
Channel: VijayKarnataka
Viewing all articles
Browse latest Browse all 6795

ಐಬಿಎಂಗೆ ಟಿಸಿಎಸ್‌ ಮಾರಾಟ, ಕಟ್ಟು ಕಥೆ

$
0
0

ಮುಂಬಯಿ:ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪನಿಯನ್ನು ಐಬಿಎಂಗೆ ಮಾರಾಟ ಮಾಡಲು ರತನ್‌ ಟಾಟಾ ಬಯಸಿದ್ದರು ಎಂಬ ಟಾಟಾ ಸನ್ಸ್‌ನ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಆರೋಪವನ್ನು ಟಿಸಿಎಸ್‌ನ ಅಂದಿನ ಮುಖ್ಯಸ್ಥ ಎಫ್‌.ಸಿ.ಕೊಹ್ಲಿ ತಳ್ಳಿ ಹಾಕಿದ್ದಾರೆ.

'ಮಿಸ್ತ್ರಿ ಹೇಳಿಕೆ ಸರಿಯಲ್ಲ. ಭಾರತಕ್ಕೆ ಐಬಿಎಂ ಕರೆತರುವ ನಿರ್ಧಾರದಲ್ಲಿ ನಾನು ಭಾಗಿಯಾಗಿದ್ದೆ. 1991-92ರಲ್ಲಿ ಐಬಿಎಂ ಅಸ್ತಿತ್ವಕ್ಕೆ ಬಂತು, ಆಗ ಭಾರತದಲ್ಲಿ ಹಾರ್ಡ್‌ವೇರ್‌ ಉದ್ದಿಮೆ ಇರಲಿಲ್ಲ. ಐಬಿಎಂಗೆ ಟಿಸಿಎಸ್‌ ಮಾರಾಟ ಮಾಡುವ ಬಗ್ಗೆ ಟಾಟಾ ಗ್ರೂಪ್‌ ಚಿಂತನೆ ನಡೆಸಿರಲಿಲ್ಲ,' ಎಂದು ಹೇಳಿಕೆಯಲ್ಲಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಅದೇ ರೀತಿ, ಯುರೋಪಿನ ಉಕ್ಕು ಕಂಪನಿಯನ್ನು(ಕೋರಸ್‌ ಗ್ರೂಪ್‌) 1200 ಡಾಲರ್‌ಗೆ ಖರೀದಿಸುವ ರತನ್‌ ಟಾಟಾ ತೀರ್ಮಾನವು ಟಾಟಾ ಸನ್ಸ್‌ಗೆ ಹೆಚ್ಚಿನ ನಷ್ಟ ತಂದಿದೆ. ನಿಜಕ್ಕೂ ಆ ಕಂಪನಿ ಖರೀದಿಗೆ ತೆರಲಾದ ಅರ್ಧ ಬೆಲೆಗೇ ಅದನ್ನು ಖರೀದಿಸಲು ಅವಕಾಶವಿತ್ತು ಎಂಬ ಮಿಸ್ತ್ರಿ ಟೀಮ್‌ ಆರೋಪವನ್ನೂ ಅಲ್ಲಗಳೆಯಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಟಾಟಾ ಸ್ಟೀಲ್‌ನ ಮಾಜಿ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಬಿ. ಮುತ್ತುರಾಮನ್‌ , ಟಾಟಾ ಸ್ಟ್ರೀಲ್‌ ಕೊರಸ್‌ ಖರೀದಿ ಕುರಿತ ಮಾಧ್ಯಮಗಳ ವರದಿ ಅಚ್ಚರಿ ಜತೆಗೆ ಖೇದ ಉಂಟುಮಾಡಿದೆ ಎಂದಿದ್ದಾರೆ.





'2007ರಲ್ಲಿ ಈ ಪ್ರಕ್ರಿಯೆ ನಡೆದಿದ್ದು. ಎಲ್ಲವೂ ಪಾರದರ್ಶಕವಾಗಿಯೇ ಇತ್ತು. 2008ರ ದಿಢೀರ್‌ ಆರ್ಥಿಕ ಹಿಂಜರಿತ ಈ ಉದ್ಯಮದ ಮೇಲೂ ಅಡ್ಡ ಪರಿಣಾಮ ಬೀರಿತು. ಆದರೆ, ಖರೀದಿ ನಿರ್ಧಾರದಿಂದಲೇ ಟಾಟಾ ಗ್ರೂಪ್‌ಗೆ ನಷ್ಟವಾಯಿತು ಎಂಬ ಆರೋಪ ಒಪ್ಪಲಾಗದು,' ಎಂದು ಅವರು ಹೇಳಿದ್ದಾರೆ.

ಆರೋಪ-ಪ್ರತ್ಯಾರೋಪ:

ಈ ಮೊದಲು, ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ ಮತ್ತು ಜಾಗ್ವಾರ್‌ ಲ್ಯಾಂಡ್‌ ರೋವರ್‌ ಬೆಳವಣಿಗೆಯಲ್ಲಿ ಮಿಸ್ತ್ರಿ ಅವರ ಪಾತ್ರವಿಲ್ಲ. ಈ ಕಂಪನಿಗಳ ಯಶಸ್ವಿನ ಹಿಂದೆ ರತನ್‌ ಟಾಟಾ ಅವರ ದೂರದೃಷ್ಟಿ, ಪ್ರಯತ್ನ ಮತ್ತು ವೈಯಕ್ತಿಕ ಪ್ರಯತ್ನಗಳಿವೆ ಎಂದು ನವೆಂಬರ್‌ 10ರಂದು ಟಾಟಾ ಸನ್ಸ್‌ ಹೊರಡಿಸಿದ್ದ ಪ್ರಕಟಣೆಯಲ್ಲಿ ದೂರಲಾಗಿತ್ತು.

ಇದಕ್ಕೆ ತಿರುಗೇಟು ನೀಡಿದ ಮಿಸ್ತ್ರಿ, ಟಿಸಿಎಸ್‌ ಮತ್ತು ಟಾಟಾ ಗ್ರೂಪ್‌ನಲ್ಲಿ ನನ್ನ ಪಾಲ್ಗೊಳ್ಳುವಿಕೆಯಿಂದಾಗಿ ಹೆಚ್ಚಿನ ಪ್ರಗತಿ ಸಾಧ್ಯವಾಯಿತು. ಇವೆರಡೂ ಕಂಪನಿಗಳೇ ಟಾಟಾದ 1000 ಕೋಟಿ ಡಾಲರ್‌ ಆದಾಯಕ್ಕೆ ಕಾರಣವಾಗಿವೆ ಎಂದಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>