Quantcast
Channel: VijayKarnataka
Viewing all articles
Browse latest Browse all 6795

ಐಬಿಎಂಗೆ ಟಿಸಿಎಸ್‌ ಮಾರಲು ರತನ್‌ ಯತ್ನ: ಮಿಸ್ತ್ರಿ

$
0
0

ಹೊಸದಿಲ್ಲಿ: ''ಟಾಟಾ ಸನ್ಸ್‌ನ ಕಿರೀಟದಂತಿರುವ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌(ಟಿಸಿಎಸ್‌) ಕಂಪನಿಯನ್ನು ಐಬಿಎಂಗೆ ಮಾರಾಟ ಮಾಡಲು ರತನ್‌ ಟಾಟಾ ಬಯಸಿದ್ದರು,'' ಎಂದು ಟಾಟಾ ಸನ್ಸ್‌ನ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕಚೇರಿಯ ಪ್ರಕಟಣೆಯಲ್ಲಿ ದೂರಲಾಗಿದೆ. ಈ ಮೂಲಕ ಮಿಸ್ತ್ರಿ ಮತ್ತು ರತನ್‌ ಟಾಟಾ ಟೀಮ್‌ ನಡುವಿನ ವಾಕ್‌ ಸಮರ ಮುಂದುವರಿದಂತಾಗಿದೆ.

''ರತನ್‌ ಟಾಟಾ ಅವರು ಮೂರು ದಶಕಗಳ ಹಿಂದೆ ಟಿಸಿಎಸ್‌ ಅನ್ನು ಐಬಿಎಂಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಜೆಆರ್‌ಡಿ ಟಾಟಾ ಮುಂದೆ ಪ್ರಸ್ತಾವನೆ ಇಟ್ಟಿಟ್ಟರು. ಟಿಸಿಎಸ್‌ನ ಅಂದಿನ ಮುಖ್ಯಸ್ಥ ಎಫ್‌.ಸಿ.ಕೊಹ್ಲಿ ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿದ್ದರು. ಈ ಸಮಯದಲ್ಲಿ ಕೊಹ್ಲಿ ಜತೆ ಟಿಸಿಎಸ್‌ ಮಾರಾಟದ ವಿಷಯ ಚರ್ಚಿಸುವುದು ಬೇಡ ಎಂದು ರತನ್‌ಗೆ ಸೂಚಿಸಿದ್ದರು. ಆಸ್ಪತ್ರೆಯಿಂದ ಹೊರಬಂದ ನಂತರ ಕೊಹ್ಲಿ ಅವರು ಜೆಆರ್‌ಡಿ ಟಾಟಾ ಜತೆ ಮಾತುಕತೆ ನಡೆಸಿ, ಟಿಸಿಎಸ್‌ಗೆ ಉಜ್ವಲ ಭವಿಷ್ಯವಿದ್ದು ಇದನ್ನು ಮಾರುವುದು ಸಲ್ಲದು ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ರತನ್‌ ಪ್ರಸ್ತಾವನೆಯನ್ನು ಜೆಆರ್‌ಡಿ ತಳ್ಳಿ ಹಾಕಿದರು. ಒಂದು ರೀತಿಯಲ್ಲಿ ಇದು ಟಿಸಿಎಸ್‌ ಪಾಲಿಗೆ ಸಾವಿನ ಸಮೀಪದ ಅನುಭವದಂತಿದೆ,'' ಎಂದು ಮಿಸ್ತ್ರಿ ಕಚೇರಿಯ ಹೇಳಿಕೆಯಲ್ಲಿ ವಿವರಿಸಲಾಗಿದೆ.

''ರತನ್‌ ಟಾಟಾ ಅವರ ಅಹಂನಿಂದಾಗಿ ಕಂಪನಿಯು ದಂಡ ತೆರಬೇಕಾಗಿದೆ. ಯುರೋಪಿನ ಉಕ್ಕು ಕಂಪನಿಯನ್ನು(ಕೋರಸ್‌ ಗ್ರೂಪ್‌) 1200 ಡಾಲರ್‌ಗೆ ಖರೀದಿಸುವ ರತನ್‌ ಟಾಟಾ ತೀರ್ಮಾನವು ಟಾಟಾ ಸನ್ಸ್‌ಗೆ ಹೆಚ್ಚಿನ ನಷ್ಟ ತಂದಿದೆ. ನಿಜಕ್ಕೂ ಆ ಕಂಪನಿ ಖರೀದಿಗೆ ತೆರಲಾದ ಅರ್ಧ ಬೆಲೆಗೇ ಅದನ್ನು ಖರೀದಿಸಲು ಅವಕಾಶವಿತ್ತು,'' ಎಂದು ಮಿಸ್ತ್ರಿ ಟೀಮ್‌ ಆರೋಪಿಸಿದೆ.

''ಕಳೆದ ತಿಂಗಳು ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನದಿಂದ ಮಿಸ್ತ್ರಿ ಅವರನ್ನು ವಜಾಗೊಳಿಸಲಾಗಿತ್ತು. ಹೆಚ್ಚಿನ ಬೆಲೆಗೆ ಕೋರಸ್‌ ಕಂಪನಿಯನ್ನು(ಈಗಿನ ಹೆಸರು ಟಾಟಾ ಸ್ಟೀಲ್‌ ಯುರೋಪ್‌ ಲಿಮಿಟೆಡ್‌) ಖರೀದಿಸಿದ್ದರಿಂದ ಹೆಚ್ಚಿನ ಹೊರೆಯು ಟಾಟಾ ಸನ್ಸ್‌ ಮೇಲೆ ಬಿತ್ತು,'' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದೇ ವೇಳೆ, ''ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ ಮತ್ತು ಟಾಟಾ ಗ್ರೂಪ್‌ನಲ್ಲಿ ನನ್ನ ಪಾಲ್ಗೊಳ್ಳುವಿಕೆಯಿಂದಾಗಿ ಹೆಚ್ಚಿನ ಪ್ರಗತಿ ಸಾಧ್ಯವಾಯಿತು. ಇವೆರಡೂ ಕಂಪನಿಗಳೇ ಟಾಟಾದ 1000 ಕೋಟಿ ಡಾಲರ್‌ ಆದಾಯಕ್ಕೆ ಕಾರಣವಾಗಿವೆ,'' ಎಂದು ಮಿಸ್ತ್ರಿ ಹೇಳಿದ್ದಾರೆ.

ಈ ಮೊದಲು, ''ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ ಮತ್ತು ಜಾಗ್ವಾರ್‌ ಲ್ಯಾಂಡ್‌ ರೋವರ್‌(ಜೆಎಲ್‌ಆರ್‌) ಬೆಳವಣಿಗೆಯಲ್ಲಿ ಮಿಸ್ತ್ರಿ ಅವರ ಪಾತ್ರವಿಲ್ಲ. ಈ ಕಂಪನಿಗಳ ಯಶಸ್ವಿನ ಹಿಂದೆ ರತನ್‌ ಟಾಟಾ ಅವರ ದೂರದೃಷ್ಟಿ, ಪ್ರಯತ್ನ ಮತ್ತು ವೈಯಕ್ತಿಕ ಪ್ರಯತ್ನಗಳಿವೆ,'' ಎಂದು ನವೆಂಬರ್‌ 10ರಂದು ಟಾಟಾ ಸನ್ಸ್‌ ಹೊರಡಿಸಿದ್ದ ಪ್ರಕಟಣೆಯಲ್ಲಿ ದೂರಲಾಗಿತ್ತು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>